Advertisement
ನಂದನವನ

ಶಿಕ್ಷಕರ ದಿನ | ತಾತ್ವಿಕ, ಶಾಸ್ತ್ರೀಯ ಹಾಗೂ ಸಮಕಾಲೀನ ಅವಶ್ಯಕತೆ

Share

ಜೀವನದಲ್ಲಿ ಗುರು ಅಥವಾ ಶಿಕ್ಷಕರ ಸ್ಥಾನವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ತಾಯಿ ತಂದೆ ಜೀವ ನೀಡಿದರೆ, ಗುರು ಜ್ಞಾನ ನೀಡುತ್ತಾನೆ; ಜೀವನವನ್ನು ರೂಪಿಸುತ್ತಾನೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ “ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬ ಮಂತ್ರದಲ್ಲಿ ಗುರುಗಳನ್ನೂ ತ್ರಿಮೂರ್ತಿಗಳ ಸಮಾನ ಸ್ಥಾನದಲ್ಲಿ ಕಾಣಲಾಗಿದೆ. ಈ ತತ್ತ್ವವೇ ಶಿಕ್ಷಕರ ದಿನಾಚರಣೆಯ ಅಂತರಂಗ ಅರ್ಥ.

ಶಾಸ್ತ್ರೀಯ ನೆಲೆ :  ಉಪನಿಷತ್ತುಗಳು, ಗೀತೆ, ಧರ್ಮಶಾಸ್ತ್ರಗಳಲ್ಲಿ ಗುರು–ಶಿಷ್ಯ ಸಂಬಂಧದ ಪಾವಿತ್ರ್ಯವನ್ನು ಅತಿ ಉನ್ನತ ಮಟ್ಟದಲ್ಲಿ ವಿವರಿಸೈಡ್.. “ಆಚಾರ್ಯ ದೇವೋ ಭವ” ಎಂಬ ವಾಕ್ಯವು ಗುರುನನ್ನು ದೇವರ ಸಮಾನರನ್ನಾಗಿ ಸ್ಥಾಪಿಸುತ್ತದೆ. ಶಾಸ್ತ್ರಗಳಲ್ಲಿ ಶಿಕ್ಷಣವನ್ನು “ಅಪರ ವಿದ್ಯೆ” (ಲೌಕಿಕ, ಕೌಶಲ್ಯ ಸಂಬಂಧಿತ) ಮತ್ತು “ಪರ ವಿದ್ಯೆ” (ಆಧ್ಯಾತ್ಮಿಕ, ಆತ್ಮಜ್ಞಾನ) ಎಂದು ವಿಭಜಿಸಲಾಗಿದೆ. ಶಿಕ್ಷಕನು ಎರಡನ್ನೂ ಸಮತೋಲನಗೊಳಿಸಿ ಶಿಷ್ಯನನ್ನು ಕೇವಲ ವೃತ್ತಿಜೀವನಕ್ಕೆ ಸಿದ್ಧಗೊಳಿಸುವುದಲ್ಲ, ಸಂಪೂರ್ಣ ಮಾನವನನ್ನಾಗಿ ರೂಪಿಸುವ ಹೊಣೆಗಾರನಾಗುತ್ತಾನೆ.

ಶಿಕ್ಷಕರ ದಿನದ ಆಚರಣೆ – ಅರ್ಥ ಮತ್ತು ಮಹತ್ವ :  ಭಾರತದಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ. ಅವರು ತತ್ವಶಾಸ್ತ್ರಜ್ಞರೂ, ರಾಷ್ಟ್ರಪತಿಗಳೂ ಆಗಿದ್ದರೂ, ತಮ್ಮನ್ನು “ಮುಖ್ಯವಾಗಿ ಶಿಕ್ಷಕ” ಎಂದು ಪರಿಚಯಿಸಿಕೊಂಡರು. ಇದರಿಂದಲೇ ಶಿಕ್ಷಕರ ಸ್ಥಾನ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದು ಸ್ಪಷ್ಟವಾಗುತ್ತದೆ. ಶಿಕ್ಷಕರ ದಿನವು ಕೇವಲ ಗೌರವ ಸೂಚನೆಯ ದಿನವಲ್ಲ; ಅದು ಸಮಾಜ–ಶಿಕ್ಷಕ–ವಿದ್ಯಾರ್ಥಿಗಳ ಸಂಬಂಧವನ್ನು ಮರುಪರಿಶೀಲಿಸುವ ದಿನವಾಗಿದೆ.

ಸಮಕಾಲೀನ ಕಾಲದ ಸವಾಲುಗಳು : ಇಂದಿನ ಸಮಾಜದಲ್ಲಿ ಮಾಹಿತಿ ಅತಿವೇಗವಾಗಿ ಹರಡುತ್ತಿದೆ. “ಗುರು–ಗುಗಲ್” ಸಂಸ್ಕೃತಿ ವಿದ್ಯಾರ್ಥಿಗಳಿಗೆ ತಕ್ಷಣದ ಉತ್ತರಗಳನ್ನು ನೀಡುತ್ತದೆ. ಆದರೆ ಮಾಹಿತಿಯನ್ನು ಜ್ಞಾನವಾಗಿ, ಜ್ಞಾನವನ್ನು ಮೌಲ್ಯವಾಗಿ ರೂಪಿಸುವ ಸಾಮರ್ಥ್ಯ ಕೇವಲ ಶಿಕ್ಷಕರಲ್ಲಿಯೇ ಅಡಕವಾಗಿದೆ. ಅಂಕ–ಮೌಲ್ಯಗಳ ಒತ್ತಡದಲ್ಲಿ ಜೀವನ–ಮೌಲ್ಯಗಳ ಬೋಧನೆ ಹಿನ್ನಡೆಯಾಗುತ್ತಿರುವುದು ಆತಂಕಕಾರಿ. ತಂತ್ರಜ್ಞಾನ ಶಿಕ್ಷಣದ ಅನುಕೂಲತೆಗಳನ್ನು ನೀಡಿದರೂ, ಗುರು–ಶಿಷ್ಯ ಸಂವಾದದ ಆತ್ಮೀಯತೆಯನ್ನು ಕುಗ್ಗಿಸುತ್ತಿದೆ.

ತುಲನಾತ್ಮಕ ದೃಷ್ಟಿಕೋನ :  ಹಿಂದಿನ ಗುರುಕುಲಗಳಲ್ಲಿ ಶಿಷ್ಯನ ಸಂಪೂರ್ಣ ಜೀವನವನ್ನು ಗುರು ನಿರ್ವಹಿಸುತ್ತಿದ್ದ. ಆಹಾರ, ವಾಸ, ವಿದ್ಯೆ, ಸಂಸ್ಕಾರ ಎಲ್ಲದರ ಮೇಲೂ ಶಿಕ್ಷಕರ ಹೊಣೆಗಾರಿಕೆ ಇತ್ತು.  ಇಂದಿನ ಕಾಲದಲ್ಲಿ ಶಿಕ್ಷಣವು ಮುಖ್ಯವಾಗಿ ತರಗತಿ–ಪಾಠಪುಸ್ತಕ–ಪರೀಕ್ಷೆಯ ಸುತ್ತ ಸೀಮಿತವಾಗಿಬಿಟ್ಟಿದೆ. ಆದರೂ ಶಿಕ್ಷಕರು ಈಗ ಮಾರ್ಗದರ್ಶಕ, ಪ್ರೇರಕ, ಜೀವನೋಪಾಯದ ದಾರಿದೀಪ, life coach ಆಗಿ ರೂಪಾಂತರಗೊಂಡಿದ್ದಾರೆ.
ಹಳೆಯ ಗುರುಗಳು ಜೀವನ ಮೌಲ್ಯ ಬೋಧಕರಾಗಿದ್ದರೆ, ಇಂದಿನ ಗುರುಗಳು ಮೌಲ್ಯಗಳ ಜೊತೆಗೆ ವೃತ್ತಿ ಕೌಶಲ್ಯಗಳ ಬೋಧಕರೂ ಆಗಿದ್ದಾರೆ.
ಆದರೂ ಕೆಲವೊಮ್ಮೆ ವಿದ್ಯೆ ಇದ್ದರೂ ವಿವೇಕವಂತರಾಗದಿರುವುದು ಆಗಾಗ ಕಾಣುತ್ತಲಿದ್ದೇವೆ.ಸಮಯ ಮತ್ತು ಕೃತಕತೆಯ ಒತ್ತಡದಲ್ಲಿ ಶಿಕ್ಶಕರು ಮತ್ತು ವಿದ್ಯಾರ್ಥಿಗಳ ನಡುವೆ ಯಾಂತ್ರಿಕ ಸಂಬಧವಾಗಿರುವುದೇ ಇದಕ್ಕೆ ಕಾರಣವಾಗಿರಬಹುದು. ಶಾಲೆಯೇನೆಂಬುದು ಒಂದು ಉದ್ಯಮದ ರೆಟಿಯಲ್ಲಿ ಬೆಳೆಯುತ್ತಿರುವುದೂ ಇನ್ನೊಂದು ಕಾರಣವಾಗಿರಬಹುದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಪ್ರೇರಣಾತ್ಮಕ ಅಂಶ :  ಶಿಕ್ಷಕರು ಕೇವಲ ಪಾಠಗಾರರಲ್ಲ, ಅವರು ಸಮಾಜದ ಭವಿಷ್ಯ ಶಿಲ್ಪಿಗಳು. ಪ್ರತಿಯೊಂದು ಸಾಧನೆಯ ಹಿಂದೆಯೂ, ಪ್ರತಿಯೊಂದು ಆವಿಷ್ಕಾರದ ಹಿಂದೆ, ಪ್ರತಿಯೊಂದು ವ್ಯಕ್ತಿತ್ವದ ರೂಪುಗೊಳಿಸುವಿಕೆಯಲ್ಲಿ ಶಿಕ್ಷಕರ ಪ್ರಭಾವ ಅಡಕವಾಗಿದೆ. ಶಿಕ್ಷಕರ ದಿನವು ವಿದ್ಯಾರ್ಥಿಗಳಿಗೆ ಕೇವಲ ಕೃತಜ್ಞತೆ ಸಲ್ಲಿಸುವ ದಿನವಲ್ಲ, ತಮ್ಮ ಶಿಕ್ಷಣವನ್ನು ಸಮಾಜದ ಬೆಳಕಾಗಿಸಲು ಪ್ರತಿಜ್ಞೆ ಮಾಡುವ ಸಂದರ್ಭವೂ ಹೌದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಆದ್ದರಿಂದ ಶಿಕ್ಷಕರ ದಿನವನ್ನು ಆಚರಿಸುವುದರ ಅಗತ್ಯತೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಇನ್ನಷ್ಟು ತೀವ್ರವಾಗಿದೆ. ಪುಸ್ತಕ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ – ಇವುಗಳು ಮಾಹಿತಿಯನ್ನು ನೀಡುತ್ತವೆ; ಆದರೆ ಪ್ರೇರಣೆ ನೀಡುವುದು, ಮೌಲ್ಯ ಬೋಧಿಸುವುದು, ವ್ಯಕ್ತಿತ್ವ ರೂಪಿಸುವುದು – ಈ ಶಕ್ತಿಯು ಶಿಕ್ಷಕರಲ್ಲಿದೆ. ಆದ್ದರಿಂದಲೇ ಶಿಕ್ಷಕರ ದಿನವು ಕೇವಲ ಗೌರವದ ದಿನವಲ್ಲ, ಅದು ಸಮಾಜದ ಬೌದ್ಧಿಕ–ನೈತಿಕ ಬಂಡವಾಳವನ್ನು ಉಳಿಸುವ, ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ದಿನವಾಗಿದೆ.  “ಗುರುವಿಲ್ಲದೆ ವಿದ್ಯೆ ಇಲ್ಲ, ವಿದ್ಯೆಯಿಲ್ಲದೆ ಬೆಳಕು ಇಲ್ಲ, ಬೆಳಕಿಲ್ಲದೆ ಜೀವನ ಇಲ್ಲ.”

ಬರಹ :
ಕುಮಾರ ಸುಬ್ರಹ್ಮಣ್ಯ ಮುಳಿಯಾಲ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!

ಭಾರತದ ಎಮ್ಮೆ ಮಾಂಸ ರಫ್ತು 2025-26ರಲ್ಲಿ 5.1 ಬಿಲಿಯನ್ ಡಾಲರ್ ತಲುಪಿದ್ದು, 2026-27ರಲ್ಲಿ…

5 hours ago

ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ

ಓಣಂ ಹಬ್ಬದ ಸಂದರ್ಭದ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕೃಷಿ ಇಲಾಖೆ ನಡೆಸಿದ…

12 hours ago

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನವೂ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು,…

14 hours ago

ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?

ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32.42ರಷ್ಟು ಹೆಚ್ಚಾದರೂ, ಉತ್ಪಾದನೆ…

14 hours ago

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

1 day ago