ಕರಾವಳಿ ಭಾಗದ ಎಲ್ಲಾ ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಬಟ್ಟೆ ಕಳ್ಳತನ ಹಾಗೂ ಗ್ರಾಹಕರ ಬ್ಯಾಗ್ನಿಂದ ಮತ್ತು ಮೈಯಲ್ಲಿರುವ ಆಭರಣಗಳ ಕಳ್ಳತನ ಆಗಿರುವ ಹಿನ್ನಲೆಯಿಂದ ಕರಾವಳಿ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ವತಿಯಿಂದ ಎಸೋಸಿಯೇಶನ್ ಅಧ್ಯಕ್ಷ , ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದಲ್ಲಿ ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಹಲವು ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿರುವುದೆಲ್ಲವೂ ಸಿ.ಸಿ ಟಿ.ವಿ ಪೂಟೇಜ್ನಲ್ಲಿ ದಾಖಲಾಗಿದ್ದು, ಇದನ್ನು ಪ್ರತ್ಯೇಕ ಕಳ್ಳತನವೆಂದು ಭಾವಿಸಿದ್ದೆವು. ಈ ಬಗ್ಗೆ ಎಲ್ಲೆಡೆಯೂ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಒಂದೇ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡಿದೆ.ಸುಮಾರು 30 ವರ್ಷಗಳಿಂದ ಕಳ್ಳತನ ಮಾಡುವುದೇ ಇವರ ಚಟುವಟಿಕಯಾಗಿದೆ ಎಂಬುದೂ ಈಗ ಸಂದೇಹಕ್ಕೆ ಎಡೆಮಾಡಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಕರಾವಳಿ ಭಾಗದ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ಮಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…
ರಾಜ್ಯ ಬಜೆಟ್ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…