Advertisement
ಸುದ್ದಿಗಳು

ವಾರೆವ್ಹಾ ಸುಳ್ಯ…! | ಸಮಸ್ಯೆಗಳನ್ನು ಹೇಳಲೂಬಾರದು…ಪ್ರಶ್ನಿಸಲೂಬಾರದು..! | ಕೀಬೋರ್ಡ್‌ ವಾರಿಯರ್‌ನಿಂದ ಪೊಲೀಸ್‌ ದೂರಿನವರೆಗೆ…! |

Share

ಕೀಬೋರ್ಡ್‌ ವಾರಿಯರ್‌ನಿಂದ ಈಗ ಪೊಲೀಸ್‌ ಠಾಣೆಗೆ ದೂರು ನೀಡುವವರೆಗೆ ತಲುಪಿದೆ ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರ ಸುದ್ದಿ. ವಾರಗಳ ಹಿಂದೆ ಸುಳ್ಯ ರಸ್ತೆ ಸಮಸ್ಯೆ ಬಗ್ಗೆ ಸಾಮಾಜಿಕ ಕಾರ್ಯಕರ್ತ, ರೇಡಿಯೋ ಜಾಕಿ ,ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿರುವ ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ ರಸ್ತೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಇದೀಗ ಈ ಸುದ್ದಿ ಪೊಲೀಸ್‌ ಠಾಣೆಯವರೆಗೂ ತಲುಪಿದೆ. ಠಾಣೆಗೆ ಮುಟ್ಟಿಸಿದವರು ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರು…! ಕಾರಣ ಏನು ಇಲ್ಲಿದೆ ಓದಿ.  

ಸುಳ್ಯ ನಗರದ  ರಸ್ತೆಗುಂಡಿಗಳ ಬಗ್ಗೆ  ಆರ್‌ ಜೆ ತ್ರಿಶೂಲ್ ಗೌಡ ಕಂಬಳ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ಗಮನಸೆಳೆದಿದ್ದರು. ಇದು ಚರ್ಚೆಯಾಗುತ್ತಿದ್ದಂತೆಯೇ ಸುಳ್ಯ ನಗರದ ಜವಾಬ್ದಾರಿ ಇರುವ ಸ್ವತ: ನಗರ ಪಂಚಾಯತ್‌ ಅಧ್ಯಕ್ಷರು ‘ಕೀಬೋರ್ಡ್ ವಾರಿಯರ್’ ಎಂದು ಟೀಕಿಸಿದ್ದರು. ಇದಕ್ಕೆ ಆರ್‌ ಜೆ ತ್ರಿಶೂಲ್‌ ಸೇರಿದಂತೆ ಹಲವರು ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬರ ಈ ರೀತಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾನ್ಯ ವ್ಯಕ್ತಿಯ ಟೀಕೆಗೂ ಜವಾಬ್ದಾರಿ ಇರುವ ವ್ಯಕ್ತಿಗಳ ಟೀಕೆಗೂ ವ್ಯತ್ಯಾಸ ಇದೆ ಎಂದೂ ಹೇಳಿದ್ದರು. ಹೀಗಾಗಿ ಆರ್‌ ಜೆ ತ್ರಿಶೂಲ್‌ ಅವರು ನಗರ ಪಂಚಾಯತ್‌ ಅಧ್ಯಕ್ಷರಿಗೆ ಸವಾಲು ಹಾಕಿದ್ದರು, ಸುಳ್ಯದ ಸಮಸ್ಯೆಗಳ ಪಟ್ಟಿ ಜೊತೆ ಬರುತ್ತೇನೆ ಅಲ್ಲಿಯೇ ಉತ್ತರಿಸಿ ಎಂದೂ ಸವಾಲು ಹಾಕಿದ್ದರು. ಕೊನೆಗೆ ದೂರವಾಣಿ ಕರೆಯ ಮೂಲಕವೂ ಸವಾಲು ಹಾಕಲಾಗಿದ್ದು ವೈರಲ್‌ ಆಗಿತ್ತು. ಸಹಜವಾಗಿಯೇ ಸುಳ್ಯದ ಅನೇಕ ಮೂಲಭೂತ ಸಮಸ್ಯೆಗಳಿಂದ ಬೇಸತ್ತ ಜನರು ಆರ್‌ ಜೆ ತ್ರಿಶೂಲ್‌ ಅವರಿಗೆ ಬೆಂಬಲಿಸಿದ್ದರು ಕೂಡಾ.

ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಾದ್ದು ಮಾಧ್ಯಮಗಳ, ಸಾಮಾಜಿಕ ಕಾರ್ಯಕರ್ತರ, ಆಯಾ ಪಕ್ಷದ ಕಾರ್ಯಕರ್ತರ, ವಿಪಕ್ಷಗಳ, ಜನರ ಕೆಲಸವೂ ಹೌದು. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದೇ ಇದ್ದಲ್ಲಿ ಜನರೂ ಅಸಮಾಧಾನಗೊಳ್ಳುತ್ತಾರೆ. ಮತ ನೀಡಿದವರು ಪ್ರಶ್ನಿಸಲೇಬೇಕು, ಇದು ಪ್ರಜಾಪ್ರಭುತ್ವ. ಅಧಿಕಾರದಲ್ಲಿ ಇರುವವರನ್ನು, ಜವಾಬ್ದಾರಿಯಲ್ಲಿ ಇರುವವರನ್ನು ಮಾಧ್ಯಮಗಳೂ ಪ್ರಶ್ನಿಸಬೇಕು. ಆದರೆ ಸುಳ್ಯದಲ್ಲಿ ಮಾತ್ರಾ ಹಾಗಲ್ಲ. ಇಲ್ಲಿ ಪ್ರಶ್ನಿಸುವ ಮಾತು ಬಿಡಿ, ಸಮಸ್ಯೆಗಳನ್ನೂ ಹೇಳುವ ಹಾಗಿಲ್ಲದ ಸ್ಥಿತಿ ಬಂದಿರುವುದು  ಇಲ್ಲಿನ ಜನರ ದುರಂತ…!. ಇಲ್ಲಿ ಪ್ರಶ್ನಿಸಿದವರು ವಿವಿಧ ಬಿರುದುಗಳನ್ನು ಪಡೆಯಬೇಕಾಗುತ್ತದೆ. ಈ ಹಿಂದೆ ಸ್ವಚ್ಛತೆಯ ಜಾಗೃತಿ ಮಾಡುತ್ತಿರುವ ಚಿತ್ರನಟ ಅನಿರುದ್ಧ ಅವರಿಗೂ ಕಿರಿಕಿರಿಯಾಗಿತ್ತು. ರಸ್ತೆ ಸಮಸ್ಯೆ ಹೇಳಿದ ಆರ್‌ ಜೆ ತ್ರಿಶೂಲ್‌ ಅವರಿಗೂ ಅದೇ ಆಗಿದೆ. ಸುಳ್ಯದ ವಿವಿಧ ಕಡೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದವರಿಗೆಲ್ಲರಿಗೂ ಇದೇ ಮಾದರಿಯ ಅನುಭವ ಆಗಿದೆ. ಹಾಗೆಂದು ಆ ಸಮಸ್ಯೆಗಳ ಪರಿಹಾರ ಮಾಡುತ್ತೇವೆ ಎನ್ನುವ ಯಾವ ಭರವಸೆಯೂ ಬಂದಿಲ್ಲ…!. ಇದು ಪ್ರಜಾಪ್ರಭುತ್ವ..!.

ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಗರ ಪಂಚಾಯತ್‌ ಅಧ್ಯಕ್ಷರು ಸುಳ್ಯ‌ ಠಾಣೆಗೆ ದೂರು ನೀಡಿದ್ದಾರೆ. ಆರ್‌ ಜೆ ತ್ರಿಶೂಲ್‌ ಅವರು ಪೇಸ್‌ ಬುಕ್‌ ನಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ಬಂದಿರುವುದೇ ಈಗ ದೂರು ನೀಡಲು ಕಾರಣವಾಗಿದೆ…!. ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ಸುಳ್ಯದ ಹಲವು ಸಮಸ್ಯೆಗಳನ್ನೂ ಗಮನ ಸೆಳೆದಿದ್ದಾರೆ. ಸದ್ಯ ಪೊಲೀಸ್‌ ಠಾಣೆಯಿಂದ ನೋಟೀಸು ಬಂದರೆ ಪೊಲೀಸರ ಮುಂದೆ ಹಾಜರಾಗುವುದಾಗಿ ತ್ರಿಶೂಲ್‌ ತಿಳಿಸಿದ್ದಾರೆ.

ಸುಳ್ಯದ ಸಮಸ್ಯೆಗಳನ್ನು ಇನ್ನು ಎಲ್ಲಿ? ಯಾರ ಜೊತೆ ಹೇಳುವುದು ? ಎನ್ನುವುದು ಸದ್ಯ ಟ್ರೋಲ್‌ ಆಗುತ್ತಿರುವ ವಿಷಯ. ಈಗಾಗಲೇ ಹಲವಾರು ಮಂದಿ ಪೊಲೀಸ್‌ ದೂರೂ ನೀಡಿರುವ ನಗರ ಪಂಚಾಯತ್‌ ಅಧ್ಯಕ್ಷರ ನಡೆಯನ್ನು ಖಂಡಿಸಿದ್ದಾರೆ.

ಸುಳ್ಯದ ಸಮಸ್ಯೆಗಳ ಬಗ್ಗೆ ಗಮನಸೆಳೆದ ಆರ್‌ ಜೆ ತ್ರಿಶೂಲ್‌ ಅವರು ವಾಸ್ತವನ್ನು ತಿಳಿಸಿದ್ದಾರೆ. ಅವರ ಹಾಗೂ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ  ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ  ಪ್ರತಿಭಟನೆ ಮಾಡುವುದಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

20 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

21 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

21 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

21 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 days ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

2 days ago