ಕರಾವಳಿ ಭಾಗದ ಎಲ್ಲಾ ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಬಟ್ಟೆ ಕಳ್ಳತನ ಹಾಗೂ ಗ್ರಾಹಕರ ಬ್ಯಾಗ್ನಿಂದ ಮತ್ತು ಮೈಯಲ್ಲಿರುವ ಆಭರಣಗಳ ಕಳ್ಳತನ ಆಗಿರುವ ಹಿನ್ನಲೆಯಿಂದ ಕರಾವಳಿ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ವತಿಯಿಂದ ಎಸೋಸಿಯೇಶನ್ ಅಧ್ಯಕ್ಷ , ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದಲ್ಲಿ ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಹಲವು ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿರುವುದೆಲ್ಲವೂ ಸಿ.ಸಿ ಟಿ.ವಿ ಪೂಟೇಜ್ನಲ್ಲಿ ದಾಖಲಾಗಿದ್ದು, ಇದನ್ನು ಪ್ರತ್ಯೇಕ ಕಳ್ಳತನವೆಂದು ಭಾವಿಸಿದ್ದೆವು. ಈ ಬಗ್ಗೆ ಎಲ್ಲೆಡೆಯೂ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಒಂದೇ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡಿದೆ.ಸುಮಾರು 30 ವರ್ಷಗಳಿಂದ ಕಳ್ಳತನ ಮಾಡುವುದೇ ಇವರ ಚಟುವಟಿಕಯಾಗಿದೆ ಎಂಬುದೂ ಈಗ ಸಂದೇಹಕ್ಕೆ ಎಡೆಮಾಡಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಕರಾವಳಿ ಭಾಗದ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ಮಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…