ಸುಳ್ಯದ ವಿದ್ಯುತ್‌ ಸಮಸ್ಯೆ | 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ 5 ಹೇಳಿಕೆಗಳು….! | ಸುಳ್ಯದ ವಿದ್ಯುತ್‌ ಸಮಸ್ಯೆ ಬಗ್ಗೆ ಮಾಧ್ಯಮಗಳು ಹೇಳುವುದು ಸುಳ್ಳೋ….? ಹೇಳಿಕೆಗಳು ಸುಳ್ಳೋ ? |

July 18, 2022
10:59 PM

ಸುಳ್ಯದ ವಿದ್ಯುತ್‌ ಸಮಸ್ಯೆ ಪ್ರತೀ ವರ್ಷವೂ ಚರ್ಚೆಯಾಗುತ್ತದೆ. ಆದರೆ ಪರಿಹಾರ ಮಾತ್ರಾ ಶೂನ್ಯ. ಈ ಬಾರಿಯೂ ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಮಳೆಗಾಲದ ಈ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಎರಡು-ಮೂರು ದಿನಗಳ ಕಾಲ ಕತ್ತಲೆಯಲ್ಲಿ ಕಳೆಯುತ್ತದೆ. ಈ ನಡುವೆಯೇ ಸುಳ್ಯದ  110 ಕೆವಿ ಸಬ್‌ ಸ್ಟೇಶನ್‌ ಬಗ್ಗೆಯೂ ಚರ್ಚೆಯಾಗಿದೆ. ಇದೀಗ ಸುಳ್ಯದ ಮಾಧ್ಯಮಗಳು ಹೇಳುವುದು ಸುಳ್ಳೋ ಅಥವಾ ಹೇಳಿಕೆಗಳು ಸುಳ್ಳೋ ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಮಾಧ್ಯಮಗಳೂ ಏಕೆ ಇಂತಹ ಹೇಳಿಕೆಗಳನ್ನು ಪ್ರಶ್ನಿಸುವುದಿಲ್ಲ ಎಂದು ವಿದ್ಯುತ್‌ ಬಳಕೆದಾರರು ಕೇಳುತ್ತಾರೆ.

ಸುಳ್ಯದ ವಿದ್ಯುತ್‌ ಸಮಸ್ಯೆಗೆ ಏಕೆ ಮುಕ್ತಿ ಸಿಗುತ್ತಿಲ್ಲ ? ಹೀಗೆಂದು ಸುಳ್ಯದ ಜನರು ಕೇಳುತ್ತಾರೆ. ಇದಕ್ಕೆ ಉತ್ತರ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಆದ ಕೂಡಲೇ ಎಂದು ಮೆಸ್ಕಾಂ ಮೂಲಗಳು ಹೇಳುತ್ತವೆ. ಪ್ರತೀ ಮಳೆಗಾಲವು ಕೂಡಾ ಅಲ್ಲಲ್ಲಿ ವಿದ್ಯುತ್‌ ತಂತಿ ತುಂಡಾಗುವುದೂ ಸೇರಿದಂತೆ ಮರದ ಗೆಲ್ಲು ತಾಗುವುದರಿಂದ ಟ್ರಿಪ್‌ ಆಗಿ ವಿದ್ಯುತ್‌ ಕಡಿತ ಉಂಟಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮರ ಬಿದ್ದು ಕಂಬ ತುಂಡಾಗಿ ವಿದ್ಯುತ್‌ ಸರಬರಾಜು ಕಡಿತವಾಗುತ್ತದೆ. ಹೀಗಾಗಿ ಸುಳ್ಯಕ್ಕೆ ವಿದ್ಯುತ್‌ ಪ್ರತೀ ಮಳೆಗಾಲವೂ ಸಮಸ್ಯೆಯೇ ಆಗಿದೆ. ಆದರೆ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಆದರೆ ಸುಳ್ಯದವರೆಗಿನ ವಿದ್ಯುತ್‌ ಸರಬರಾಜು ಯಾವುದೇ ತಡೆ ಇಲ್ಲದೆ ಬರಲು ಸಾಧ್ಯವಿದೆ ಎನ್ನುವುದು  ಮೆಸ್ಕಾಂ ಮೂಲಗಳ ಅಭಿಪ್ರಾಯ.

ಹಾಗಿದ್ದರೆ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಕೆಲಸ ಏನಾಗಿದೆ ಎಂದು ಕೇಳಿದರೆ ಕಳೆದ 3 ವರ್ಷಗಳಿಂದ ಹೇಳಿಕೆಗಳು ಬರುತ್ತವೆ. ಆದರೆ ಪ್ರಗತಿ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದರೆ “ಮಾಧ್ಯಮಗಳು ಆದದ್ದು ಬರೆಯುತ್ತಿಲ್ಲ ಎನ್ನುವ ಆರೋಪ” ಕೇಳಿಬರುತ್ತದೆ. ಹಾಗಿದ್ದರೆ ಕಳೆದ ಮೂರು ವರ್ಷದಲ್ಲಿ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಸಂಬಂಧಿಸಿದ ಹೇಳಿಕೆಗಳು ಇಲ್ಲಿದೆ. ಮಾಧ್ಯಮಗಳು ಹೇಳುವುದು, ಬರೆಯುವುದು ಸುಳ್ಳೋ ಅಥವಾ ಈ ಹೇಳಿಕೆಗಳು ಸುಳ್ಳೋ ಎಂದು ಜನರು ಪ್ರಶ್ನಿಸುವಂತಾಗಿದೆ.

2019 ಮೇ 27….

110 ಕೆವಿ ಲೈನ್ ನಿರ್ಮಾಣಕ್ಕೆ ಅರಣ್ಯ ಅನುಮತಿ : ಅಂಗಾರ

14 ಜನವರಿ 2020….

110 ಕೆ.ವಿ.ಸಬ್‍ಸ್ಟೇಷನ್ ಅನುಷ್ಠಾನದ ವೇಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ : ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಶಾಸಕ ಅಂಗಾರ

23 ಜನವರಿ 2020….

110 ಕೆವಿ ಸಬ್ ಸ್ಟೇಶನ್ : ಫೆ.10 ರೊಳಗೆ ಸಭೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

2020 ಮೇ 17…..

ಕೊರೊನಾ ಮುಗಿದ ಬಳಿಕ ಸುಳ್ಯ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ – ಶಾಸಕ ಅಂಗಾರ

2022 ಮೇ 12….

ಸುಳ್ಯ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ | ಸಚಿವರಿಂದ ಸಭೆ | ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ಬಗ್ಗೆ ಚರ್ಚೆ |

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ
September 6, 2026
2:52 PM
by: ಸಾಯಿಶೇಖರ್ ಕರಿಕಳ
ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?
September 6, 2026
12:28 PM
by: ದ ರೂರಲ್ ಮಿರರ್.ಕಾಂ
ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror