Advertisement
ಸುದ್ದಿಗಳು

ಥೈಲ್ಯಾಂಡಿನಲ್ಲಿ ಅಡಿಕೆ ಬಳಕೆ ಇಳಿಕೆ – ರಾಷ್ಟ್ರವ್ಯಾಪಿ ನಿಯಂತ್ರಣ ನೀತಿ ಇಲ್ಲ | WHO ವೆಬಿನಾರ್‌ನಲ್ಲಿ ಪ್ರೊ. ಅನಕ್

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನಲ್ಲಿ, ಥೈಲ್ಯಾಂಡಿನ ತಜ್ಞರು ಅಡಿಕೆ ಬಳಕೆ ನಿಯಂತ್ರಣದ ಬಗ್ಗೆ ಮಾತನಾಡಿದರು.ಥೈಲ್ಯಾಂಡಿನ ಚಿಯಾಂಗ್ ಮೈ ಮೂಲದ ಪ್ರೊಫೆಸರ್ ಅನಕ್ ಐ ಅಮರೂನ್ ಅವರು ಮಾತನಾಡಿ, “ಉತ್ತರ ಥೈಲ್ಯಾಂಡಿನಲ್ಲಿ ಅಡಿಕೆ ಜಗಿಯುವುದು ಕಡಿಮೆಯಾಗುತ್ತಿದೆ ಎಂಬುದು ಕಂಡುಬಂದರೂ, ರಾಷ್ಟ್ರವ್ಯಾಪಿ ಸಮೀಕ್ಷೆ ಇಲ್ಲದೆ ನಿಖರ ನಿರ್ಧಾರ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಪ್ರೊ. ಅನಕ್ ಅವರ ಪ್ರಕಾರ, ಉತ್ತರ ಥೈಲ್ಯಾಂಡಿನಲ್ಲಿ ಬಾಯಿ ಕ್ಯಾನ್ಸರ್ ಸಂಭವನೀಯತೆಯ ಕುರಿತು ಎರಡು ಅಧ್ಯಯನ ಸರಣಿಗಳು ನಡೆದಿವೆ. ಅಧ್ಯಯನ ಫಲಿತಾಂಶದಲ್ಲಿ , ಬಾಯಿ ಕ್ಯಾನ್ಸರ್ ಪ್ರಮಾಣ ಏರಿಕೆಯಾಗುತ್ತಿರುವುದು ಹಾಗೂ ನಂತರ ಸ್ವಲ್ಪ ಮಟ್ಟಿಗೆ ಸ್ಥಿರಗೊಂಡರೂ, ಇದೀಗ ಮತ್ತೆ ಏರಿಕೆಯಾಗುವ ಸಾಧ್ಯತೆ ಎಂದು ಹೇಳಿದರು.

ಹಿಂದಿನ ಅಧ್ಯಯನಗಳಲ್ಲಿ ಸುಮಾರು 50% ರೋಗಿಗಳು ಅಡಿಕೆ ಜಗಿಯುತ್ತಿದ್ದರು, ಆದರೆ ಇತ್ತೀಚಿನ ಅಧ್ಯಯನದಲ್ಲಿ ಅದು ಕೇವಲ 14%ಕ್ಕೆ ಇಳಿದಿದೆ. ವಿಶೇಷವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈಗ ಅಡಿಕೆ ಜಗಿಯುವ ಅಭ್ಯಾಸ ತೊರೆದಿರುವುದು ಕಂಡುಬಂದಿದೆ. ಆದರೂ ದೇಶದ ಬೇರೆ ಭಾಗಗಳಲ್ಲಿ ಪರಿಸ್ಥಿತಿ ಏನೆಂಬುದು ತಿಳಿಯಲು ಇನ್ನೂ ರಾಷ್ಟ್ರೀಯ ಸಮೀಕ್ಷೆ ಅಗತ್ಯವೆಂದು ಅವರು ಹೇಳಿದರು.

ಚಿಯಾಂಗ್ ಮೈನಲ್ಲಿ ತಾನು ವೈದ್ಯನಾಗಿ ಕಾರ್ಯನಿರ್ವಹಿಸುವಾಗ ಇನ್ನೂ ಅಡಿಕೆ ಬಳಕೆಯೊಂದಿಗೆ ಸಂಬಂಧಿಸಿದ ಬಾಯಿ ಕ್ಯಾನ್ಸರ್ ಪ್ರಕರಣಗಳನ್ನು ನೋಡುತ್ತಿದ್ದೇನೆ ಎಂದು ಪ್ರೊ. ಅನಕ್ ತಿಳಿಸಿದ್ದಾರೆ. ಅಡಿಕೆ ಬಳಕೆಯಿಂದ ಹಲ್ಲುಗಳಲ್ಲಿ ಕಪ್ಪು ಕಲೆ ಹಾಗೂ ಬಾಯಿಯ ಒಳಭಾಗದಲ್ಲಿ ಕ್ಯಾನ್ಸರ್ ಉಂಟಾಗುವ ದೃಶ್ಯಗಳನ್ನು ಅವರು ಉದಾಹರಣೆ ಸಹಿತ ಹೇಳಿದರು.

ಪ್ರೊ. ಅನಕ್ ಐ  ಅಮರೂನ್ ಅವರು ಅಡಿಕೆ ನಿಯಂತ್ರಣಕ್ಕೆ ಮೂರು ಹಂತದ ಕ್ರಮಗಳನ್ನು ಸೂಚಿಸಿದರು: ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಕೈಜೋಡಿಸಿ ಬಾಯಿ ಕ್ಯಾನ್ಸರ್ ಅಪಾಯದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ತಂಬಾಕು ಮತ್ತು ಮದ್ಯದಂತೆ ಅಡಿಕೆಯ ಮೇಲೂ ರಾಷ್ಟ್ರವ್ಯಾಪಿ ನಿಯಮ ಅಥವಾ ನೀತಿ ಇಲ್ಲ. ಹೀಗಾಗಿ ಸರ್ಕಾರ ತಕ್ಷಣ ನೀತಿ ರೂಪಿಸಬೇಕೆಂದು ಅವರು ಹೇಳಿದರು.

ಮ್ಯಾನ್ಮಾರ್, ಕಂಬೋಡಿಯಾ, ಲಾವೋಸ್ ದೇಶಗಳಿಂದ ಬಂದ ಕಾರ್ಮಿಕರಲ್ಲಿ ಇನ್ನೂ ಅಡಿಕೆ ಬಳಕೆ ಮುಂದುವರಿದಿದೆ. ಬಹುತೇಕ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಅಡಿಕೆ ಮಾರಾಟ ನಡೆಯುತ್ತಿರುವುದು ದೊಡ್ಡ ಅನುಷ್ಠಾನ ಸವಾಲಾಗಿದೆ. ಗಡಿ ವ್ಯಾಪಾರ ನಿಯಂತ್ರಣ ಹಾಗೂ ಈ ಸಮುದಾಯಗಳಲ್ಲಿ ಶಿಕ್ಷಣ ಅಗತ್ಯ ಎಂದು ಅವರು ಹೇಳಿದರು.

ದಂತವೈದ್ಯರು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅಡಿಕೆ ಬಳಕೆದಾರರನ್ನು ಗುರುತಿಸಿ, ಅವರಿಗೆ Oral Submucous Fibrosis, ಪ್ರಾರಂಭಿಕ ಹಂತದ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿ ತಕ್ಷಣ ಮಾಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬಾಯಿ ಕ್ಯಾನ್ಸರ್ ಗುಣಮುಖರಾದವರೂ ಸಹ ಅಡಿಕೆ, ಧೂಮಪಾನ, ಮದ್ಯ ಸೇವನೆ ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಕ್ಯಾನ್ಸರ್ ಮರುಕಳಿಸುವ ಹಾಗೂ ಎರಡನೇ ಗಡ್ಡೆ ಉಂಟಾಗುವ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಒಟ್ಟಾರೆ, ಥೈಲ್ಯಾಂಡಿನಲ್ಲಿ ಅಡಿಕೆ ಬಳಕೆ ಕಡಿಮೆಯಾಗುತ್ತಿರುವ ಸೂಚನೆಗಳಿದ್ದರೂ, ಗಡಿ ವ್ಯಾಪಾರ, ಕಾನೂನು ಕೊರತೆ ಹಾಗೂ ಜನಜಾಗೃತಿ ಅಭಾವದಿಂದ ಸಮಸ್ಯೆ ಇನ್ನೂ ಮುಂದುವರಿದಿದೆ ಎಂದು  ಅಭಿಪ್ರಾಯಪಟ್ಟರು.

ಇದನ್ನೂ ಓದಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

3 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

10 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

1 day ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago