ತೆಲಂಗಾಣ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಒಂದೇ ಜಾಗದಲ್ಲಿ ಬೃಹತ್ ಗಾತ್ರದ 10 ಹೆಬ್ಬಾವುಗಳು ಮಂಚೇರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟ ಮಂಡಲದ ವೆಂಕಟರಾಮ್ ಪೇಟೆ ಗ್ರಾಮದ ಹೊರಪ್ರದೇಶದ ಗುಡ್ಡದ ಬಂಡೆಯ ಕೆಳಗೆ ಪತ್ತೆಯಾಗಿವೆ.
ಗ್ರಾಮದ ಹೊರಗೆ ದೇವಸ್ಥಾನ ನಿರ್ಮಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಬಂಡೆಯ ಕೆಳಗೆ ಇಷ್ಟೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಹೆಬ್ಬಾವು 10 ಅಡಿಗೂ ಹೆಚ್ಚು ಉದ್ದವಿದ್ದು, ಉಳಿದ ಎಂಟು ಹೆಬ್ಬಾವು 6-8 ಅಡಿ ಉದ್ದವಿದ್ದವು.
ಹಾವು ಹಿಡಿಯುವ ಅಬುಶೇಕ್ ಅವರ ಸಹಾಯದಿಂದ ಅರಣ್ಯ ಇಲಾಖೆ ಉಪ ಕ್ಷೇತ್ರಾಧಿಕಾರಿ ಅಬ್ದುಲ್ ಅಜರ್ ಸ್ಥಳಕ್ಕಾಗಮಿಸಿ, ಅವುಗಳನ್ನ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…