#Naturalfarming | ಸಹಜ ಕೃಷಿಯ ದಿಕ್ಕನ್ನೇ ಬದಲಿಸಿದ G-20 ಸಭೆ..? | ಅಂದು ಈಸ್ಟ್ ಇಂಡಿಯಾ ಕಂಪನಿ.. ಇಂದು ಬಹುರಾಷ್ಟ್ರೀಯ ಕಂಪನಿ.. ಮತ್ತೆ ಗುಲಾಮಗಿರಿಯತ್ತ ಭಾರತ…!!

September 25, 2023
11:17 AM
ನಾವು ಮತ್ತೆ ನಮ್ಮ ದೇಶದ ಕೃಷಿಯನ್ನು ಬ್ರೀಟೀಷರ ಕೈಗೆ ಒಪ್ಪಿಸುತ್ತಿದ್ದೇವೋ ಎನ್ನುವ ಅನುಮಾನ ಮೂಡಿದೆ. 

ವಾರಾಣಸಿಯಲ್ಲಿಂದು ಕೃಷಿ ಮುಖ್ಯ ವಿಜ್ಞಾನಿಗಳ ಸಭೆಯ ಆಯೋಜನೆಯೊಂದಿಗೆ ಜಿ -20 ಅಧ್ಯಕ್ಷತೆಯಲ್ಲಿ ಭಾರತವು 100 ನೇ  ಶೃಂಗಸಭೆಯ ಆತಿಥ್ಯವಹಿಸಿ ಪ್ರಮುಖ ಮೈಲಿಗಲ್ಲಿನ ಸಾಧನೆಯ ಸಂಭ್ರಮವನ್ನು ಆಚರಿಸಿತು. ಜಿ 20 ಅಧ್ಯಕ್ಷತೆಯಲ್ಲಿ ಗಣನೀಯ ಚರ್ಚೆಗಳು ಸಮಗ್ರ ಮತ್ತು ಚೇತರಿಕೆಯ ವೃದ್ಧಿ, ಎಸ್.ಡಿ.ಜಿ. ಪ್ರಗತಿ, ಹಸಿರು ಅಭಿವೃದ್ಧಿ ಮತ್ತು ಪರಿಸರಕ್ಕಾಗಿ ಜೀವನಶೈಲಿ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗಿತ್ತು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಭಾರತದ G20 ಪ್ರೆಸಿಡೆನ್ಸಿ ಥೀಮ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು, G20 ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಕೃಷಿ ಕಾರ್ಯ ಗುಂಪು ಬಯಸಿದೆ.

Advertisement

ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ಕೆಲಸ ಮಾಡಲು ನೀತಿ ಮಟ್ಟದಲ್ಲಿ ಸಂಘಟಿಸಲು ಸದಸ್ಯ ರಾಷ್ಟ್ರಗಳಿಗೆ ಶೃಂಗಸಭೆಯು ಅವಕಾಶವನ್ನು ಒದಗಿಸಿದೆ. ಕೃಷಿಗೆ ಸಂಬಂಧಿಸಿದಂತೆ, ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳೆಂದರೆ ಆಹಾರ ಅಭದ್ರತೆ, ಜಾಗತಿಕ ಮೌಲ್ಯ ಸರಪಳಿಯಲ್ಲಿನ ಅಂತರ, ಹವಾಮಾನ ಬದಲಾವಣೆಯಿಂದಾಗಿ ಬೆಳೆ ಉತ್ಪಾದಕತೆ ಮತ್ತು ಉದ್ಯೋಗ. ಸಂಚಿಕೆ ಟಿಪ್ಪಣಿಯ ಮೂಲಕ, ಈ ಸವಾಲುಗಳನ್ನು ಎದುರಿಸುವುದು ಗುರಿಯಾಗಿದೆ.

ಈ ಮಧ್ಯೆ ನಾವು ಮತ್ತೆ ನಮ್ಮ ದೇಶದ ಕೃಷಿಯನ್ನು ಬ್ರೀಟೀಷರ ಕೈಗೆ ಒಪ್ಪಿಸುತ್ತಿದ್ದೇವೋ ಎನ್ನುವ ಅನುಮಾನ ಮೂಡಿದೆ.  ನಿಮಗೆ ಗೊತ್ತಿರಲಿ ಒಂದು ಬಹುರಾಷ್ಟ್ರೀಯ ಕಂಪನಿ ನಮ್ಮ ದೇಶದೊಳಗೆ ಕುಲಾಂತರಿ ಕೃಷಿಯ ಪದ್ದತಿಯನ್ನು ತರುವುದಕ್ಕೆ ರಾತ್ರಿ ಹಗಲು ಬಹಳಷ್ಟು ಶ್ರಮಿಸುತ್ತಿದೆ. ಸಾವಿರಾರು ಕೋಟಿ ಸುರಿಯುತ್ತಿದೆ. ಮೊನ್ನೆ ಮೊನ್ನೆ ತಾನೇ ಇದರ ಬಗ್ಗೆ ನಮ್ಮ ರಾಜ್ಯದಲ್ಲೂ ಹಲವು ಭಾಗಗಳಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿತ್ತು. ಕುಲಾಂತರಿ ಸಾಸಿವೆ ಎಂಬ ವಿಷಕ್ಕೆ.

ಇನ್ನೊಂದು ಕಂಪನಿ,ಇದರ ಬಗ್ಗೆ ಅಂತಹ ಪರಿಚಯ ಬೇಕಿಲ್ಲ ಎಂದುಕೊಳ್ಳುತ್ತೇನೆ.. ಈ ಕಂಪನಿಯ ಉಸ್ತುವಾರಿ ಮಹತ್ತರ ಕನಸು ಏನೆಂದರೆ, ಇಡೀ ವಿಶ್ವಕ್ಕೆ ಆಹಾರ ಈತ ಒದಗಿಸಬೇಕಂತೆ. ಅದೂ ಕುಲಾಂತರಿ ಬೆಳೆಯ ಮುಖಾಂತರ. ಇನ್ನೊಂದು ಅರ್ಥದಲ್ಲಿ ಇವನು ವಿಶ್ವದ ಆಹಾರವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ಬಯಸುವ ಮಹಾನುಭಾವ.

ಈಗ..,G-20 ಸಭೆಯ ಅಂತಿಮದಲ್ಲಿ ನಮ್ಮ ಕೃಷಿಯ ಕಳಶವೆಂದು ಬಿಂಬಿಸುವ ಭಾರತೀಯ ಕೃಷಿ ಸಂಶೋಧನ ಕೇಂದ್ರ ಈಗ ಇವುಗಳ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

ಒಪ್ಪಂದ  ಹೀಗೆ ಹೇಳುತ್ತದೆ : ಸಹಜ ಕೃಷಿಯ ಸುಸ್ಥಿರತೆಗೆ, ವ್ಯಾಪ್ತಿ ದೊಡ್ಡದಾಗಿಸುವುದಕ್ಕೆ, ಎಲ್ಲವನ್ನೂ ಒಳಗೊಳ್ಳಿಸುವುದಕ್ಕೆ, ಸಂಪನ್ಮೂಲಗಳ ಅಭಿವೃದ್ಧಿಗೆ, ರೈತರ ಸಬಲೀಕರಣಕ್ಕೆ, ಅಪೌಷ್ಠಿಕತೆಯ ಭದ್ರತೆಗೆ ಹೀಗೆ ಹಲವು ರೂಪಕಗಳನ್ನು ಕೊಟ್ಟು ಒಟ್ಟಿನಲ್ಲಿ ಸಹಜ ಕೃಷಿ ಎಂಬ ಬೌದ್ಧಿಕ ವಿಚಾರವನ್ನು ವಿಷ ಜಂತುಗಳ ಪಾಲಾಗಿಸಲು ನಮ್ಮ ರಾಜಕೀಯ ಪಕ್ಷಗಳು, ಸಂಶೋಧನಾ ಕೇಂದ್ರಗಳು ಹಾಗೂ ಇನ್ನಿತರೇ ಅಂಗ ಸಂಸ್ಥೆಗಳು ಸಾಲು ಸಾಲಾಗಿ ಶಿರ ಬಾಗಿ ಅವರು ಬಿಸಾಕುವ ಎಂಜಲು ಕಾಸಿಗೆ ನಾಯಿಗಳಂತೆ ನಮ್ಮ ದೇಶದ ಕೃಷಿಯನ್ನು ಅಡವಿಡುತ್ತಿರುವುದು ಶೋಚನೀಯ ಸಂಗತಿ.

ಭಾರತದ ಕೃಷಿ ವ್ಯವಸ್ಥೆಯನ್ನು ವಿದೇಶಿ ಕಂಪನಿಗಳ ಹಾವಳಿಯಿಂದ ಮುಂದಾಗಬಹುದಾದ ಅನಾನುಕೂಲಗಳ ಬಗ್ಗೆ ರೈತರಿಗೆ ಜಾಗ್ರತೆ ಮೂಡಿಸುವ ಮೂಲಕ ಡಾಕ್ಟರ್ ಮಂಜುನಾಥ ಅವರು ಚಾಮರಾಜನಗರ ಜಿಲ್ಲೆಯ ರೈತರು ಜೊತೆಗೂಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group