ದಕ್ಷಿಣ ಕನ್ನಡ ಜಿಲ್ಲೆಯು ಕಲಾರಾಧನೆಗೆ ಅದರಲ್ಲೂ ಯಕ್ಷಗಾನದ ನೆಲ. ಯಕ್ಷಗಾನ ಈ ಬಾರಿ ಬಹುಪಾಲು ನಿಂತೇ ಹೋಯಿತು, ಕೊರೋನಾ ಈ ಕಲೆಗೂ ಬಾಧೆ ನೀಡಿತು. ತಾಳಮದ್ದಳೆಯೂ ಅದರ ಒಂದು ಭಾಗ. ಕೊರೋನಾ ಇಫೆಕ್ಟ್ ಕಡಿಮೆಯಾಗುತ್ತಿದ್ದಂತೆಯೇ ಯಕ್ಷಗಾನಕ್ಕೆ ಅವಕಾಶ ನೀಡಿದರೂ ಹೆಚ್ಚು ಜನರು ಭಾಗವಹಿಸುವಂತಿಲ್ಲ.ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಶ್ರೀಕೃಷ್ಣ ಯಕ್ಷಗಾನ ಹವ್ಯಾಸಿ ಕಲಾ ಬಳಗವು ಕಲಾಸಕ್ತರಿಗಾಗಿ ತಾಳಮದ್ದಳೆಯನ್ನು ಹಮ್ಮಿಕೊಂಡಿತು. ಅದೂ ಉಚಿತವಾಗಿ. ಕಲಾ ಆಸಕ್ತರ ಮನೆಯಲ್ಲಿ ಉಚಿತವಾಗಿ ಶ್ರೀಕೃಷ್ಣ ಯಕ್ಷಗಾನ ಕಲಾ ಬಳಗದ ತಂಡದ ಸದಸ್ಯರು ತಾಳಮದ್ದಳೆ ನಡೆಸಿ ಕೊಡುತ್ತಿದ್ದಾರೆ. ಈಗಾಗಲೇ ಸುಮಾರು 10 ತಾಳಮದ್ದಳೆ ಉಚಿತವಾಗಿ ನಡೆಸಿದ್ದಾರೆ. ತಂಡದಲ್ಲಿ ಸುಮಾರು 10 ಕಲಾವಿದರು ಇದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಗಂಗಾಧರ ಗೌಡ ರುದ್ರಚಾಮುಂಡಿ , ಪ್ರತೀಕ್ ಆಚಾರ್ಯ ಕಂದ್ರಪ್ಪಾಡಿ, ಶಶಾಂಕ್ ಎಲಿಮಲೆ
ಚೆಂಡೆ-ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ,
ಮುಮ್ಮೇಳದಲ್ಲಿ ಬಾಬು ಗೌಡ ಅಚ್ರಪ್ಪಾಡಿ, ಕುಶಾಲಪ್ಪ ಮಾಸ್ತರ್ ಕಂದ್ರಪ್ಪಾಡಿ, ಶಿವಸುಬ್ರಹ್ಮಣ್ಯ ಜೋಯಿಸ ಕರುವಜೆ, ಶಿವಕುಮಾರ ಭಟ್ ಗುತ್ತಿಗಾರು, ಲಕ್ಷ್ಮೀಶ ಗಬ್ಲಡ್ಕ , ತಾರಾನಾಥ ಅಂಬೆಕಲ್ಲು, ಪಾಲನೇತ್ರ ಮುಂಡೋಡಿ, ರಾಜೇಶ್ ,ಮಾವಿನಕಟ್ಟೆ ಮೊದಲಾದವರು ಇದ್ದಾರೆ. ಮನೆ ಮನೆಗಳಲ್ಲಿ ಕಲಾಸೇವೆ ಮಾಡುವ ಈ ತಂಡ ಇದುವರೆಗೂ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದೆ. ಕಲಾಸೇವೆಯಲ್ಲಿ ತೊಡಗಿಸಿದೆ.
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…