ತೆಲಂಗಾಣ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಒಂದೇ ಜಾಗದಲ್ಲಿ ಬೃಹತ್ ಗಾತ್ರದ 10 ಹೆಬ್ಬಾವುಗಳು ಮಂಚೇರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟ ಮಂಡಲದ ವೆಂಕಟರಾಮ್ ಪೇಟೆ ಗ್ರಾಮದ ಹೊರಪ್ರದೇಶದ ಗುಡ್ಡದ ಬಂಡೆಯ ಕೆಳಗೆ ಪತ್ತೆಯಾಗಿವೆ.
ಗ್ರಾಮದ ಹೊರಗೆ ದೇವಸ್ಥಾನ ನಿರ್ಮಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಬಂಡೆಯ ಕೆಳಗೆ ಇಷ್ಟೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಹೆಬ್ಬಾವು 10 ಅಡಿಗೂ ಹೆಚ್ಚು ಉದ್ದವಿದ್ದು, ಉಳಿದ ಎಂಟು ಹೆಬ್ಬಾವು 6-8 ಅಡಿ ಉದ್ದವಿದ್ದವು.
ಹಾವು ಹಿಡಿಯುವ ಅಬುಶೇಕ್ ಅವರ ಸಹಾಯದಿಂದ ಅರಣ್ಯ ಇಲಾಖೆ ಉಪ ಕ್ಷೇತ್ರಾಧಿಕಾರಿ ಅಬ್ದುಲ್ ಅಜರ್ ಸ್ಥಳಕ್ಕಾಗಮಿಸಿ, ಅವುಗಳನ್ನ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…