ಮೀಸಲು ಕ್ಷೇತ್ರದ ಶೋಚನೀಯ ಪರಿಸ್ಥಿತಿ ಬಗ್ಗೆ ವೈಜ್ಞಾನಿಕ ಅಧ್ಯಯನ ವರದಿ ಮಾಡಿ ಶ್ವೇತ ಪತ್ರಕ್ಕೆ ಆಮ್ ಆದ್ಮಿ ಪಾರ್ಟಿ ಒತ್ತಾಯ

September 25, 2021
8:48 PM

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ  ಕಳೆದ ಸುಮಾರು 50 ವರ್ಷಗಳಿಂದ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ  ಸುಳ್ಯದ ಶೋಷಿತ ವರ್ಗಗಳ ಶೋಚನೀಯ ಪರಿಸ್ಥಿತಿ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ವರದಿ ಮಾಡಿ ಶ್ವೇತ ಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ, ದಕ- ಉಡುಪಿ ಜಿಲ್ಲಾ ವೀಕ್ಷಕ ಅಶೋಕ್‌ ಎಡಮಲೆ ತಿಳಿಸಿದ್ದಾರೆ.

Advertisement
Advertisement

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ  ಇಂದಿಗೂ ಹಲವು ಮೂಲಭೂತ ಸಮಸ್ಯೆಗಳು ಕಂಡುಬರುತ್ತಿವೆ,ಅದರಲ್ಲೂ ಎಸ್‌ ಸಿ – ಎಸ್ಟಿ ಸಮುದಾಯಗಳಿಗೂ ಸಾಕಷ್ಟು ಅಭಿವೃದ್ಧಿ ಪರವಾದ ಯೋಜನೆಗಳು ತಲುಪಿದಂತೆ ಕಾಣುತ್ತಿಲ್ಲ., ರಸ್ತೆ, ಸೇತುವೆ, ಮನೆ , ವಿದ್ಯುತ್‌ ಸೇರಿದಂತೆ ಹಲವು ಮೂಲಭೂತ ಕೊರತೆಗಳು ಎದ್ದು ಕಾಣುತ್ತಿವೆ. ಕೆಲವೊಮ್ಮೆ ಎಸ್ಸಿ- ಎಸ್ಟಿ ಯೋಜನೆಯ ಅನುದಾನಗಳೂ ಬಳಕೆಯಾಗದೇ ಇರುವುದೂ ಕಂಡುಬಂದಿದೆ. ಅದೂ ಅಲ್ಲದೆ ಮಾದರಿಯಾಗಿರುವ ಕಾಲನಿಗಳೂ ಎದ್ದು ಕಾಣುತ್ತಿಲ್ಲ. ಹಾಗಿದ್ದರೂ ಸುಳ್ಯದ ಜನಪ್ರತಿನಿಧಿಗಳು ಮಾತನಾಡುವುದು  ಕಂಡುಬರುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ಈಚೆಗೆ ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡ ಅವರು ಸುಳ್ಯ ಮಂಡೆಕೋಲು ಗ್ರಾಮದ ಎಸ್‌ ಸಿ – ಎಸ್ಟಿ ಸಮುದಾಯಗಳ ಮನೆಗಳಿಗೆ ತೆರಳುವ ರಸ್ತೆ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದಾರೆ.

ರಾಜ್ಯವನ್ನು ಈಗ ಆಳುವ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದ, ಮುಖ್ಯಮಂತ್ರಿ, ಕೇಂದ್ರ ಮಂತ್ರಿಯಾಗಿದ್ದ ಡಿ ವಿ ಸದಾನಂದ ಗೌಡ ಅವರ ತವರು ಗ್ರಾಮ ಹಾಗೂ 27 ವರ್ಷ ಮೀಸಲು ಸುಳ್ಯ ಕ್ಷೇತ್ರದ ಶಾಸಕ, ಇದೀಗ ಸಚಿವರ ಕ್ಷೇತ್ರದ ಬಗ್ಗೆ ಸದನದಲ್ಲಿ ಬೇಡಿಕೆ ಇಟ್ಟ ಶೋಚನೀಯ ಸ್ಥಿತಿ ಬಂದಿದೆ. ಹೀಗಾಗಿ ಇಷ್ಟೂ ವರ್ಷಗಳಲ್ಲಿ  ಸುಳ್ಯ ಕ್ಷೇತ್ರ ಸುಳ್ಯದ ಶೋಷಿತ ವರ್ಗಗಳ ಶೋಚನೀಯ ಪರಿಸ್ಥಿತಿ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ವರದಿ ಮಾಡಿ ಶ್ವೇತ ಪತ್ರ ಹೊರಡಿಸಬೇಕು ಎಂದು  ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ, ದಕ- ಉಡುಪಿ ಜಿಲ್ಲಾ ವೀಕ್ಷಕ ಅಶೋಕ್‌ ಎಡಮಲೆ ತಿಳಿಸಿದ್ದಾರೆ.

ವಿಧಾನಪರಿಷತ್‌ ನಲ್ಲಿ ಮುನಿರಾಜು ಅವರು ಸುಳ್ಯದ ರಸ್ತೆ ವಿಚಾರದ ಬಗ್ಗೆ ಪ್ರಶ್ನೆ……

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group