Advertisement
ರಾಜ್ಯ

ತಾಲೂಕಿಗೊಂದು ಗೋಶಾಲೆ | ಸುಳ್ಯದಲ್ಲಿ ಗೋಶಾಲೆ ನಿರ್ಮಾಣಕ್ಕೆ 10 ವರ್ಷಗಳ ಹೋರಾಟ… ! | ಗೋಮಳವಿದ್ದರೂ ಏಕೆ ಮೌನವಾಗಿವೆ ಆಡಳಿತ.. ? |

Share

ಸುಳ್ಯದಲ್ಲಿ ಗೋಶಾಲೆ ನಿರ್ಮಾಣವಾಗಬೇಕು. ಹೀಗೊಂದು ಬೇಡಿಕೆ ಕಳೆದ 10 ವರ್ಷಗಳಿಂದ ಇದೆ. ಹಾಗಿದ್ದರೂ ಆಡಳಿತಗಳು ಏಕೆ ಮೌನ ವಹಿಸಿವೆ ? ಹೀಗೆ ಪ್ರಶ್ನೆ ಕೇಳಿರುವುದು ಕೊಡಿಯಾಲ ಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ನಾಯಕ್…!.‌ ಕಳೆದ 10 ವರ್ಷಗಳ ಬೇಡಿಕೆ, ಹೋರಾಟಕ್ಕೆ ಬೆಲೆಯೇ ಸಿಕ್ಕಿಲ್ಲ…!. ಗೋಮಳ ಇದ್ದರೂ ಪಶುಸಂಗೋಪನಾ ಇಲಾಖೆಗಳು ಮೌನವಾಗಿವೆ…!

ಗೋಮಾತೆಯ ರಕ್ಷಣೆ ನಿತ್ಯವೂ ನಡೆಯುತ್ತಿದೆ. ಅಕ್ರಮವಾಗಿ ಗೋಸಾಗಾಟ ನಡೆಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಗೋಪ್ರೇಮಿಗಳು ಗೋರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಗೋರಕ್ಷಣೆಯ ಬಳಿಕ ಗೋವುಗಳನ್ನು ಏನು ಮಾಡುವುದು  ಎನ್ನುವ ಪ್ರಶ್ನೆಯ ನಡುವೆಯೇ ಗೋಶಾಲೆಯ ಬೇಡಿಕೆ ಕಳೆದ ಹತ್ತಾರು ವರ್ಷಗಳಿಂದ ಇದೆ. ಕೃಷಿರಲ್ಲೂ ಹೋರಿ ಕರುಗಳು ಇದ್ದರೆ ಏನು ಮಾಡುವುದು  ಎನ್ನುವ ಪ್ರಶ್ನೆಗಳಿಗೂ ಉತ್ತರವಿಲ್ಲ. ಕೆಲವರು ದೂರದ ಗೋಶಾಲೆಗಳಿಗೆ ತಲುಪಿಸಿದರೆ ಇನ್ನೂ ಕೆಲವರು ಸಾಕುವ ಹೆಸರಿನಲ್ಲಿ ಯಾರ್ಯಾರಿಗೋ ಕೊಡಬೇಕಾದ್ದು ಅನಿವಾರ್ಯವೂ ಆಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯದ ಕೊಡಿಯಾಲಬೈಲು ಹಾಲು ಉತ್ಪಾದರ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಗೋಶಾಲೆ ನಿರ್ಮಾಣದ ಕಡೆಗೆ ಬೇಡಿಕೆ, ಹೋರಾಟ ನಡೆಸುತ್ತಲೇ ಇದೆ. ಕಂದಾಯ ಇಲಾಖೆ ಸಹಿತ ಪಶುಸಂಗೋಪನಾ ಇಲಾಖೆಗೂ ಮನವಿ ಮಾಡಿದೆ. ಜಾಗ ಮಂಜೂರು ಕೂಡಾ ಆಗಿದೆ. ಗೋಮಳ ಇದೆ, ಅದರಲ್ಲಿ ಕನಿಷ್ಟ ಹತ್ತು ಎಕರೆ ಸಹಕಾರಿ ಸಂಘಕ್ಕೆ ನೀಡಿ, ಕೆಎಂಎಫ್‌ ಸಹಿತ ಗೋಪ್ರೇಮಿಗಳ ನೆರವಿನಿಂದ ಗೋಶಾಲೆ ಮಾಡುತ್ತೇವೆ ಎಂದೂ ಹೇಳಿತ್ತು. ಆದರೂ ಗೋಶಾಲೆ ತೆರೆಯಲು ಸಾಧ್ಯವಾಗಿಲ್ಲ.

2008 ರಲ್ಲಿ ಗೋಮಳ ಜಾಗದಲ್ಲಿ ಗೋಶಾಲೆಗೆ ಎಂದು 7ಎಕ್ರೆಯಷ್ಟು ಜಾಗವನ್ನು ಮೀಸಲಿಡಲಾಗಿತ್ತು. ಅದಾಗಿ ಹಲವು ಪ್ರಯತ್ನ ನಡೆದರೂ ಸಾಧ್ಯವಾಗಿಲ್ಲ. ಶಾಸಕ ಅಂಗಾರ ಅವರೂ ಈ ಹಿಂದೆ ಪತ್ರ ಬರೆದಿದ್ದರು. 2021 ರಲ್ಲಿ ಸಚಿವ ಎಸ್‌ ಅಂಗಾರ ಅವರು ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮನವಿಯ ಮೇರೆಗೆ ಮತ್ತೆ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದು ಜಮೀನು ಕಾಯ್ದಿರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆಯನ್ನೂ ನೀಡಿದ್ದಾರೆ.

ಸುಮಾರು 10 ವರ್ಷದ ಹಿಂದೆ ಪುತ್ತೂರು-ಸುಳ್ಯ ನಡುವೆ ಅಕ್ರಮ ಗೋಸಾಗಾಟ ತಡೆಯುವ ವೇಳೆ ಸುಳ್ಯದ ಯುವಕನೊಬ್ಬ ಮೃತಪಟ್ಟಿದ್ದ , ಈ ಸಂದರ್ಭ ಅವರದೇ ಊರಿನಲ್ಲಿ ಗೋಶಾಲೆ ತೆರೆಯುವ ಬಗ್ಗೆಯೂ ಭರವಸೆ ಕೇಳಿಬಂದಿತ್ತು. ಆದರೆ 10 ವರ್ಷಗಳ ನಂತರವೂ ಈ ಕನಸು ಈಡೇರಿಲ್ಲ. ಗೋಪ್ರೇಮಿಗಳೇ ಇರುವ ನಾಡಿನಲ್ಲಿ ಗೋಶಾಲೆಯನ್ನು ತೆರೆಯಲು ಆಗದೇ ಇರುವುದು  ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘವೇ ಅದರ ನೇತೃತ್ವ ವಹಿಸಿಕೊಂಡರೂ ಸರ್ಕಾರ, ಆಡಳಿತ ಸ್ಪಂದಿಸದೇ ಇರುವುದು ವಿಪರ್ಯಾಸವೇ ಸರಿ.

 

ಕಳೆದ 10 ವರ್ಷಗಳಿಂದ ಸುಳ್ಯದಲ್ಲಿನ ಗೋಮಳ ಜಾಗದಲ್ಲಿ ಗೋಶಾಲೆಯ ತೆರೆಯುವ ಬಗ್ಗೆ ಮನವಿಗಳು, ಒತ್ತಾಯ, ಹೋರಾಟ ನಡೆಯುತ್ತಿದೆ. ಇದುವರೆಗೂ ಆಶಾದಾಯಕ ಬೆಳವಣಿಗೆ ಕಂಡಿಲ್ಲ.- ಸೀತಾರಾಮ ನಾಯಕ್‌, ಅಧ್ಯಕ್ಷರು, ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

7 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

9 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

9 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

18 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

21 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago