ಸುಳ್ಯ ತಾಲೂಕು ವಕೀಲರ ಸಂಘದ ಚುನಾವಣೆ ಮಾ.25 ರಂದು ವಕೀಲ ಸಂಘದ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಗೆ ನಾರಾಯಣ ಕೆ ಮತ್ತು ಹರಿ ಕುಕ್ಕುಡೇಲು ನಡುವೆ ಸ್ಪರ್ದೆ ಏರ್ಪಟ್ಟು ನೇರ ಹಣಾಹಣಿಯಲ್ಲಿ ಅಂತಿಮವಾಗಿ ನಾರಾಯಣ ಕೆ ಒಂದು ಮತದ ಅಂತರದಿಂದ ವಿಜೇತರಾಗಿ ಆಯ್ಕೆಯಾದರು. ನಾರಾಯಣರು 50 ಮತ ಪಡೆದರೆ ಹರಿ 49 ಮತ ಪಡೆದು ಕೇವಲ ಒಂದು ಮತದಿಂದ ಪರಾಭವಗೊಂಡರು.
ಕಾರ್ಯದರ್ಶಿ ಹುದ್ದೆಗೆ ವಿನಯ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷತೆಗೆ ದೀಪಕ್ ಕುತ್ತಮೊಟ್ಟೆ ಅವಿರೋಧವಾಗಿ ಆಯ್ಕೆಯಾದರು. ಕೋಶಾಧಿಕಾರಿ ಹುದ್ದೆಗೆ ಸ್ಪರ್ಧೆಗೆ ಜಗದೀಶ್ ಮತ್ತು ಲೋಲಜಾಕ್ಷಿ ನಡುವೆ ನಡೆದ ಸ್ಪರ್ಧೆಯಲ್ಲಿ ಜಗದೀಶ ೫೪ ಮತ ಪಡೆದು ಆಯ್ಕೆಯಾದರು. ಲೋಲಜಾಕ್ಷಿ 48 ಮತ ಪಡೆದು ಪರಾಜಯ ಹೊಂದಿದರು. ಜೊತೆ ಕಾರ್ಯದರ್ಶಿಗೆ ಪಲ್ಲವಿ ಅವಿರೋದವಾಗಿ ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಅವಿರೋಧ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್ ಕೆ ಅವಿರೋಧ ಆಯ್ಕೆಯಾದರು. ಗ್ರಂಥಾಲಯ ಕಾರ್ಯದರ್ಶಿಯಾಗಿ ಹರ್ಷಿತ್ ಮತ್ತು ಧರ್ಮಪಾಲ ಕೊಯಿಂಗಾಜೆ ನಡುವೆ ಸ್ಪರ್ಧೆ ನಡೆದು 55 ಮತದಿಂದ ಹರ್ಷಿತ್ ಕಾರ್ಜ ಆಯ್ಕೆಯಾದರು. ಧರ್ಮಪಾಲ 48 ಮತ ಪಡೆದು ಪರಾಜಿತರಾದರು. ಚುನವಣಾಧಿಕಾರಿಯಾಗಿ ಹಿರಿಯ ವಕೀಲರಾದ, ದಳ ಸುಬ್ರಾಯ ಭಟ್ ಮತ್ತು ಜಗದೀಶ್ ಹುದೇರಿ ಕಾರ್ಯ ನಿರ್ವಹಿಸಿದರು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel

