Advertisement
MIRROR FOCUS

ಮುಂದಿನ ವರ್ಷ “ಸೂಪರ್‌ ಎಲ್‌ ನಿನೋ ” ಸಾಧ್ಯತೆ | ಎಚ್ಚರಿಕೆ ನೀಡಿದ ಹವಾಮಾನ ಸಂಸ್ಥೆ | ಮುಂದಿನ ವರ್ಷ ಬರಗಾಲವೋ..? ಜಲ ಪ್ರಳಯವೋ..? |

Share

ಈ ವರ್ಷ ಮಳೆಯ ಸಮಸ್ಯೆ ಕಾಡಿದ್ದಾಯಿತು. ಎಲ್ಲೆಡೆಯೂ ಸಮಸ್ಯೆಯೇ ಸಮಸ್ಯೆ. ಬಹುಪಾಲು ಬರಗಾಲವೇ ಕಂಡಿದೆ. ಇದೀಗ ಮುಂದಿನ ವರ್ಷದ ಆತಂಕ ಆರಂಭವಾಗಿದೆ. ಇದಕ್ಕೆ ಕಾರಣವಾದ್ದು ಯುಎಸ್‌ ಮೂಲದ ಹವಾಮಾನ ಸಂಸ್ಥೆ ಮುಂದಿನ ವರ್ಷ ಸೂಪರ್‌ ಎಲ್‌ ನಿನೋ ಬಗ್ಗೆ ಎಚ್ಚರಿಸಿದೆ.

Advertisement
Advertisement

ಈ ವರ್ಷ ಮಳೆಗಾಲವೇ ಇಲ್ಲವೇನೋ ಎಂದು ದೇಶದ ಕೆಲವು ಭಾಗಗಳಲ್ಲಿ ಅನ್ನಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಸಾಕೋ ಸಾಕು ಅನ್ನಿಸುವಷ್ಟು ಮಳೆಯಾಗಿತ್ತು. ಈಗ ಆತಂಕ ಹುಟ್ಟಿಸಿರುವ ವಿಚಾರ ಎಂದರೆ ಮುಂದಿನ ವರ್ಷ ಪೆಸಿಫಿಕ್‌ ಸಾಗರದಲ್ಲಿ “ಸೂಪರ್‌ ಎಲ್‌ನಿನೋ’(Super El Nino) ಉಂಟಾಗಬಹುದು ಎಂದು ಅಮೆರಿಕದ ಹವಾಮಾನ ಸಂಸ್ಥೆ ಎಚ್ಚರಿಸಿದೆ.

Advertisement

ಪೆಸಿಫಿಕ್‌ ಅಥವಾ ಶಾಂತಸಾಗರದ ಉತ್ತರ ಅಮೆರಿಕದ ಬದಿ ಮತ್ತು ದಕ್ಷಿಣ ಅಮೆರಿಕದ ಬದಿಗಳಲ್ಲಿ ಸಾಗರದ ನೀರಿನ ಉಷ್ಣತೆ ಇಡೀ ಜಗತ್ತಿನ ಹವಾಮಾನವನ್ನು ಪ್ರಭಾವಿಸುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಶಾಂತ ಸಾಗರದ ಉತ್ತರ ಅಮೆರಿಕ ಕಡೆಯಲ್ಲಿ ಶೀತ ನೀರು ಮತ್ತು ದಕ್ಷಿಣ ಅಮೆರಿಕ ಬದಿಯಲ್ಲಿ ಉಷ್ಣ ನೀರು ಇರುತ್ತದೆ. ಸಾಗರದ ಒಳಗೆ ಉಷ್ಣ ಮತ್ತು ಶೀತ ಅಂತರ್‌ಪ್ರವಾಹಗಳಿರುತ್ತವೆ. ದಕ್ಷಿಣ ಅಮೆರಿಕ ಬದಿಯ ನೀರು ಸಹಜಕ್ಕಿಂತ ಹೆಚ್ಚು ಬಿಸಿಯಾದರೆ ಎಲ್‌ ನಿನೋ ಉಂಟಾಗುತ್ತದೆ. ಉತ್ತರ ಅಮೆರಿಕ ಬದಿಯ ಶೀತ ನೀರು ವಾಡಿಕೆಗಿಂತ ಹೆಚ್ಚು ತಂಪಾದರೆ ಲಾ ನಿನೋ ತಲೆದೋರುತ್ತದೆ.

ಇವೆರಡೂ ಸ್ಥಿತಿಗಳು ಜಾಗತಿಕ ಹವಾಮಾನ ಸ್ಥಿತಿಗತಿಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಲ್ಲವು. ಈ ವರ್ಷದ ಮಳೆಗಾಲದ ಅವಾಂತರಗಳಿಗೆ ಎಲ್‌ ನಿನೋ ಕಾರಣ. ಮುಂದಿನ ವರ್ಷ ಇದು “ಸೂಪರ್‌ ಎಲ್‌ ನಿನೋ’ ಆಗಿ ಮರುಕಳಿಸಬಹುದು ಎನ್ನುವುದು ಅಮೆರಿಕದ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಇದರ ಬೆನ್ನಿಗೇ ಕೃಷಿ ವಲಯದಲ್ಲಿ ಚರ್ಚೆ ಆರಂಭವಾಗಿದೆ.

Advertisement

ಈಗಾಗಲೇ ತಾಳೆ ಕೃಷಿಯ ಬಗ್ಗೆ ಚರ್ಚೆ ನಡೆದಿದೆ. ಎಲ್ ನಿನೊವು ವಿಶ್ವದ ಪ್ರಮುಖ ತಾಳೆ ಎಣ್ಣೆ ಬೆಳೆಯುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು 2024 ರ  ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಎಲ್ ನಿನೋ-ಸಂಬಂಧಿತ ತೇವಾಂಶದ ಕೊರತೆಯು ಇಂಡೋನೇಷ್ಯಾದ ಹಲವಾರು ಭಾಗಗಳಲ್ಲಿ ಸಮಸ್ಯೆಯಾಗುತ್ತದೆ.

ಭಾರತದಲ್ಲಿ, ಎಲ್ ನಿನೋ ಸಾಮಾನ್ಯವಾಗಿ  ಮಾನ್ಸೂನ್ ಮಾರುತಗಳಿಗೆ ಸಂಬಂಧಿಸುತ್ತವೆ. ಮಳೆಯ ಮೇಲೆ ತೀರಾ ಪರಿಣಾಮ ಕೊಡುತ್ತವೆ. ಮಾನ್ಸೂನ್ ಅವಧಿಯಲ್ಲಿ ಕಡಿಮೆ ಮಳೆಗೆ ಕಾರಣವಾಗಬಹುದು. ಆದರೆ ಸೂಪರ್ ಎಲ್ ನಿನೊವು ಭಾರತದಲ್ಲಿ ವಿಶಿಷ್ಟ ಹವಾಮಾನ ಮಾದರಿಗಳನ್ನು ಸೃಷ್ಟಿಸಬಹುದು. ಇದರಿಂದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಮಳೆಯ ತೀವ್ರ ಕೊರತೆ ಕಾಣಬಹುದು.ಇದುವರೆಗಿನ ಹವಾಮಾನ ಘಟನೆಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕಡಿಮೆ ಮಳೆಯ ಪ್ರಭಾವ ಇರುತ್ತದೆ. ಆದರೆ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬೆಳೆ ಕೊರತೆ, ನೀರಿನ ಕೊರತೆ ಕೃಷಿ ಕ್ಷೇತ್ರದ ಮೇಲೆ ಹೊಡೆತ ಬೀಳಬಹುದು. ಇದರಿಂದ ಆಹಾರ ಉತ್ಪಾದನೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಸಮಸ್ಯೆಯಾಗಬಹುದು.

Advertisement

ಸಾಗರದ ನೀರು 1.5 ಡಿಗ್ರಿ ಸೆಂಟಿಗ್ರೇಡ್‌ನ‌ಷ್ಟು ಬಿಸಿಯಾಗಿ “ಬಲವಾದ ಎಲ್‌ನಿನೋ’ ಉಂಟಾಗುವ ಸಾಧ್ಯತೆ ಶೇ. 75-80 ಇದ್ದರೆ,  2 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿ “ಸೂಪರ್‌ ಎಲ್‌ನಿನೋ’ ತಲೆದೋರುವ ಸಂಭವ ಶೇ. 30 ಇದೆ ಎನ್ನುವುದು ಈ ಹವಾಮಾನ ತಜ್ಞರ ಅಂಬೋಣ.1997-98 ಮತ್ತು 2015-16 ರ  ಐತಿಹಾಸಿಕವಾಗಿ ಪ್ರಬಲ ಘಟನೆಗಳ ಸಂಭವನೀಯತೆ ಪ್ರಕಾರ ಕೆಲವು ಕಡೆ ಭಾರೀ ಮಳೆ ಇದ್ದು , ಇನ್ನೂ ಕೆಲವು ಕಡೆ ಮಳೆಯ ಕೊರತೆ ಪ್ರಪಂಚದಾದ್ಯಂತ ಇತ್ತು.

ಈ ವರ್ಷದ ಬರಗಾಲ ಸ್ಥಿತಿಯ ಪರಿಣಾಮ ಇನ್ನು ಮುಂದಿನ ದಿನಗಳಲ್ಲಿ ಅನುಭವಕ್ಕೆ ಬರಬೇಕಷ್ಟೇ. ಅದಾದ ಬೆನ್ನಿಗೆ ಸೂಪರ್‌ ಎಲ್‌ ನಿನೋ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ಈಗಾಗಲೇ ಕೆಲವು ದೇಶಗಳ ಕೃಷಿ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಭಾರತದಲ್ಲಿ ಈ ಬಗ್ಗೆ ಇನ್ನಷ್ಟೇ ಯೋಚನೆ ಆರಂಭವಾಗಬೇಕಿದೆ.

Advertisement
Over the past few years, this change has become more evident. In some parts of the country, it rained so much that it seemed to be enough in some parts of the country. The issue that has raised concern is the prospect of a "Super El Nino" in the Pacific Ocean next year, according to the US National Oceanic and Atmospheric Administration.Over the past few years, this change has become more evident. In some parts of the country, it rained so much that it seemed to be enough in some parts of the country. The issue that has raised concern is the prospect of a "Super El Niño" in the Pacific Ocean next year, according to the US National Oceanic and Atmospheric Administration.
Source : Weather News
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

2 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

2 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

3 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

3 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

3 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

3 hours ago