Advertisement
Opinion

ಧ್ಯಾನವನ್ನು ಹೇಗೆ ಮಾಡುವುದು?…. ಧ್ಯಾನ ಮತ್ತು ಆಲೋಚನೆಗಳು…..

Share

ಇತ್ತೀಚಿಗೆ ಯಾರು ಬೇಕಾದರೂ ಎದ್ದು ಧ್ಯಾನ(Meditation) ಮಾಡಲು ಸಲಹೆ ನೀಡುತ್ತಾರೆ. ಮನಸ್ಸು ಶಾಂತವಾಗಿರಲಿ ಎಂದು ನಾವು ಆ ಪ್ರಯತ್ನವನ್ನು ಮಾಡುತ್ತೇವೆ, ಆದರೆ, ಮನಸ್ಸು(Mind) ಒಂದೆಡೆ ಎಲ್ಲಿ ನಿಲ್ಲುತ್ತದೆ? ಅಸಂಖ್ಯಾತ ವಿಷಯಗಳಿದ್ದಾಗ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಲು ಪ್ರಯತ್ನಿಸಿದ್ದರೆ ಮನಸ್ಸು ಪ್ರಶಾಂತವಾಗಿರುವ ಬದಲು ಚಂಚಲ(fickle) ಮನಸ್ಸು ಹೆಚ್ಚು ಚಂಚಲವಾಗುತ್ತದೆ. ಧ್ಯಾನ ಮಾಡುವ ಪ್ರತಿಯೊಬ್ಬರ ಪ್ರಾಥಮಿಕ ಅನುಭವ ಇದು. ಏಕೆಂದರೆ, ಧ್ಯಾನವು ಒಂದು ದಿನದಲ್ಲಿ ಕಲಿಯುವಂತಹದ್ದಲ್ಲ. ಇದಕ್ಕಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಹಾಗಾದರೆ, ಅದನ್ನು ಹೇಗೆ ಮಾಡುವುದು, ಎಂಬುದನ್ನು ತಿಳಿಯೋಣ.

Advertisement
Advertisement

ಮನಸ್ಸನ್ನು ಶಾಂತಗೊಳಿಸುವುದು ಅತ್ಯಂತ ಕಷ್ಟದ ವಿಷಯ. ಏಕೆಂದರೆ, ಇಂದಿನ ಬಹುಕಾರ್ಯಕ ಯುಗದಲ್ಲಿ, ನಮ್ಮ ಮನಸ್ಸು ಅನೇಕ ಕಾರ್ಯಗಳಲ್ಲಿ ನಿರತವಾಗಿದೆ, ಅನೇಕ ವಿಷಯಗಳಲ್ಲಿ ಸಿಲುಕಿಕೊಂಡಿದೆ, ಅಲ್ಲಿಂದ ಅದನ್ನು ಬಿಡಿಸಿ ಧ್ಯಾನಿಸಬೇಕೆಂದರೆ ಶಿವಧನುಷ್ಯ ಎತ್ತಿದ ಹಾಗೆ! ಕೇವಲ ಅಭ್ಯಾಸ ಮತ್ತು ಸಕಾರಾತ್ಮಕತೆಯಿಂದ, ಏನನ್ನಾದರೂ ಸಾಧಿಸಬಹುದು. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ….

Advertisement

ಬೆಳಗಿನ ಸಮಯವನ್ನು ಆಯ್ಕೆ ಮಾಡಿ: ಮೇಲಿನ ವಿಷಯಗಳು ಕರಗತವಾದರೆ ಧ್ಯಾನವನ್ನು ಆರಂಭಿಸಬಹುದು. ಅದಕ್ಕಾಗಿ ಬೆಳಗಿನ ಸಮಯವನ್ನು ಆಯ್ಕೆ ಮಾಡಿ. ಎಚ್ಚರವಾದಾಗ ಮೊಬೈಲ್ ನೋಡದೆ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕಣ್ಣು ಮುಚ್ಚಿ ನಿಮ್ಮನ್ನು ನೀವೆ ಗಮನಿಸಿ. ಮುಂಜಾನೆ ಯೋಚನೆಗಳ ಸಂಚಾರ ತೀರ ವಿರಳವಾಗಿರುತ್ತದೆ. ಆದ್ದರಿಂದಲೇ, ಮನಸ್ಸನ್ನು ಏಕಾಗ್ರಗೊಳಿಸುವುದು ಸುಗಮವಾಗುತ್ತದೆ. ಆಗಲೂ ಯೋಚನೆಗಳು ಬಂದರೂ ಬರಲಿ. ಕೆಲ ಕಾಲದ ನಂತರ ಅವು ದೂರವಾಗುತ್ತವೆ. ನಿಧಾನವಾಗಿ ನದಿಯ ಪ್ರಶಾಂತ ಹರಿವಿನಂತೆ ಮನದಲ್ಲಿ ಅಲೆ ನಿಂತು ಧ್ಯಾನಕ್ಕೆ ಮನಸ್ಸು ಸಿದ್ಧವಾಗುತ್ತದೆ.

ಧ್ಯಾನ ಮಾಡುವಾಗ ಸಂಗೀತವನ್ನು ಬಳಸಬೇಡಿ: ಮೂಲಭೂತವಾಗಿ ಧ್ಯಾನವನ್ನು ಎಲ್ಲದರಿಂದ ಮನಸ್ಸನ್ನು ಬೇರ್ಪಡಿಸಲು ಮಾಡಲಾಗುತ್ತದೆ. ಯಾವುದೇ ಪ್ರಕಾರದ ಸಂಗೀತ, ಸಂಗೀತ ಅಥವಾ ಹಾಡನ್ನು ಕೇಳುತ್ತಾ ಧ್ಯಾನದ ಧಾರಣೆಯನ್ನು ಪ್ರಯತ್ನಿಸಿದರೆ ಮನಸ್ಸು ಹಾಡಿನಲ್ಲಿ ಏಕಾಗ್ರವಾಗಿ ಅದಕ್ಕೆ ಸಂಬಂಧಿಸಿದ ಆಲೋಚನೆಗಳು ಬರಲಾರಂಭಿಸುತ್ತವೆ. ಅಲ್ಲದೆ, ಧ್ಯಾನದ ಸಮಯದಲ್ಲಿ ಮನಸ್ಸು ಯಾವುದಾದರೂ ವಿಷಯದ ಮೇಲೆ ಅವಲಂಬಿತವಾಗಬಾರದು, ಇಂಥ ಸಮಯದಲ್ಲಿ ಬೇರೆ ಯಾವುದೇ ಸಂಗೀತ ಅಥವಾ ಹಾಡನ್ನು ಕೇಳದೆ ಕೇವಲ ನಿಮ್ಮ ಉಸಿರಿನ ಸಂಗೀತವನ್ನು ಮಾತ್ರ ಆಲಿಸಬೇಕು, ಇದನ್ನು ಗಮನದಲ್ಲಿಡಿ.

Advertisement

ಯೋಗ್ಯ ಸ್ಥಳದ ಆಯ್ಕೆ ಮಾಡಿ:ಧ್ಯಾನ ಮಾಡುವಾಗ ಸ್ಥಳದ ಮಹತ್ವವು ಇದೆ ಸರಿಯಾದ ಸ್ಥಳದಲ್ಲಿ ಸರಿಯಾದ ಧ್ಯಾನ ಸಾಧ್ಯವಾಗುತ್ತದೆ ಆದ್ದರಿಂದ ನೀವು ಕುಳಿತುಕೊಳ್ಳುವ ಸ್ಥಳ ನಿರ್ಮಲ ಹಾಗೂ ಶಾಂತವಾಗಿರಬೇಕು. ಸ್ವಚ್ಛವಾದ ಗಾಳಿಯ ಚಲನೆ ಇರಬೇಕು. ಸ್ಥಳ ಯಾವುದೇ ಪ್ರಕಾರದ ವಾಸನೆರಹಿತವಾಗಿರಬೇಕು. ಸುಗಂಧವಾಗಲಿ ದುರ್ಗಂಧವಾಗಲಿ ಎರಡೂ ಇರಬಾರದು. ನೀವು ಕುಳಿತುಕೊಳ್ಳುವ ಜಾಗದಲ್ಲಿ ಗಲಾಟೆ ಸದ್ದು ಗದ್ದಲ ಇರದಂತೆ ನೋಡಿಕೊಳ್ಳಿ. ಆದರೆ, ಒಂದು ಮಾತು ನಿಜ, ನೀವು ಮೇಲಿನ ಎಲ್ಲ ಪ್ರತಿಕೂಲ ಪರಿಸ್ಥಿತಿಗಳು ಇರುವ ಜಾಗದಲ್ಲಿ ಧ್ಯಾನವನ್ನು ಸರಿಯಾಗಿ ಮಾಡಲು ಸಾಧ್ಯವಾದರೆ ಆಗ ನೀವೊಬ್ಬ ನಿಜವಾದ ಸಾಧಕರಾಗುತ್ತೀರಿ!

ಮನಸ್ಸಿನ ಮೇಲೆ ನಿಯಂತ್ರಣ:ಮನುಷ್ಯನ ಮನಸ್ಸು ಕೋತಿಯಂತೆ, ಒಂದೆಡೆ ಸ್ಥಿರವಾಗುವುದು ಬಹಳ ಕಷ್ಟ! ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆಲೋಚನೆಗಳನ್ನು ಒಮ್ಮೆಲೇ ಅದುಮಲು ಪ್ರಯತ್ನಿಸಬೇಡಿ ಮೊದಲು ಅವುಗಳನ್ನು ಸ್ವತಂತ್ರವಾಗಿ ಹರಿಯಲು ಬಿಡಿ ನಿಧಾನವಾಗಿ ಮನಸ್ಸನ್ನು ಸಾತ್ವಿಕ ವಿಚಾರಗಳತ್ತ ತಿರುಗಿಸಿ ಇದಕ್ಕೆ ಒಂದು ಉತ್ತಮ ಉಪಾಯವುಂದರೆ ದೇವರ ನಾಮ ಸ್ಮರಣೆ ಮಾಡುವುದು. ನಿಮಗೆ ಇಷ್ಟವಾದ ದೇವರನ್ನು ನೆನೆಸಿಕೊಂಡು ಆತನ ರೂಪವನ್ನು ಮುಚ್ಚಿದ ಕಣ್ಣುಗಳ ಮುಂದೆ ತಂದುಕೊಳ್ಳಿ ಆ ರೂಪವನ್ನು ಆನಂದ್ ಆನಂದಿಸಿ ಆ ದೇವರು ನಾಮದ ಸ್ಮರಣೆ ಮಾಡುತ್ತಾ ಮೈಮರೆಯಿರಿ! ಕೆಲಸ ಸಮಯ ಇದನ್ನು ನೀವು ಯಶಸ್ವಿಯಾಗಿ, ನಿರಂತರವಾಗಿ, ನಿಯಮಿತವಾಗಿ ಮಾಡಿದರೆ ಕಾಲಕ್ರಮೇಣ ನಿಮ್ಮ ಆತ್ಮ, ಮನಸ್ಸು ಹಾಗೂ ದೇಹಕ್ಕೆ ಸಿಗುವ ಲಾಭಗಳಿಂದ ನೀವೇ ಆಶ್ಚರ್ಯ ಪಡುತ್ತೀರಿ!

Advertisement

ಸಂಕಲನ ಮತ್ತು ಸಂಪಾದನೆ: ಡಾ. ಕುಲಕರ್ಣಿ ಪಿ. ಎ.

Calming the mind is the most difficult thing. Because, in today’s multi-tasking era, our mind is busy with many tasks, stuck in many things, to free it from there and meditate is like lifting the bow of Shiva! Just with practice and positivity, anything can be achieved. Everything is possible if you try.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

13 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

13 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

13 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

14 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

14 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

14 hours ago