ತೆಲಂಗಾಣ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಒಂದೇ ಜಾಗದಲ್ಲಿ ಬೃಹತ್ ಗಾತ್ರದ 10 ಹೆಬ್ಬಾವುಗಳು ಮಂಚೇರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟ ಮಂಡಲದ ವೆಂಕಟರಾಮ್ ಪೇಟೆ ಗ್ರಾಮದ ಹೊರಪ್ರದೇಶದ ಗುಡ್ಡದ ಬಂಡೆಯ ಕೆಳಗೆ ಪತ್ತೆಯಾಗಿವೆ.
ಗ್ರಾಮದ ಹೊರಗೆ ದೇವಸ್ಥಾನ ನಿರ್ಮಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಬಂಡೆಯ ಕೆಳಗೆ ಇಷ್ಟೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಹೆಬ್ಬಾವು 10 ಅಡಿಗೂ ಹೆಚ್ಚು ಉದ್ದವಿದ್ದು, ಉಳಿದ ಎಂಟು ಹೆಬ್ಬಾವು 6-8 ಅಡಿ ಉದ್ದವಿದ್ದವು.
ಹಾವು ಹಿಡಿಯುವ ಅಬುಶೇಕ್ ಅವರ ಸಹಾಯದಿಂದ ಅರಣ್ಯ ಇಲಾಖೆ ಉಪ ಕ್ಷೇತ್ರಾಧಿಕಾರಿ ಅಬ್ದುಲ್ ಅಜರ್ ಸ್ಥಳಕ್ಕಾಗಮಿಸಿ, ಅವುಗಳನ್ನ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…