MIRROR FOCUS

ದೀಪ್ ದೀಪೋಳಿಗೆ – ಮಲೆನಾಡಿನಲ್ಲಿ ದೀಪದ ಕೋಲು ಹಚ್ಚುವ ಸಂಭ್ರಮ | ಆಧುನಿಕತೆಯ ಮುಂದೆ ಉಳಿಯಬಹುದಾ ಈ ಸಂಭ್ರಮ.?

Share

ದೀಪ್ ದೀಪೋಳಿಗೆ… ಅವರ ಮನೆ ಹೋಳಿಗೆ ಇವರ ಮನೆ ಹೋಳಿಗೆ…. ಅಂತ ಜೋರಾಗಿ ಕೂಗುತ್ತಾ ಸಂಜೆ ಆರೂವರೆ ಹೊತ್ತಿಗೆ ದೀಪಾವಳಿಯ(Diwali) ಹಬ್ಬದ ದಿನ ಮಲೆನಾಡಿನ(Malenadu) ಮನೆ ಮನೆಯಲ್ಲೂ ದೈವ ದೇವರು(God) ಕೃಷಿ ಭೂಮಿ(Agricultural field) ನಿಸರ್ಗಕ್ಕೆ ದೀಪ ಹಚ್ಚಿ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆ ಮಾಡುವ ಸಮಯ..‌ ದೀಪಾವಳಿ ಗೋಪೂಜೆ(Gopooje)ಪಟಾಕಿ ಯ ಸಂಭ್ರಮ ದ ಜೊತೆಗೆ ಮಲೆನಾಡಿನಲ್ಲಿ ದೀಪದ ಕೋಲು ಹಚ್ಚುವ ಸಂಭ್ರಮ…..

Advertisement
Advertisement

ನನ್ನ ಬಾಲ್ಯದಲ್ಲಿ ನಮ್ಮ ಮನೆಯ ನೌಕರ ಹಬ್ಬಕ್ಕೆ ಮೊದಲು ಪುಂಡಿ ಮರದ ಕೋಲನ್ನ ನಮ್ಮನೆಗೆ ತಂದು ಕೊಡುತ್ತಿದ್ದ.
ಹಾಲುಬಿಳುಪಿನ ಟೊಳ್ಳಾದ ಮೂರು ಅಡಿಯ ಈ ಕೋಲು ನೋಡಲೇ ಸುಂದರ…!! ಈ ಕೋಲಿಗೆ ಶುದ್ದ ಹತ್ತಿ ಬಟ್ಟೆಯ ಟೇಪ್ ಗೆ ಎಣ್ಣೆ ಹಚ್ಚಿ ಅದನ್ನು ಕೋಲಿನ‌ ತುದಿಗೆ ಸಿಕ್ಕಿಸಿ ಆ ಟೇಪ್ ತುದಿಗೆ ಬೆಂಕಿ ಹಚ್ಚುವ ಆಚರಣೆ ಮಲೆನಾಡಿನಲ್ಲಿ ಇದೆ. ಮನೆ, ತುಳಸಿ ಕಟ್ಟೆ, ಕೊಟ್ಟಿಗೆ , ಗೊಬ್ಬರದ ಗುಂಡಿ, ಬಾವಿ, ತೋಟ, ಗದ್ದೆ , ಕಾಡಿನ ಬ್ರಹ್ಮ,ಚೌಡಿ, ನಾಗ , ಊರ ದೇವಸ್ಥಾನಗಳಿಗೆ ಹೀಗೆ ಎಲ್ಲರಿಗೂ ಈ ಕೋಲು ದೀಪ ಹಚ್ಚಿ ವರ್ಷಕ್ಕೊಮ್ಮೆ ಕೃತಜ್ಞತೆ ಸಲ್ಲಿಸುವ ಭಯ ಭಕ್ತಿಯ ಆಚರಣೆ ಇತ್ತು. ಸಂಜೆ ಹೊತ್ತಿಗೆ ಆಗಷ್ಟೇ ಹಾಲುತುಂಬಿದ ಬತ್ತದ ಗದ್ದೆ ಯಲ್ಲಿ ಹಚ್ಚುವ ಈ ಕೋಲ ದೀಪ ಬರೀ ಪೂಜನೀಯ ಮಾತ್ರ ವಲ್ಲದೇ ಸಂಜೆ ಹೊತ್ತಿಗೆ ಬರುವ ರಸ ಹೀರುವ ಉಪದ್ರವಿ ಕೀಟಗಳು, ದುಂಬಿಗಳು ಈ ದೀಪ ಜ್ವಾಲೆಗೆ ಆಹುತಿ ಯಾಗಿ ದೀಪ ರೈತರಿಗೆ ಉಪಕಾರಿಯೂ ಆಗುತ್ತದೆ ಎಂಬ ನಂಬುಗೆಯಿದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ದೀಪದ ಮಹತ್ವದ ಅರಿವಿಲ್ಲದೇ ಯಾಂತ್ರಿಕ ಆಚರಣೆಯಾಗುತ್ತಿದೆ. ವಿಶೇಷವಾಗಿ ಈ ಕೋಲು ದೀಪಕ್ಕೆ ಪುಂಡಿ ಕೋಲು ಬಳಸುತ್ತಿಲ್ಲ.‌ ಹೆಚ್ಚಿನವರು ಅಡಿಕೆ ದಬ್ಬೆ, ವಾಟೆ ಸಿಗಳಿನ ಕೋಲು ಬಳಸುತ್ತಾರೆ. ಅತಿ ಸೋಮಾರಿತನವೋ , ಮಾಡುವವರು ಮಟ್ಟುವವರು ಇಲ್ಲದ ಕಾರಣವೋ , ಪುಂಡಿ ಕೋಲು ಲಭ್ಯವಿಲ್ಲದೇ ಇರುವ ಕಾರಣವೋ ಗೊತ್ತಿಲ್ಲ ಕೆಲವರು ಸಲೀಸಾಗಿ ಸಿಗುವ ನೀಲಗಿರಿ ಪೆಲ್ಲೆಟಾ ಕಡ್ಡಿಗೆ ಕೈಗೆ ಸಿಕ್ಕ ಪಾಲಿಸ್ಟರ್ ಬಟ್ಟೆ ಸುತ್ತಿ ದೀಪ ಹಚ್ಚುವ ಶಾಸ್ತ್ರ ಮಾಡಿ ಮುಗಿಸುತ್ತಿದ್ದಾರೆ.

ಹಿಂದೆ ಈ ದೀಪ ಹಚ್ಚುವ ಸಂಧರ್ಭದಲ್ಲಾದರೂ ಊರ ದೇವಸ್ಥಾನ, ನಾಗರ ಬನ , ಕೆರೆ ಯ ಸಮೀಪಕ್ಕೆ ವರ್ಷಕ್ಕೊಮ್ಮೆ ಹೋಗುತ್ತಿದ್ದರು. ಈಗ ಬಹಳಷ್ಟು ಜನ ಮನೆಯಂಗಳದಲ್ಲೇ ತೋಟ ಗದ್ದೆ ಊರ ದೇವರು ಬನ ಗಳ ದೇವರನ್ನು ಕರೆದು ಕೋಲು ದೀಪ ಹಚ್ಚಿ “ದೀಪೋಳಿಗೆ” ಎಂದು ಶಾಸ್ತ್ರ ಮುಗಿಸಿಬಿಡುತ್ತಾರೆ.

ಮಲೆನಾಡಿನ ದೇವಸ್ಥಾನದ ಹೊರ ಆವರಣದಲ್ಲಿ ನೀಲಗಿರಿ ಪೆಲ್ಲೆಟಾ ಜಿಗ್ಗಿನ ಕಡ್ಡಿಯ ತುದಿಯಲ್ಲಿ ಅರ್ಧ ಸುಟ್ಟ ಪಾಲಿಸ್ಟರ್ ಬತ್ತಿ ಬದಲಾದ ಮಲೆನಾಡಿನ ಕಥೆ ಮತ್ತು ಭವಿಷ್ಯದ ಅಂಧಕಾರವನ್ನು ವಿಶ್ಲೇಷಣೆ ಮಾಡುತ್ತಿರುವಂತೆ ತೋರುತ್ತದೆ ದೀಪೋಳಿಗೆ….

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

9 hours ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

9 hours ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

9 hours ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

10 hours ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

10 hours ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

10 hours ago