ತೆಲಂಗಾಣ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಒಂದೇ ಜಾಗದಲ್ಲಿ ಬೃಹತ್ ಗಾತ್ರದ 10 ಹೆಬ್ಬಾವುಗಳು ಮಂಚೇರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟ ಮಂಡಲದ ವೆಂಕಟರಾಮ್ ಪೇಟೆ ಗ್ರಾಮದ ಹೊರಪ್ರದೇಶದ ಗುಡ್ಡದ ಬಂಡೆಯ ಕೆಳಗೆ ಪತ್ತೆಯಾಗಿವೆ.
ಗ್ರಾಮದ ಹೊರಗೆ ದೇವಸ್ಥಾನ ನಿರ್ಮಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಬಂಡೆಯ ಕೆಳಗೆ ಇಷ್ಟೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಹೆಬ್ಬಾವು 10 ಅಡಿಗೂ ಹೆಚ್ಚು ಉದ್ದವಿದ್ದು, ಉಳಿದ ಎಂಟು ಹೆಬ್ಬಾವು 6-8 ಅಡಿ ಉದ್ದವಿದ್ದವು.
ಹಾವು ಹಿಡಿಯುವ ಅಬುಶೇಕ್ ಅವರ ಸಹಾಯದಿಂದ ಅರಣ್ಯ ಇಲಾಖೆ ಉಪ ಕ್ಷೇತ್ರಾಧಿಕಾರಿ ಅಬ್ದುಲ್ ಅಜರ್ ಸ್ಥಳಕ್ಕಾಗಮಿಸಿ, ಅವುಗಳನ್ನ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…