ಹಲಸಿನಹಣ್ಣು ತಿಂದು ಉಸಿರಾಟದ ಮೂಲಕ ಆಲ್ಕೋಹಾಲ್ ಪತ್ತೆ ಮಾಡುವ ವೇಳೆ ಯಂತ್ರಕ್ಕೆ ಒಳಪಟ್ಟ ಬಸ್ ಚಾಲಕ ವರದಿಯಲ್ಲಿ ಏರುಪೇರಾದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಪತ್ತನಂತಿಟ್ಟದಲ್ಲಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ಬ್ರೀತ್ಅಲೈಜರ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಬಸ್ ಚಾಲಕ ವಿಫಲನಾದ ಘಟನೆ ನಡೆಯಿತು. ಆದರೆ ಬಸ್ ಚಾಲಕ, ತಾನು ಅಮಲು ಪದಾರ್ಥ ಸೇವಿಸಿಲ್ಲ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು. ಈ ಸಂದರ್ಭ ರಕ್ತದ ಸ್ಯಾಂಪಲ್ ಕೂಡಾ ತೆಗೆಯಲಾಯಿತು. ಅದರಲ್ಲಿ ನೆಗೆಟಿವ್ ವರದಿ ಬಂದಿತ್ತು. ತಕ್ಷಣವೇ ಬ್ರೀತ್ ಅಲೈಸರ್ ಪರೀಕ್ಷೆಗೆ ಒಳಪಡಿಸಲಾಯಿತು, ಇತರರನ್ನೂ ಪರೀಕ್ಷೆ ಒಳಪಡಿಸಲಾಯಿತು. ಹಾಗಿದ್ದರೆ ಬ್ರೀತ್ಅಲೈಜರ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಬಸ್ ಚಾಲಕ ವಿಫಲನಾದದ್ದು ಹೇಗೆ ಎಂದು ಪತ್ತೆ ಮಾಡುವ ಪ್ರಯತ್ನ ನಡೆಯಿತು.
ಈ ಸಂದರ್ಭ ಬೆಳಕಿಗೆ ಬಂದ ಅಂಶ, ಬಸ್ ಚಾಲಕರೊಬ್ಬರು ತನ್ನ ಮನೆಯಿಂದ ಹಲಸಿನ ಹಣ್ಣುಗಳನ್ನು ಡಿಪೋಗೆ ತಂದು ತನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು. ಈ ಬಸ್ ಚಾಲಕ ಸಾಕಷ್ಟು ಪ್ರಮಾಣದಲ್ಲಿ ಹಲಸಿನ ಹಣ್ಣನ್ನು ಸೇವಿಸಿದ್ದರು. ಬಸ್ ಚಾಲನೆಗೆ ಮುನ್ನ ಇಲಾಖೆಯ ನಿಯಮದಂತೆ ಅವರು ನಂತರ ಬ್ರೀತ್ ಅಲೈಜರ್ ಪರೀಕ್ಷೆಗೆ ಒಳಗಾದರು. ಆ ಮೀಟರ್ ತಕ್ಷಣ 10 ಕ್ಕೆ ಏರಿತು. ಕೊನೆಗೆ ಇದು ಹಲಸಿನ ಹಣ್ಣಿನ ಪ್ರಭಾವ ಎಂಬಲ್ಲಿಗೆ ಘಟನೆ ತಿಳಿಯಾಯಿತು.
ಕೆಲವು ವರದಿಗಳ ಪ್ರಕಾರ, ಹಲಸಿನ ಹಣ್ಣು ತಿನ್ನುವುದರಿಂದ , ವಿಶೇಷವಾಗಿ ಅದು ಹಣ್ಣಾದಾಗ ಅಥವಾ ಅತಿಯಾಗಿ ಹಣ್ಣಾದಾಗ ಬಾಯಿಯಲ್ಲಿ ಎಥೆನಾಲ್ ಉಳಿಯಬಹುದು, ಇದು ಬ್ರೀತ್ ಅಲೈಜರ್ ಮೂಲಕ ತಪ್ಪು ಫಲಿತಾಂಶವನ್ನು ನೀಡಲು ಸಾಧ್ಯವಿದೆ.
ಸಾಮಾನ್ಯವಾಗಿ ಬ್ರೀತ್ ಅಲೈಜರ್ ಉಸಿರಾಟದಲ್ಲಿನ ಆಲ್ಕೋಹಾಲ್ ಆವಿಯನ್ನು ಅಳೆಯುತ್ತವೆ ಮತ್ತು ಶ್ವಾಸಕೋಶದಿಂದ ಹೊರಹಾಕಲ್ಪಟ್ಟ ಆಲ್ಕೋಹಾಲ್ ಅನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಆದರೆ ಹಲಸು ಹಣ್ಣು ತಿಂದಾಗಲೂ ಉಳಿದಿರಬಹುದಾದ ಅಥವಾ ರಾಸಾಯನಿಕ ಕ್ರಿಯೆಗಳಿಂದ ಕಂಡುಬರುವ ಆಲ್ಕೋಹಾಲ್ ಅಥವಾ ಎಥೆನಾಲ್ ವಾಸನೆಯನ್ನು ಯಂತ್ರವು ಗ್ರಹಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಹಣ್ಣು ತಿಂದು ಲಾಲಾರಸದ ಮೂಲಕ ಸ್ವಲ್ಪ ಹೊತ್ತು ಕಳೆದರೆ ಅಥವಾ ಬಾಯಿ ತೊಳೆದರೆ ಈ ಫಲಿತಾಂಶ ಬರಲು ಸಾಧ್ಯವಿಲ್ಲ. ಅಂದರೆ ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ಈ ಅಂಶಗಳು ನಿವಾರಣೆಯಾಗುತ್ತದೆ. ತೀರಾ ಮಾಗಿದ ಯಾವುದೇ ಹಣ್ಣು ಸೇವಿಸಿದರೂ ಇಂತಹ ಫಲಿತಾಂಶ ಬರಲು ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತವೆ.
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…