ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿದೆ. ಊರಿಡೀ ಹುಡಿಕಿದ್ರೂ ಕಾನ ಸಿಗೋಗು ಅಲ್ಲಿ ಇಲ್ಲಿ ನಿಧಾನಕ್ಕೆ ಓಡಾಡುವ ಹಿರಿ ಜೀವಗಳು ಮಾತ್ರ. ಊರು ಕೇರಿ ಗಲಾಟೆ ಎಬ್ಬಿಸುತ್ತಾ ಓಡಾಡುವ ಮಕ್ಕಳು, ಅದು ಇದು ಕೆಲಸದಲ್ಲಿ ನಿರತಾರಾಗಿರುವ ಮಹಿಳೆಯರು, ರಸ್ತೆಯಲ್ಲಿ ಅಡ್ಡಾಡುವ ಪುರುಷರು ಯಾರೂ ಇಲ್ಲಿ ಕಾಣ ಸಿಗುವುದಿಲ್ಲ. ಹೆಚ್ಚಿನ ಮನೆಗಳಿಗೆ ಬೀಗ ಜಡಿಯಲಾಗಿದೆ. ಇದು ಮುಂಗಾರು #Mansoon ಬಾರದ ಹಿನ್ನೆಲೆ ಆವರಿಸಿಕೊಂಡ ಬರ #Drought ದ ಛಾಯೆಯ ಚಿತ್ರಣ
ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಗಳ್ಲಿ ಬಾಗಕೋಟೆ ಕೂಡ. ಈ ಜಿಲ್ಲೆಯಾದ್ಯಂತ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರ ಹೋಗಲಾಗದೆ ಆಕಾದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿರುವ ಹಿರಿ ಜೀವಗಳು..
ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಇದರಿಂದ ಕೂಲಿ ಕೆಲಸ ಸಿಗದ ಕಾರಣ ಇಡೀ ಊರಿಗೆ ಊರೇ ಗುಳೆ ಹೋಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮ ಖಾಲಿ ಖಾಲಿ ಹೊಡೆಯುತ್ತಿದೆ. ಲಿಂಗಾಪುರದ ಬೋರ್ವೆಲ್ಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರು ಬತ್ತಿ ಹೋಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹತ್ತಿರ ಯಾವುದೇ ಕೈಗಾರಿಕೆಗಳು ಸಹ ಇಲ್ಲ. ನರೇಗಾ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಸಿಕ್ಕರೂ ಸರಿಯಾದ ಸಮಯಕ್ಕೆ ಕೂಲಿ ಕೈಸೇರಲ್ಲ. ಇದರಿಂದ ಗ್ರಾಮದ ಶೇಕಡಾ 80ರಷ್ಟು ಮನೆಗಳಿಗೆ ಬೀಗಮುದ್ರೆ ಬಿದ್ದಿದೆ.
ಲಿಂಗಾಪುರ ಗ್ರಾಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಮನೆಗಳಿವೆ. ಶೇಕಡಾ 80 ರಷ್ಟು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಕೂಲಿ ಕೆಲಸಕ್ಕಾಗಿ ಮಂಗಳೂರು, ಗೋವಾಕೆ ಹೋಗಿವೆ. ನೀವೇನಾದ್ರೂ ಈ ಗ್ರಾಮದಲ್ಲಿ ಹೋದ್ರೆ ಕೇವಲ ವಯಸ್ಸಾದ ವೃದ್ಧರು ಮಾತ್ರ ಇರುವ ಮ್ಯೂಸಿಯಂಗೆ ಹೋದಂತೆ ಭಾಸವಾಗುತ್ತೆ. ಇನ್ನಾದ್ರೂ ಬೇಗ ಮಳೆ ಬರಲಿ, ಕೆರೆ-ಬಾವಿಗಳು ತುಂಬಲಿ, ಜನರು ಊರಿಗೆ ಮರಳಲಿ..
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…
ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ. ಏಕೆಂದರೆ ಈಗ ಕರ್ಕಾಟಕ…
ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಕಲಜೀವಿಗಳ ಆಡುಂಬೊಲ ನಮ್ಮೀ ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…