ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಕಳೆದ ಕೆಲವು ಸಮಯಗಳಿಂದ ಕಳ್ಳದಾರಿಯ ಮೂಲಕ ಸಾಗಾಟವಾಗುತ್ತಿದ್ದ ಅಡಿಕೆಗೆ ಬಹುತೇಕ ಕಡಿವಾಣ ಬಿದ್ದಿದೆ ಎಂದು ಮೇಘಾಲಯದ ಸಾಮಾಜಿಕ ಸಂಘಟನೆಗಳು ಹೇಳಿವೆ. ಕಳೆದ ಕೆಲವು ದಿನಗಳಿಂದ ಕಳ್ಳಸಾಗಾಣಿಕೆಯ ಮೂಲಕ ಬರುತ್ತಿದ್ದ ಅಡಿಕೆಗೆ ಕಡಿವಾಣ ಹಾಕಲಾಗಿದೆ. ಇದೀಗ ಅಡಿಕೆ ಧಾರಣೆಯೂ ಏರಿಕೆ ಕಾಣುತ್ತಿದೆ.
ಬಾಂಗ್ಲಾದೇಶದಿಂದ ವಿವಿಧ ಗಡಿಗಳ ಮೂಲಕ ಅಕ್ರಮವಾಗಿ ಬರ್ಮಾ ಅಡಿಕೆ ಸಾಗಾಟವನ್ನು ತಡೆಯಲು ಮೇಘಾಲಯದ ವಿವಿಧ ಸಂಘಟನೆಗಳ ಪ್ರಯತ್ನದ ನಂತರ ಮೇಘಾಲಯ, ಅಸ್ಸಾಂ ಪ್ರದೇಶದಲ್ಲೂ ಅಡಿಕೆ ವಹಿವಾಟು ಸುಧಾರಣೆ ಕಂಡಿದೆ. ಮೂಲಗಳ ಪ್ರಕಾರ ಅಕ್ರಮ ವ್ಯಾಪಾರವನ್ನು ಈಗ ನಿಲ್ಲಿಸಲಾಗಿದೆ, ಇದು ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಕಾರಣವಾಯಿತು ಎಂದು ಮೇಘಾಲಯದ ವರದಿ ತಿಳಿಸಿದೆ. ಬರ್ಮಾ ಅಡಿಕೆ ಅಕ್ರಮ ಸಾಗಾಟದ ಕಾರಣದಿಂದ ಅಲ್ಲಿನ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದಕ್ಕಾಗಿ ಅಡಿಕೆ ಸಾಗಾಟ ತಡೆಗೆ ಹೋರಾಟ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ಯಾವುದೇ ಅಕ್ರಮ ಅಡಿಕೆ ಸಾಗಾಟದ ವಾಹನಗಳು ಬರುತ್ತಿಲ್ಲ ಎಂದು ವರದಿ ಮಾಡಿದೆ.
ಅಡಿಕೆ ಅಕ್ರಮ ಸಾಗಾಟ ಹಾಗೂ ಈ ವಹಿವಾಟು ನಿಜಕ್ಕೂ ಕಳವಳಕಾರಿಯಾಗಿದೆ. ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಹಿಂದೆ ಇರುವವರನ್ನು ಸರ್ಕಾರವು ಪತ್ತೆ ಮಾಡಬೇಕಿತ್ತು ಹಾಗೂ ಸಾರ್ವಜನಿಕವಾಗಿ ಈ ವಿವರ ಬಹಿರಂಗಪಡಿಸಬೇಕಿತ್ತು. ಆದರೆ ಈ ಬಗ್ಗೆ ಇದುವರೆಗೂ ಏಕೆ ಯಾವುದೇ ಕ್ರಮಗಳು ಆಗಿಲ್ಲ ಎಂದು ಸಾಮಾಜಿಕ ಸಂಘಟನೆಗಳು ಪ್ರಶ್ನಿಸಿವೆ.
ಅಡಿಕೆ ಕಳ್ಳಸಾಗಾಣಿಕೆಯ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು, ತನಿಖೆ ಏನಾಯಿತು ಎಂದು ಬಹಿರಂಗಗೊಳಿಸಬೇಕು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸಬೇಕು, ಎಂದು ಸಾಮಾಜಿಕ ಕಾರ್ಯಕರ್ತರು ಮೇಘಾಲಯದಲ್ಲಿ ಒತ್ತಾಯಿಸಿದ್ದಾರೆ.
Source : Meghalaya Media
As per sources, Arecanut smugglers from Meghalaya, Assam and Bangladesh, the illegal trade has now stopped, leading to markets recovering ever so slightly.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…