Advertisement
ಸುದ್ದಿಗಳು

ಹೀಗೊಂದು ಗೃಹ ಉದ್ದಿಮೆ | ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ | ಉತ್ತಮ ಆದಾಯ ಗಳಿಸಿ…!

Share

ಅನೇಕ ಮಹಿಳೆಯರು ಕುರುಕುಲು ತಿಂಡಿ ಚಕ್ಕುಲಿ, ನಿಪ್ಪಟ್ಟು, ಕಾರಕಡ್ಡಿ ಮುಂತಾದವು ಮಾಡಿ, ಮಾರಿ ಜೀವನ ಸಾಗಿಸುತ್ತಾರೆ. ಈ ಕುರುಕುಲು ತಿಂಡಿ ತಿನಿಸುಗಳನ್ನು ಮಾಡೋದೇನೋ ಸರಿ. ಆದರೆ ಈ ಬೇಸಗೆಯ ಬಿಸಿಲಿನ ತಾಪಕ್ಕೆ ಒಲೆಯ ಮುಂದೆ ಬೇಯೋದು ಯಾರು..? ಆದರೆ ವಿಧಿ ಇಲ್ಲ.. ಜೀವನ ಸಾಗಬೇಕಲ್ಲ.. ಆದ್ರೆ ಈ ತಾಪತ್ರಯಗಳಿಗೆ ಈಗೊಂದು ಸುಲಭ ದಾರಿ ಸಿಕ್ಕಿದೆ.

ಸೂರ್ಯನ ಬೆಳಕಿನಿಂದ ಈಗ ಚಕ್ಕುಲಿಯನ್ನೂ ತಯಾರಿಸಬಹುದು.  ಹೌದು, ಸೂರ್ಯನ ಬೆಳಕಿನಿಂದ ಚಕ್ಕುಲಿ ತಯಾರಿಸುವ ವಿಶೇಷ ಸಾಧನವೊಂದನ್ನು ಆವಿಷ್ಕಾರ ಮಾಡಲಾಗಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಸೆಲ್ಕೋ ಸಂಸ್ಥೆ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಕಂಡುಹಿಡಿದೆ. ಈ ಚಕ್ಕುಲಿ ಮೇಕರ್​ನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಗಿದೆ.

ಈ ಸೋಲಾರ್ ಚಕ್ಕುಲಿ ಮೇಕರ್ ಬಳಸಿ ಒಂದೇ ಗಂಟೆಯಲ್ಲಿ 10 ಕೆಜಿ ಚಕ್ಕುಲಿಯನ್ನು ತಯಾರಿಸಬಹುದಾಗಿದೆ. ಚಕ್ಕುಲಿಯೊಂದೇ ಅಲ್ಲದೇ, ಕೋಡುಬಳೆ ಮತ್ತಿತರ ತಿಂಡಿಗಳನ್ನು ಸಹ ಈ ಸಾಧನ ಬಳಸಿ ತಯಾರಿಸಬಹುದಾಗಿದೆ.

ಈ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೂ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದೇವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.

ಸೋಲಾರ್ ಚಕ್ಕುಲಿ ಮೇಕರ್ ಯಂತ್ರವನ್ನು ಬ್ಲೂಟೂತ್ ಮೂಲಕ ಮೊಬೈಲ್ ಫೋನ್​ಗೆ ಸಂಪರ್ಕಿಸಬಹುದು. ಚಕ್ಕುಲಿ ತಯಾರಿಸುವಾಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಚಕ್ಕುಲಿ ಹಿಟ್ಟಿನ ಪ್ರಮಾಣ, ಗಾತ್ರ ಮತ್ತು ದಪ್ಪ ಮುಂತಾದವುಗಳನ್ನು ನಿರ್ಧರಿಸಬಹುದು ಎಂದು ಸೆಲ್ಕೋ ಪ್ರತಿನಿಧಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.

ಅಂದಾಜು 2.5 ಲಕ್ಷ ರೂ. ಬೆಲೆಯ ಈ ಚಕ್ಕುಲಿ ಮೇಕರ್ ಯಂತ್ರಕ್ಕೆ ಸೆಲ್ಕೋ ಶೇ.25ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಈ ಯಂತ್ರದ ಮೂಲಕ ಗ್ರಾಮೀಣ ಭಾಗದ ಉತ್ಸಾಹಿಗಳಿಗೆ ಈ ಸೋಲಾರ್ ಯಂತ್ರ ಹೊಸ ಬ್ಯುಸಿನೆಸ್ ಆರಂಬಿಸಲು ದಾರಿಯಾಗುವ ಲಕ್ಷಣವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 hours ago

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

9 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

1 day ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago