ಸುಳ್ಯವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಬೃಹತ್ ರೋಡ್ ಶೋ ಆರಂಭಿಸಿದೆ. ಸುಳ್ಯ ಕ್ಷೇತ್ರದಾದ್ಯಂತ ಬೃಹತ್ ರೋಡ್ ಶೋ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ. ಸಂಪಾಜೆಯಿಂದ ಆರಂಭಿಸಿ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ.
ಆಮ್ ಆದ್ಮಿ ಪಕ್ಷವು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಚಾರ ನಡೆಸಿದ ಪಕ್ಷಗಳಲ್ಲಿ ಒಂದಾಗಿದೆ. ಸದ್ದಿಲ್ಲದೆ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಆರಂಭ ಮಾಡಿತ್ತು. ಅತೀ ಹೆಚ್ಚು ಮತದಾರರನ್ನು ಸಂಪರ್ಕ ಮಾಡಿದೆ. ರೋಡ್ ಶೋ, ಕಾರ್ನರ್ ಸಭೆ, ಮತದಾರರ ಭೇಟಿ, ಸಾಮಾಜಿಕ ಜಾಲತಾಣ ಹೀಗೇ ಎಲ್ಲಾ ರೀತಿಯಿಂದಲೂ ಮತದಾರರನ್ನು ಸಂಪರ್ಕ ಮಾಡಿತ್ತು. ಅಭಿವೃದ್ಧಿಯ ಮೂಲಕ ಸುಳ್ಯದಲ್ಲಿ ಬದಲಾವಣೆಯನ್ನು ಬಯಸಿತ್ತು. ಗೆದ್ದರೂ ಸೋತರೂ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದೆ. ಇದೀಗ ಸಂಪಾಜೆಯಿಂದ ಆರಂಭಿಸಿ ಬೃಹತ್ ರೋಡ್ ಶೋ ಸುಳ್ಯ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ಬೆಳ್ಳಾರೆ, ಸವಣೂರು ಹೀಗೇ ಸಂಪೂರ್ಣ ಕ್ಷೇತ್ರದಾದ್ಯಂತ ಮಿಂಚಿತ ಸಂಚಾರ ಮಾಡುವ ಮೂಲಕ ಎಎಪಿ ಸುಳ್ಯದಲ್ಲಿ ಸದ್ದು ಮಾಡಿದೆ.
ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ತೆರದ ವಾಹನದಲ್ಲಿ ಮತಯಾಚನೆ ಮಾಡುತ್ತಾ ಸಾಗಿಸಿದರು. ಪಕ್ಷದ ಪ್ರಮುಖರು ವಾಹನದ ಜೊತೆ ಸಾಗಿದರು. 15ಕ್ಕೂ ಹೆಚ್ಚು ವಾಹನ, 500 ಕ್ಕೂ ಅಧಿಕ ಎಎಪಿ ಕಾರ್ಯಕರ್ತರು ಜೊತೆಗಿದ್ದರು.
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…
ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…
ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…
ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…
ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…
ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…