ಶಾಸ್ತ್ರಿಗಳಿಗೆ ಬದುಕೇ ಯಕ್ಷಗಾನವಾಗಿತ್ತು. ಯಕ್ಷಗಾನವೇ ಬದುಕು. ಹಲವು ಪ್ರಸಂಗಗಳು ಕಂಠಸ್ಥವಾಗಿದ್ದುವು. ರಂಗದ ನಿರ್ದೇಶಕ. ರಂಗಭಾಷೆಯ ಅನುಷ್ಠಾನದತ್ತ ಬಿಗು ನಿಲುವು. ಪೌರಾಣಿಕ ಪ್ರಸಂಗಗಳ ಪದ್ಯಗಳಿಗೆ ಮೋಹಕ ಧ್ವನಿಯ ಸ್ಪರ್ಶ. ವಿವಿಧ ಮೇಳಗಳಲ್ಲಿ ತಿರುಗಾಟ. ಹವ್ಯಾಸಿ ಆಟ-ಕೂಟಗಳಲ್ಲಿ ವ್ಯವಸಾಯ.
ತಿರುಮಲೇಶ್ವರ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಭಾಗವತಿಕೆಯ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಅನುಭವದಿಂದ ‘ತೆಂಕಬೈಲು’ ಮಟ್ಟು ಸ್ಥಾಪಿಸಿದ ಹೆಗ್ಗಳಿಕೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ಇವರ ಅನುಭವದ ಕೊಡುಗೆ ಅನನ್ಯ.
ಅಪಾರ ಶಿಷ್ಯವೃಂದವನ್ನು ಹೊಂದಿದ ಶಾಸ್ತ್ರಿಗಳಿಗೆ ಎರಡು ವರುಷದ ಹಿಂದೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಕಿರು ಪುಸ್ತಿಕೆಯೊಂದು ಮುದ್ರಣಗೊಂಡಿತ್ತು. ತಿರುಮಲೇಶ್ವರ ಶಾಸ್ತ್ರಿಯವರ ಪುತ್ರ ಮುರಳಿಕೃಷ್ಣ. ಇವರ ಅಧ್ಯಾಪಕರು. ತಂದೆಯ ಶೈಲಿಯನ್ನು ಮುಂದುವರಿಸುತ್ತಿರುವ ಭಾಗವತ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…