Advertisement
Opinion

ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕ “ಫಲಪ್ರದ” ಪುಸ್ತಕ |

Share

ಪುತ್ತೂರಲ್ಲಿ(Puttur) ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಹಲಸು ಮೇಳಗಳ ಹಿನ್ನೋಟದ ಪುಸ್ತಕ ಬಿಡುಗಡೆ ಇತ್ತು. ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕಗಳ ದಾಖಲೀಕರಣದ ಬಗ್ಗೆ ಮಾಹಿತಿಯೇ “ಫಲಪ್ರದ” ಪುಸ್ತಕ. ದಾಖಲಿಸಿ ಪುಸ್ತಕ ರೂಪಕ್ಕೆ ತಂದವರು ನಾ ಕಾರಂತ ಪೆರಾಜೆ.

ಅದೇ ದಿನ ಕೊಂಡು ತಂದ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸಿದೆ. ಓದಿ ಮುಗಿಯುವ ಹೊತ್ತಿಗೆ ಪುತ್ತೂರಿನ ಹಲಸು ಮೇಳವನ್ನು ಸಂಘಟಿಸಿದವರಲ್ಲಿ ಕೇಳಿದಾಗ ಹೆಚ್ಚುಕಮ್ಮಿ 10 ಟನ್ನಿನಷ್ಟು ಹಲಸು ಮೂರು ದಿನದ ಮೇಳದಲ್ಲಿ ವ್ಯಾಪಾರವಾಗಿದೆ ಎಂದರು. ( ಐದು ಟನ್ನಿನಷ್ಟು ಹಲಸಾಗಿ ಉಳಿದದ್ದು ಖಾದ್ಯಗಳ ರೂಪದಲ್ಲಿ )

ಪ್ರಕೃತಿ ಕೊಟ್ಟ ಅಮೂಲ್ಯ ಫಲವಸ್ತು ಹಲಸು ಹೊಲಸೆಂದು ಉಪೇಕ್ಷೆಗೆ ಒಳಗಾಗಿ ಅಲ್ಲಲ್ಲಿಯೇ ಮರಗಳಲ್ಲಿ ಕೊಳೆತು ಉದುರಿ ಹೋಗುತ್ತಿದ್ದ ಕಾಲ ಒಂದಿತ್ತು. ಅಂತಹ ಸಂದರ್ಭದಲ್ಲಿ ಹಲಸಿಗೊಂದು ಮಾನ ತಂದು ಕೊಡುವಲ್ಲಿ ಶ್ರಮಿಸಿದವರು ಹಲಸು ಸ್ನೇಹಿಕೂಟ ಮತ್ತು ಅಡಿಕೆ ಪತ್ರಿಕೆ. ಮಾರ್ಗದರ್ಶಿ:ಹಲಸು ರಾಯಭಾರಿ ಬಿರುದಾಂಕಿತ ಶ್ರೀ ಪಡ್ರೆಯವರು.

ಭವ್ಯ ದಿವ್ಯವಾದ ಕಟ್ಟಡವೊಂದು ಎದ್ದು ನಿಲ್ಲಬೇಕಾದರೆ ಉತ್ತಮ ಅಡಿಪಾಯದೊಂದಿಗೆ ಪಂಚಾಂಗ ಬೇಕು. ಪಂಚಾಂಗ ಕಟ್ಟಬೇಕಾದರೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ನಿರ್ಮಾಣವಾಗಿರುತ್ತದೆ. ಪಂಚಾಂಗದ ಮೇಲೆ ಭವ್ಯ ಕಟ್ಟಡ ಬಂದಾಗ ಕಟ್ಟಡವನ್ನು ವೀಕ್ಷಿಸಿ ಭಲೇ ಶಹಭಾಷ್ ಅಂತ ಅನ್ನುವವರು ಬಹಳಷ್ಟು ಮಂದಿ ಇದ್ದಾರೆ. ಪಂಚಾಂಗ ಕಟ್ಟಿದ ಶ್ರಮದ ಬಗ್ಗೆ ಅರಿವು ಅನೇಕರಿಗೆ ಗೊತ್ತಿರುವುದಿಲ್ಲ. 

ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ವಾರಂತ್ಯದಲ್ಲಿ ನಡೆಯುವ ಹಲಸು ಮೇಳಗಳ ಯಶಸ್ಸಿಗೆ ಪಂಚಾಂಗ ಕಟ್ಟಿದವರು ಹಲಸು ಸ್ನೇಹಿಕೂಟ ಉಬರು ಮತ್ತು ಅಡಿಕೆ ಪತ್ರಿಕೆ ಬಳಗ. ಯಾವುದೇ ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿ ಯಾವುದೇ ಅತಿಯಾದ ಪ್ರಚಾರಕ್ಕೂ ಒಳಗಾಗದೆ,ಕೇವಲ ಆಸಕ್ತಿ ಒಂದರಿಂದಲೇ ಪ್ರಚಾರಕ್ಕೆ ಬಂದ ಹಲಸು ಇಂದು ಮಾನವಂತ ಫಲ. ಮುಂದಿನ ದಿನಗಳಲ್ಲಿ ಕೃಷಿಕನಿಗೊಂದು ಉಪ ಆದಾಯವನ್ನು ತಂದು ಕೊಡಬಲ್ಲುದು ಎಂಬುದಕ್ಕೆ ಮೂರು ದಿನದ ಮೇಳದಲ್ಲಿ ಸುಮಾರು 10 ಟನ್ನಿನಷ್ಟು ಹಲಸು ವ್ಯಾಪಾರವೇ ಸಾಕ್ಷಿ. ಹಲಸಿನ ಮಾನದ ಹಿಂದಿನ ಶ್ರಮದ ಕಥಾಗುಚ್ಚವೇ ಫಲಪ್ರದ ಪುಸ್ತಕ. ಎಲ್ಲರೂ ಕೊಂಡು ಓದಿ.
ಬರಹ :
ಎ ಪಿ ಸದಾಶಿವ ಮರಿಕೆ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

9 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago