Advertisement
Opinion

ಕಾಮಾಲೆಯಲ್ಲಿ ಸಹಾಯಕ ಚಿಕಿತ್ಸೆಯಾಗಿ ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು |

Share

ಕಾಮಾಲೆ(Jaundice) ಒಂದು ರೀತಿಯಲ್ಲಿ ಸಾಮಾನ್ಯ ಕಾಯಿಲೆಯಾಗಿದ್ದರು ಕೆಲವು ಸಂದರ್ಭಗಳಲ್ಲಿ ಮಾರಕವಾಗಬಹುದು. ಕಾಮಾಲೆಯಲ್ಲಿ ವಿವಿಧ ಪ್ರಕಾರಗಳಿವೆ. ಆದರೆ ಇಲ್ಲಿ ನಾವು ಯಾವುದೇ ರೀತಿಯ ಕಾಮಾಲೆಗೆ ಮನೆಮದ್ದುಗಳನ್ನು(Home Remedies) ತಿಳಿಸಿದ್ದೇವೆ. ಕಲುಷಿತ ಆಹಾರ ಸೇವನೆ ಮತ್ತು ಕಲುಷಿತ ನೀರು(contaminated water) ಸೇವನೆಯಿಂದ ಈ ರೋಗ ಬರುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರ ಹಾಗೂ ಹಳಸಿದ ಆಹಾರ(stale food) ಸೇವನೆಯಿಂದ ಈ ರೋಗ ಬರುತ್ತದೆ. ಈ ರೋಗದಲ್ಲಿ, ರೋಗಿಯ ದೇಹದಲ್ಲಿ ರಕ್ತದ ನಷ್ಟವಾಗುತ್ತದೆ.

Advertisement
Advertisement

ದೇಹದಲ್ಲಿ ರಕ್ತದ ರಕ್ತದ ವಿಘಟನೆಯಾಗಿ ಇದರಿಂದ ಉತ್ಪತ್ತಿಯಾಗುವ ಹಳದಿ ಬಣ್ಣದ ಪದಾರ್ಥದಿಂದಾಗಿ ರೋಗಿಯ ಇಡೀ ದೇಹವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಈ ರೋಗದಲ್ಲಿ, ರೋಗಿಯ ಕಣ್ಣುಗಳು ಮತ್ತು ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೋಗದಲ್ಲಿ, ರಕ್ತದಲ್ಲಿ ವಿಷಕಾರಿ ದ್ರವಗಳ ಮಿಶ್ರಣದಿಂದಾಗಿ ಅನೇಕ ರೀತಿಯ ರೋಗಗಳು ಸಂಭವಿಸಬಹುದು. ಇದು ಯಕೃತ್ತಿನ ಊತ ಮತ್ತು ಹಸಿವಿನ ನಷ್ಟವನ್ನು ಉಂಟುಮಾಡುತ್ತದೆ.

ಹಿಂದಿಯಲ್ಲಿ ಪಿಲಿಯಾ ಎಂದು ಕರೆಯಲ್ಪಡುವ ಜಾಂಡೀಸ್ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಕಾಮಾಲೆ ಒಂದು ಸರಳ ಕಾಯಿಲೆಯಂತೆ ತೋರುತ್ತದೆ ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಭೀಕರ ರೂಪವನ್ನು ಪಡೆಯಬಹುದು ಮತ್ತು ಮುತ್ತು ರೋಗಿಯು ಸಾವಿಗಿಡಾಗಬಹುದು. ಇಂದು ನಾವು ನಿಮಗೆ ಕಮಲಿಯಲ್ಲಿ ಚಿಕಿತ್ಸೆಯೊಂದಿಗೆ ಬಳಸಬಹುದಾದ ಮನೆ ಮದ್ದುಗಳ ಬಗ್ಗೆ ತಿಳಿಸಲಿದ್ದೇವೆ. ನಿಮ್ಮ ಕಾಮಾಲೆಯನ್ನು ಗುಣಪಡಿಸಲು ಇದು ಸಹಾಯಕವಾಗುತ್ತದೆ.

ಹೆಪಟೈಟಿಸ್ A, B, ಅಥವಾ C ಅಥವಾ ಅಧಿಕ ಬಿಲಿರುಬಿನ್, ESR ನಿಂದ ಉಂಟಾಗುವ ಕಾಮಾಲೆಗೆ ಈ ಮನೆಮದ್ದುಗಳು ಪ್ರಯೋಜನಕಾರಿಯಾಗಿವೆ. ಕಾಮಾಲೆಯನ್ನು ಹೋಗಲಾಡಿಸಲು ಸರಳ ಮನೆಮದ್ದುಗಳು

ಎಳನೀರು : ದಿನಕ್ಕೆ ಕನಿಷ್ಠ 2 ತೆಂಗಿನಕಾಯಿ ನೀರನ್ನು ಕುಡಿಯಿರಿ, ಈ ತೆಂಗಿನಕಾಯಿ ನೀರನ್ನು ತಾಜಾ ಇರುವಾಗಲೇ ಸೇವಿಸಬೇಕು, ಅಂದರೆ ಅದನ್ನು ಒಡೆದ ತಕ್ಷಣ. ಇದನ್ನು 3-5 ದಿನಗಳ ಕಾಲ ಮಾಡಿದ ನಂತರ ನೀವು ಆರೋಗ್ಯವಾಗಿರುತ್ತೀರಿ. ಕೆಲವು ದಿನ ತೆಂಗಿನ ನೀರನ್ನು ಮಾತ್ರ ಮುಂದುವರಿಸಬೇಕು. ಈ ಪರಿಹಾರವು ಅನೇಕ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ. ಪಿತ್ತಜನಕಾಂಗದಲ್ಲಿ ಉಂಟಾಗುವ ಯಾವುದೇ ಕಾಯಿಲೆಗೆ ಹಿಂಜರಿಕೆಯಿಲ್ಲದೆ ಈ ಪ್ರಯೋಗವನ್ನು ಮಾಡಬಹುದು.

ಈರುಳ್ಳಿ: ಜಾಂಡೀಸ್ ಚಿಕಿತ್ಸೆಯಲ್ಲಿ ಈರುಳ್ಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಮೊದಲನೆಯದಾಗಿ, ಈರುಳ್ಳಿಯನ್ನು ಸಿಪ್ಪೆ ಸುಲಿದು ತೆಳುವಾದ ಹೋಳುಗಳಾಗಿ ಕತ್ತರಿಸಿ ಅದರಲ್ಲಿ ನಿಂಬೆ ಹಿಂಡಿ, ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಕಾಮಾಲೆ ಆದಷ್ಟು ಬೇಗ ಗುಣವಾಗುತ್ತದೆ.

ಕಡಲೆ ಬೇಳೆ: ರಾತ್ರಿ ಮಲಗುವ ಮುನ್ನ ಕಡಲೆಯನ್ನು ನೆನೆಸಿಡಿ. ಬೆಳಿಗ್ಗೆ ಎದ್ದ ಮೇಲೆ ನೆನೆಸಿದ ಬೇಳೆಯನ್ನು ನೀರಿನಿಂದ ಹೊರತೆಗೆದು ಅದರಲ್ಲಿ ಸ್ವಲ್ಪ ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸಿ. ಈ ಪರಿಹಾರವನ್ನು ಪ್ರತಿದಿನ ಒಂದರಿಂದ ಎರಡು ವಾರಗಳವರೆಗೆ ಮಾಡುವುದರಿಂದ ಕಾಮಾಲೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಶುಂಠಿ: ಶುಂಠಿಯನ್ನು ಬಳಸಿಕೊಂಡು ಕಾಮಾಲೆಗೆ ಚಿಕಿತ್ಸೆ ನೀಡಬಹುದು. ಇದಕ್ಕೆ 10 ಗ್ರಾಂ ಶುಂಠಿ, 10 ಗ್ರಾಂ ಬೆಲ್ಲ ತೆಗೆದುಕೊಳ್ಳಿ. ಈ ಪದಾರ್ಥಗಳನ್ನು ಬೆರೆಸಿ ಬೆಳಿಗ್ಗೆ ತಣ್ಣೀರಿನ ಜೊತೆಗೆ ಸೇವಿಸುವುದರಿಂದ ಕಾಮಾಲೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ: ಕಾಮಾಲೆಯಲ್ಲಿ ಬೆಳ್ಳುಳ್ಳಿ ಕೂಡ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಕನಿಷ್ಠ 4 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು ನುಣ್ಣಗೆ ರುಬ್ಬಿ 200 ಗ್ರಾಂ ಹಾಲು ಸೇರಿಸಿ. ರೋಗಿಯು ಇದನ್ನು ಪ್ರತಿದಿನ ತಿನ್ನುವುದರಿಂದ ಕಾಮಾಲೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.

ಹುಣಸೆಹಣ್ಣು: ಹುಣಸೆಹಣ್ಣನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಡಬೇಕು. ಬೆಳಿಗ್ಗೆ ನೀರಿನಲ್ಲಿ ಹುಣಸೆಹಣ್ಣನ್ನು ಚೆನ್ನಾಗಿ ಹಿಂಡಿ ಮತ್ತು ಈ ನೀರಿನಲ್ಲಿ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಕುಡಿಯಬೇಕು. ಇದನ್ನು ಎರಡು ವಾರಗಳ ಕಾಲ ಕುಡಿಯುವುದರಿಂದ ಜಾಂಡೀಸ್ ಗುಣವಾಗುತ್ತದೆ.

ಜೇನುತುಪ್ಪ ಮತ್ತು ನೆಲ್ಲಿಕಾಯಿ ರಸ: ಒಂದು ಟೀ ಚಮಚ ಜೇನುತುಪ್ಪವನ್ನು 50 ಗ್ರಾಂ ತಾಜಾ ಹಸಿರು ಆಮ್ಲಾ ರಸದೊಂದಿಗೆ ಬೆರೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಕನಿಷ್ಠ ಮೂರು ವಾರಗಳವರೆಗೆ ಕುಡಿಯುವುದು ಕಾಮಾಲೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Jaundice is a common disease that can be fatal in some cases. There are different types of jaundice. But here we have mentioned home remedies for any type of Jaundice. This disease comes from consumption of contaminated food and contaminated water. This disease comes from eating too much oily food and stale food. In this disease, there is loss of blood in the patient’s body.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

13 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

14 hours ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

14 hours ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

14 hours ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

14 hours ago

ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು

ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…

14 hours ago