#SwachchBharath | ಗುತ್ತಿಗಾರಿನಲ್ಲಿ ಮುಂದುವರಿದ ಸ್ವಚ್ಛತಾ ಅಭಿಯಾನ | ಅಭಿಯಾನಕ್ಕೆ ಕೈಜೋಡಿಸಿದ ವಿಕಲಚೇತನ | ಪೇಟೆಯಲ್ಲಿ ಜಾಗೃತಿ ಫಲಕ |

August 3, 2023
10:09 PM
ಸ್ವಚ್ಚ ಗ್ರಾಮ ಗುತ್ತಿಗಾರು ಟಾಸ್ಕ್ ಫೋರ್ಸ್‌ ವತಿಯಿಂದ ಆರನೇ ವಾರದ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯವು ಗುರುವಾರ ನಡೆಯಿತು. ಈ ಅಭಿಯಾನಕ್ಕೆ  ಹಲವಾರು ಮಂದಿ ಕೈಜೋಡಿಸುತ್ತಿದ್ದಾರೆ. ಇದೀಗ ಜಾಗೃತಿ ಫಲಕಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ.

ಪುಟ್ಟ ಹಳ್ಳಿಯ ಸ್ವಚ್ಛತಾ ಅಭಿಯಾನದ ಕಾರ್ಯ ಮುಂದುವರಿದಿದೆ.  ಆರನೇ ವಾರದ ಸ್ವಚ್ಚ ಗ್ರಾಮ ಗುತ್ತಿಗಾರು ಟಾಸ್ಕ್ ಫೋರ್ಸ್‌ ಕೆಲಸವು ಗುರುವಾರ ನಡೆಯಿತು. ಈ ಅಭಿಯಾನಕ್ಕೆ  ಹೂವಿನ ಅಂಗಡಿಯ ವಿಕಲಚೇತನ ಸಿದ್ದಣ್ಣ ಅವರು ತಮ್ಮ ಅಂಗಡಿಯ ಮುಂದೆ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದರು. ಇದೇ ಸಂದರ್ಭ ಜೀಪು ಚಾಲಕ ಮಾಲಕರು ಕೂಡಾ ಅಭಿಯಾನದ ಜೊತೆ ಸೇರಿಕೊಂಡರು. ಗುರುವಾರದ  ಸ್ವಚ್ಚತಾ ಅಭಿಯಾನದಲ್ಲಿ ಸ್ವಚ್ಚತೆಯೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಭಿಯಾನವನ್ನು ಮುಂದುವರಿಸಲಾಯಿತು.

Advertisement
Advertisement
ಸ್ವಚ್ಛತಾ ಅಭಿಯಾನಕ್ಕೆ ಸಿದ್ಧಣ್ಣ ಕೈಜೋಡಿಸಿದರು

ಸ್ವಚ್ಚ ಗ್ರಾಮ ಗುತ್ತಿಗಾರು ಟಾಸ್ಕ್ ಫೋರ್ಸ್‌ ಅಭಿಯಾನಕ್ಕೆ  ಸ್ವಯಂಪ್ರೇರಣೆಯಿಂದ ಎಲ್ಲರೂ ಸ್ವಚ್ಚತಾ ಟಾಸ್ಕ್ ಫೋರ್ಸ್ ಕಾರ್ಯಕ್ಕೆ ಕೈಜೋಡಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ, ಪಂಚಾಯತ್ ಸದಸ್ಯರಾದ  ವಿಜಯ ಚಾರ್ಮಾತ, ಲತಾ ಆಜಡ್ಕ,ಅಮರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಗ್ರಂಥಪಾಲಕರು,ವರ್ತಕರ ಸಂಘದ ಅಧ್ಯಕ್ಷ ರು, ವರ್ತಕರು, ಜೀಪು ಚಾಲಕರು, ಆಟೋಚಾಲಕರು, ಟಾಸ್ಕ್ ಫೋರ್ಸ್ ನ ಸದಸ್ಯರೆಲ್ಲರೂ  ಪಾಲ್ಗೊಂಡು ಸ್ವಚ್ಚತೆ ಮಾಡುವುದರೊಂದಿಗೆ ಅರಿವು ಮೂಡಿಸಿದರು. ಇದೇ ಸಂದರ್ಭ ಎಲ್ಲೆಂದರಲ್ಲಿ ಕಸ ಎಸೆಯದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸೂಚನಾ ಫಲಕಗಳನ್ನು ಅಂಗಡಿಗಳಲ್ಲಿ ಅಳವಡಿಸಲಾಯಿತು.

Advertisement

ಈ ಸಂದರ್ಭದಲ್ಲಿ ವರ್ತಕ  ಕೇಶವ ಕಣ್ಕಲ್ ಇವರು ಟಾಸ್ಕ್ ಫೋರ್ಸ್ ನ ಎಲ್ಲ ಸದಸ್ಯರಿಗೆ ಪಾನೀಯದ ವ್ಯವಸ್ಥೆಯನ್ನು ಮಾಡಿದರು.

ಸೂಚನಾ ಫಲಕ ಅಳವಡಿಕೆ
ಸೂಚನಾ ಫಲಕ ಅಳವಡಿಕೆ
ಸ್ವಚ್ಛತಾ ಅಭಿಯಾನ

ಸೂಚನಾ ಫಲಕ ಅಳವಡಿಕೆ

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group