MIRROR FOCUS

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ ಬಿದ್ದು, ಆ ಚಂಡನ್ನು ಎತ್ತಲು ಹೋದಾಗ, ಕಳ್ಳಿಯ ಹಾಲು ಸಿಡಿದು ತನ್ನ ಎಡಗಣ್ಣನ್ನು ಪೂರ್ತಿಯಾಗಿ ಕಳೆದುಕೊಂಡ. ಹಲವಾರು ಜನ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಆ ವೈದ್ಯರೆಲ್ಲ ನಿನಗೆ ಮತ್ತೆ ಆ ಕಣ್ಣಿನ ದೃಷ್ಟಿ ಬರುವುದಿಲ್ಲ ಎಂದು ಕೈ ಚೆಲ್ಲಿದರು.

Advertisement

ಇದಾದ 25-30 ವರ್ಷಗಳ ನಂತರ ಧಾರವಾಡದ ನಮ್ಮ ಚೈತನ್ಯ ವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದಲ್ಲಿ ಹಾಕಲಾಗುವ ಕಣ್ಣಿನ ನಾಟಿ ಔಷಧದ ವಿಷಯ ತಿಳಿದು ಪ್ರತಿ ತಿಂಗಳಿಗೊಮ್ಮೆ ಕಣ್ಣಿನ ಔಷಧಿ ಹಾಕಿಸಿಕೊಳ್ಳತೊಡಗಿದ. ಎರಡು ವರ್ಷಗಳ ನಂತರ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದು ನನಗೆ ತಿಳಿಸಿದ. ನೀವು ಈ ಔಷಧಿಯನ್ನು ಹೆಚ್ಚು ಸಲ ಹಾಕಿದಲ್ಲಿ ನನಗೆ ಬೇಗ ಕಣ್ಣು ಬರಬಹುದು ಎಂದು ಆತನೇ ಸಲಹೆ ನೀಡಿದ. ಹೌದು, ಪ್ರತಿದಿನ ತಪ್ಪದೇ ಹಾಕಿಸಬೇಕು ಎಂದಾಗ, ಆಯಿತು, ನಾನು ಪ್ರತಿದಿನ ಬರುತ್ತೇನೆ ಅಂದ. ಅದರಂತೆ ಪ್ರತಿದಿನ ಕಣ್ಣಿನ ಔಷಧಿ ಸತತವಾಗಿ ಹಾಕಿಸಿಕೊಂಡರು.

ನಂತರ ಕಣ್ಣು ಸ್ವಲ್ಪ ಸ್ವಲ್ಪವಾಗಿ ಸುಧಾರಿಸುತ್ತಾ ಹೋಯಿತು. 2 ತಿಂಗಳ ನಂತರ ವಾರದಲ್ಲಿ ಎರಡು ಬಾರಿ ಹನಿ ಹಾಕಿಸಿ ಕೊಳ್ಳಲು ತಿಳಿಸಿದೆ. ಒಟ್ಟು 3 ವರ್ಷಗಳ ನಂತರ, ಈಗ ಆತನಿಗೆ ಎಡಗಣ್ಣು ಸ್ಪಷ್ಟವಾಗಿ ಕಾಣಿಸುತ್ತದೆ. ಓದಲು, ಬರೆಯಲು, ರಾತ್ರಿ ಕೂಡ ವಾಹನ ಚಲಾಯಿಸಲು ಯಾವುದೇ ಸಮಸ್ಯೆ ಆಗುತ್ತಿಲ್ಲ. ಕಣ್ಣು ವಾಪಸು ಬಂದುದು ಅವರ ಖುಷಿಯಾದರೆ, ಅವರಿಗಿಂತ ಅವರಿಗೆ ದೃಷ್ಟಿ ಕೊಡಿಸಿದ ನನಗೂ ಅತ್ಯಂತ ಖುಷಿ.

ನಾನು ವೈದ್ಯನಲ್ಲ. ಕಣ್ಣಿನ ತಜ್ಞನಂತೂ ಅಲ್ಲವೇ ಅಲ್ಲ. ಮನೆಯಲ್ಲಿ ಸ್ವತಃ ಆಯುರ್ವೇದ ವೈದ್ಯರಾದ ನನ್ನ ತಂದೆ, ನಾಟಿ ವೈದ್ಯರಾದ ಮಾವ-ಅಜ್ಜ ಅವರು ಪಾಲಿಸುತ್ತಿದ್ದ ಚಿಕಿತ್ಸಾ ವಿಧಾನಗಳು ಅವರೊಂದಿಗೆ ಮುಗಿಯಬೇಕೆ? ಇಲ್ಲ. ಜನರಿಗೆ ತಲುಪಿಸಲೇಬೇಕು ಎಂಬ ಹಠದಿಂದ ಅವರ ಕಣ್ಣಿನ ಚಿಕಿತ್ಸೆಗಳನ್ನು ಪ್ರಾರಂಭಿಕವಾಗಿ ಶಿವಾನಂದ ಸುರಕೋಡ ಅವರ ಮೇಲೆ ಉಪಯೋಗಿಸಿದೆ. ಈ ಚಿಕಿತ್ಸೆಗಳು ಮನೆತನದಲ್ಲಿ ರೂಢಿಗತವಾಗಿದ್ದರೂ, ಮತ್ತೊಮ್ಮೆ ಪರೀಕ್ಷಿಸಲು, ಅವುಗಳ ದುಷ್ಪರಿಣಾಮಗಳನ್ನು ಅರಿಯಲು ನನ್ನ ಕಣ್ಣುಗಳನ್ನೇ ಪ್ರಯೋಗಕ್ಕೆ ಒಳಪಡಿಸಿದ್ದೆ. ಅದು ಯಾವುದೇ ಕೆಟ್ಟ ಪರಿಣಾಮ ಕಣ್ಣಿನ ಮೇಲೆ ಬೀರುವುದಿಲ್ಲ ಎಂಬುದು ಖಚಿತಪಡಿಸಿಕೊಂಡು ಈ ನಾಟಿ ಕಣ್ಣಿನ ಹನಿಯ ಚಿಕಿತ್ಸೆಯನ್ನು ಶಿವಾನಂದನ ಮೇಲೆ ಪ್ರಯೋಗಿಸಿದೆ. ಮೊದಲ ಪ್ರಯತ್ನದಲ್ಲೇ ಅದ್ಭುತ ಯಶಸ್ಸು ದೊರೆಯಿತು. ದೇವರ ದಯೆ.

Advertisement

ಈ ಕಣ್ಣಿನ ಹನಿ ಚಿಕಿತ್ಸೆಯನ್ನು ಧಾರವಾಡದಲ್ಲಿ ಪ್ರತಿ ಗುರುವಾರ, ಮತ್ತು ಇತ್ತೀಚೆಗೆ ಗಂಗಾವತಿ ಮತ್ತು ಗುಲ್ಬರ್ಗಗಳಲ್ಲಿ ಕೂಡ ಪ್ರಾರಂಭಿಸಲಾಗಿದೆ. ಎರಡು ಕಣ್ಣು ಕಾಣಿಸದವರು ಕೂಡ ದೂರದಲ್ಲಿ ಬಲ್ಬ್ ಬೆಳಕು ನಮಗೀಗ ಕಾಣಿಸುತ್ತಿದೆ ಎನ್ನುತ್ತಿದ್ದಾರೆ. ಪೂರ್ತಿ ಕಣ್ಣು ಕಾಣಿಸುವ ತನಕ ಈ ಹನಿಯನ್ನು ಹಾಕಿಸುವುದನ್ನು ಬಿಡಬೇಡಿ ಎಂದು ಅವರಿಗೆ ನಾನು ಸಲಹೆ ನೀಡಿದ್ದೇನೆ.

ಸಾಕಷ್ಟು ಜನರಿಗೆ ಕೆಲವೇ ಸಲ ಹಾಕಿಸಿದಾಗ ತಲೆನೋವು/ಅರೆ ತಲೆನೋವು ಮಾಯವಾಗಿದೆ. ಕಣ್ಣು ಕೆಂಪಗಾಗಿರುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ದುರ್ಮಾಂಸ ಬೆಳೆದಿರುವುದು, ಪ್ರಾರಂಭಿಕ ಹಂತದ ಕಣ್ಣಿನ ಪೊರೆ, ಮೂಗಿನ ಸಮಸ್ಯೆಗಳು, ಜೊತೆಗೆ ಮುಟ್ಟಿನ ಸಮಸ್ಯೆಗಳು ಪರಿಹಾರವಾದ ಸಾಕಷ್ಟು ಉದಾಹರಣೆಗಳಿವೆ.

ಅಷ್ಟೇ ಅಲ್ಲ. ಇದು ಕಾಮಣಿ, ಪಿತ್ತ ಜನಕಾಂಗ (ಲಿವರ್) ಮತ್ತು ಹೊಟ್ಟೆಯ ಸಮಸ್ಯೆಗಳಿಗೂ ಅನುಕೂಲ. ಆರು ವರ್ಷದ ಮಕ್ಕಳಿಂದ ಹಿಡಿದು ನಮ್ಮ ಉಸಿರು ಇರುವವರೆಗೂ ಹಾಕಿಸಬಹುದು.

ಕಣ್ಣಿಗೆ ಪ್ರತಿದಿನ ಧೂಳು ಬೀಳುವ ಕಾರಣ ಮುಖ್ಯವಾಗಿ ಕಣ್ಣಿನ ಕಾಯಿಲೆಗಳು ಬರುತ್ತವೆ. ಅವುಗಳನ್ನು ತಡೆಯಲು ಈ ರೀತಿಯ ಚಿಕಿತ್ಸೆಗಳು ಅತಿ ಅವಶ್ಯಕ. ಅವುಗಳನ್ನು ಪಾಲಿಸಿಯೇ ನಮ್ಮ ಹಿರಿಯರಿಗೆ ನೂರು ವರ್ಷವಾದರೂ ಕಣ್ಣು ಕಾಣಿಸುತ್ತಿದ್ದವು.

ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹಾಕಿಸಿದಲ್ಲಿ ಕಣ್ಣು ಸ್ವಚ್ಛವಾಗಿ, ಮೇಲೆ ತಿಳಿಸಿದ ಕಾಯಿಲೆಗಳು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಇದು ನಮ್ಮ ಹಿರಿಯರ ಕೊಡುಗೆ. ಆಯುರ್ವೇದ ಮತ್ತು ನಾಟಿ ಚಿಕಿತ್ಸೆಗಳು ನಮ್ಮ ದೇಶದ ಹೆಮ್ಮೆ.ಅವುಗಳನ್ನು ಪಾಲಿಸಿ-ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ಇದು ಒಂದು ನನ್ನ ಸಣ್ಣ ಪ್ರಯತ್ನ.

Advertisement
ಬರಹ :
ಡಾ. ಶ್ರೀಶೈಲ ಬದಾಮಿ, ಧಾರವಾಡ
, 9480640182
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ

2047ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ…

5 hours ago

ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ

ತುಂಗ-ಭದ್ರಾ ಎರಡೂ ಜಲಾಶಯಗಳಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ೮೦ ಸಾವಿರಕ್ಕೂ ಅಧಿಕ ಕ್ಯೂಸೆಕ್…

5 hours ago

ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |

ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು  ಬಳಸಿಕೊಂಡು ಜಾಗತಿಕವಾಗಿ ವೇಗವಾಗಿ ಬೆಳೆಯುವ ಮರಗವನ್ನು…

6 hours ago

ಬದುಕು ಪುರಾಣ | ದಾನಕ್ಕೆ ಬಂದ ಮಾನ

ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ

ಚಂದನ್‌ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…

17 hours ago

ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ

ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ…

18 hours ago