Advertisement
Opinion

ಮಣ್ಣಿನೊಂದಿಗೆ ಮಾತುಕತೆ | ವಿಸ್ತಾರಗೊಂಡ ಮಾಹಿತಿ – ಅನುಭವ ಹಂಚಿಕೆ |

Share

ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳು. ಅದರಲ್ಲಿ ರಸವಿಷದಿಂದ ತೋಯ್ದ ಗದ್ದೆಗಳೆಷ್ಟೋ? ಆದರೆ ಮಲ್ಲನಗೌಡ ಮಾಲಿ ಪಾಟೀಲ ಕೃಷಿ ವಿಭಿನ್ನ. ‘ಮಣ್ಣಿಗೆ ರಾಸಾಯನಿಕ(Chemical) ಸುರಿಯುವ ಬದಲಿಗೆ, ಎರೆಜಲ ಹಾಗೂ ಗೋಕೃಪಾಮೃತ ಬಳಸುತ್ತ, ಸಾವಯವದಲ್ಲಿ ಭತ್ತ ಬೆಳೆಯುತ್ತಿರುವೆ’ ಎಂದರು ಮಲ್ಲನ ಗೌಡ ಮಾಲಿಪಾಟೀಲ. ಭತ್ತದ ಜತೆಗೆ ಒಂದೂವರೆ ಎಕರೆ ತೋಟದಲ್ಲಿ ತರಹೇವಾರಿ ಹಣ್ಣಿನ ಗಿಡಗಳನ್ನೂ, ಸೊಪ್ಪು-ತರಕಾರಿ- ಔಷಧೀಯ ಮೂಲಿಕೆಗಳನ್ನೂ ಮಲ್ಲನಗೌಡರು ಬೆಳೆಯುತ್ತಿದ್ದಾರೆ.

Advertisement
Advertisement

ಕನಕಗಿರಿ ತಾಲ್ಲೂಕಿನ ಜೀರಾಳಕಲ್ಗುಡಿ ಗ್ರಾಮದ ಹೊರವಲಯದಲ್ಲಿನ ಮಲ್ಲನಗೌಡರ ತೋಟದಲ್ಲಿ ‘ಮಣ್ಣಿನೊಂದಿಗೆ ಮಾತುಕತೆ’ಯ 23ನೇ ಆವೃತ್ತಿ  ಕಳೆದ ಭಾನುವಾರ ನಡೆಯಿತು. ಬಾಳೆ, ದಾಳಿಂಬೆ ಹಾಗೂ ಬೀಜೋತ್ಪಾದನೆ ವಲಯದಲ್ಲಿ ಹಲವಾರು ಏರಿಳಿತ ಕಂಡಿರುವ ಮಲ್ಲನಗೌಡರು ಈಚೀಚೆಗೆ ಸಾವಯವದತ್ತ(Organic) ಹೊರಳಿದವರು. ಗುಜರಾತಿನ ಗೋಪಾಲಭಾಯಿ ಸುತಾರಿಯಾ ಅವರ ಸಲಹೆ ಮೇರೆಗೆ ವಿಷಮುಕ್ತ ಕೃಷಿ(Toxic free farming) ಮಾಡಲು ಮುಂದಾಗಿದ್ದಾರೆ.

Advertisement

ಮಾತುಕತೆ ವಿಷಯ: ‘ಬರ ಎದುರಿಸುವ ದಾರಿಗಳು.’ ಉತ್ತರ ಕರ್ನಾಟಕ ಕೃಷಿಯ ಜೀವಾಳವಾಗಿದ್ದ ಸಿರಿಧಾನ್ಯಗಳು, ಮೌಲ್ಯವರ್ಧನೆ, ವೈವಿಧ್ಯಮಯ ಬೆಳೆ ಹಾಗೂ ನೇರ ಮಾರುಕಟ್ಟೆ ಕುರಿತು ಚರ್ಚೆ ನಡೆಯಿತು. ಕೊಪ್ಪಳದ ಮೂಲತಳಿಯಲ್ಲಿ ಒಂದಾದ ಡುಗ್ಗ (ಕಡಿಮೆ ಮಳೆಯಲ್ಲೂ ಬೆಳೆಯುವ) ಭತ್ತದ ಬಗ್ಗೆ ರೈತ ಹಂಚಾಳಪ್ಪ ಮಾಹಿತಿ ನೀಡಿದರು. ಕುಂದಗೋಳ ಪ್ರದೇಶದಲ್ಲಿ ಈ ಸಲ ರೈತರಿಗೆ ಖಚಿತ ಆದಾಯ ಕೊಟ್ಟ ಸಿರಿಧಾನ್ಯಗಳ ಬಗ್ಗೆ ವಿವಿರಿಸಲಾಯಿತು.ತೋಟಗಾರಿಕೆ ಬಗ್ಗೆ Shripadaraj G Muradi ಅನುಭವ ಹಂಚಿಕೊಂಡರು.

ಮಧ್ಯಾಹ್ನದ ಗೋಷ್ಠಿಯಲ್ಲಿ ರೈತರ ಸೋಲು- ಗೆಲುವು ಚರ್ಚೆ ನಡೆಯಿತು. ದಾಳಿಂಬೆ ಕೃಷಿಯಲ್ಲಿ ಯಶಸ್ಸು ಗಳಿಸದೇ ಹೋಗಿದ್ದು ಯಾಕೆ ಎಂದು ಮಲ್ಲನಗೌಡ ಹಾಗೂ ದೇವೇಂದ್ರಗೌಡ ವಿಶ್ಲೇಷಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ವಿಷಮುಕ್ತ ದಾಳಿಂಬೆ ಬೆಳೆದು ಮಾರುಕಟ್ಟೆ ಕಂಡುಕೊಂಡ ಯಶಸ್ಸನ್ನು Shankar Raddi ತೆರೆದಿಟ್ಟರು. ಉಳಿದಂತೆ ಬಾಳೆ, ತೆಂಗು, ಗೇರು, ಹಲಸು, ಮಾವು ಬೇಸಾಯದ ಕುರಿತು ಸಹ ಮಾಹಿತಿ ಸಿಕ್ಕಿತು. ಈ ಬಾರಿಯ ‘..ಮಾತುಕತೆ’ಗೆ ಬೆಳಗಾವಿಯಿಂದ Vinod R Patil ತಮ್ಮ ತಂಡದೊಂದಿಗೆ ಬಂದಿದ್ದರು. ನರಗುಂದದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಹ ಆಗಮಿಸಿ, ಸಂಜೆಯವರೆಗೆ ಆಸಕ್ತಿಯಿಂದ ಮಾತು ಆಲಿಸಿದ್ದು ವಿಶೇಷ.

Advertisement

ಉಳಿದಂತೆ ಮೈಸೂರು, ಗದಗ, ಧಾರವಾಡ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಕೃಷಿ ಆಸಕ್ತರೂ ಸೇರಿ 120 ಜನರು ಭಾಗವಹಿಸಿದ್ದರು. ಮುಂದಿನ ಆವೃತ್ತಿಯ ‘…ಮಾತುಕತೆ’ಯನ್ನು ಇರಕಲ್ಲಗಡದ ರೈತ ಹಾಗೂ ದೇಸಿ ಬೀಜ ಸಂರಕ್ಷಕ ಹಂಚಾಳಪ್ಪ ಅವರು ತಮ್ಮ ತೋಟದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದರು. ಕಾಮನೂರಿನ ರೈತ ಮಲ್ಲಪ್ಪ ಕುಂಬಾರ ಸಾವಯವ ಉತ್ಪನ್ನ ಹಾಗೂ ಕಿರಣ್ ಶೆಡ್ಡೆ ಪುಸ್ತಕ ಮಳಿಗೆ ನಿರ್ವಹಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಪಾವಿತ್ರ್ಯತೆ ಹೇಗೆಲ್ಲಾ ಉಳಿಸಬಹುದು..ಒಮ್ಮೆ ಯೋಚಿಸಿ ನೋಡಿ..

6 hours ago

ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಡ್ರೋನ್‌ ಬಳಕೆ | 1 ವರ್ಷಕ್ಕೆ ಅನುಮೋದನೆಯನ್ನು ವಿಸ್ತರಿಸಿದ ಸರ್ಕಾರ

ಕೃಷಿಯಲ್ಲಿ ಡ್ರೋನ್‌ ಬಳಕೆಯ ಬಗ್ಗೆ ಸರ್ಕಾರ ಒಂದು ವರ್ಷದ ಅವಧಿಗೆ ಅನುಮೋದನೆ ವಿಸ್ತರಣೆ…

7 hours ago

ಆತ್ಮನಿರ್ಭರ ಗೋವಂಶ | ಮಲೆನಾಡಗಿಡ್ಡ ಹಸು ನಮಗೆ ಹಲವು ಪಾಠ ಕಲಿಸಬಲ್ಲವು..!

ಮಲೆನಾಡು ಗಿಡ್ಡ ತಳಿ ವಿಶೇಷತೆ ಹಾಗೂ ಭಾರತೀಯ ಗೋತಳಿ ಉಳಿವಿಗೆ ಪ್ರಯತ್ನ ನಡೆಯಬೇಕಿದೆ.

8 hours ago

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(Loksabha Elections 2024) ತೆರೆ ಬಿದ್ದಿದೆ. ಇನ್ನು ಫಲಿತಾಂಶಕ್ಕಾಗಿ ಕಾಯೋದೊಂದೇ …

1 day ago

ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |

ಕೊಕ್ಕೋ ಧಾರಣೆ ವಾರದಲ್ಲಿ 100 ರೂಪಾಯಿ ಇಳಿಕೆಯಾಗಿದೆ.

2 days ago