Advertisement
MIRROR FOCUS

ನೂರಾರು ವರ್ಷಗಳಿಂದ ಬರಗಾಲವಿದೆ | ಅಂದಿನ ರೈತ ಬಲಿಷ್ಠನಾಗಿದ್ದ | ಈಗಿನ ರೈತರು ಹತಾಶರಾಗಿದ್ದಾರೆ

Share

ಬರಗಾಲ(Drought) ಎಂಬುದು ನೂರಾರು ವರ್ಷಗಳಿಂದ ಹಿಂದೆ ಇತ್ತು. ಈಗಲೂ ಕೂಡ ಇದೆ ಬರಗಾಲ ಪರಿಸ್ಥಿತಿ ರೈತರಿಗೆ(farmer) ಹೊಸದಲ್ಲ. ಆದರೆ ಅಂದು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅಥವಾ ಎದುರಿಸುವ ಶಕ್ತಿಯನ್ನು ರೈತರು ಹೊಂದಿದ್ದರು, ಇಂದು ರೈತರು ಹೆಚ್ಚು ಬೆಳೆ ಬೆಳೆಯುವ ಭರಾಟೆಯಲ್ಲಿ ರೈತ ಹವಾಮಾನ ವೈಪರೀತ್ಯ(Weather extremes) ಮತ್ತು ಮಾರುಕಟ್ಟೆ ಏರು ಪೇರುಗಳನ್ನು ಸಹಿಸಿಕೊಳ್ಳಲಾಗದೇ ರೈತ ಹತಾಶನಾಗಿ ಆತ್ಮಹತ್ಯೆಗೆ(suicide) ಶರಣಾಗುವ ಸ್ಥಿತಿಗೆ ಬಂದಿದ್ದಾನೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.

Advertisement
Advertisement

ಮಾದನಬಾವಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್ ನ ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಮಾದನಬಾವಿ ಹಮ್ಮಿಕೊಂಡಿದ್ದ ಪ್ರಕೃತಿ ವೈಫಲ್ಯದ ಸಮನ್ಯಯ ಸಾಂಗತ್ಯ ಕೃಷಿ ಎಂಬ ಶೀರ್ಷಿಕೆಯಡಿ ಅ. 25 ರಿಂದ 27ರವರೆಗೆ ಹಮ್ಮಿಕೊಂಡಿರುವ ರಾಜ್ಯ ದಸರಾ ಬನ್ನಿ ಕೃಷಿ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸರ್ಕಾರ ಅನೇಕ ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡಿದ್ದರೂ, ಬರಗಾಲ ಬಂದಿದೆ. ಒಟ್ಟಾರೆಯಾಗಿ ದೇಶಕ್ಕೆ ಅನ್ನ ಕೊಡುವ ಧಾವಂತದಲ್ಲಿ ಹೆಚ್ಚು ಬೆಳೆದರೆ ಹಣವಂತರಾಗುತ್ತಾರೆ ಎಂಬ ಭ್ರಮೆಯಲ್ಲಿ ರೈತರು ಸಾಲಬಾಧೆಯ ಸುಳಿಗೆ ಸಿಲುಕಿ ಕಷ್ಟ ಅನುಭವಿಸುಂತಾಗಿದೆ.

ಹಿಂದಿನ ಕಾಲದಲ್ಲಿ ಬರಗಾಲದಲ್ಲೂ ಸಾವಯವ ಮತ್ತು ಸ್ವಾವಲಂಬಿ ಕೃಷಿ ಪದ್ದತಿಗಳ ಮೂಲಕ ರೈತರು ಸರ್ಕಾರದಿಂದ ಯಾವುದೇ ಸಹಾಯ ಬೇಡದೆ ಜೀವನ ನಡೆಸುತ್ತಿದ್ದರು ಆದರೆ ಇಂದಿನ ಬರಗಾಲ ಪ್ರತಿಯೊಂದಕ್ಕೂ ಸರ್ಕಾರದ ಸಹಾಯ ಬೇಡುವ ಪರಿಸ್ಥಿತಿಯಲ್ಲಿ ರೈತರಿದ್ದಾರೆ ಎಂದು ಹೇಳಿದರು.

Advertisement

ಇಂದಿನ ಬರಗಾಲ ಪರಿಸ್ಥಿತಿಗೆ ರೈತರು ಕಾರಣರೋ ಸರ್ಕಾರ ಮತ್ತು ಜನ ಕಾರಣರೋ ಎಂದು ಗಂಭೀರ ಚಿಂತನೆ ಮಾಡಬೇಕಿದೆ. ಅದಕ್ಕೆ ಕಾರಣ ಮನುಷ್ಯ ಅತೀ ದುರಾಸೆಗೆ ಬಲಿಯಾಗಿರುವುದು. ಅದಕ್ಕಾಗಿ ಜಲ ಸಂಪನ್ಮೂಲಗಳು, ಕೃಷಿ ಭೂಮಿ, ಪರಿಸರ ಕಾಡು ಎಲ್ಲವನ್ನೂ ಮನುಷ್ಯ ಹಾಳು ಮಾಡುತ್ತಿದ್ದಾನೆ ಇದರ ಪರಿಣಾಮ ಕೂಡ ಮನುಷ್ಯನೆ ಅನುಭವಿಸಬೇಕಾಗಿದೆ ಎಂದು ಹೇಳಿದರು.

Drought existed hundreds of years ago and still exists. Drought situation is not new to farmers but then farmers had the power to effectively handle or face the drought situation. Today, in the rush to grow more crops, farmers are unable to bear the extreme weather and market pressure. Karnataka State Farmers Union State President H.R. Basavarajappa said.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೊಬೈಲ್ ಫೋನ್ ಅನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗತ್ತೀರಾ..? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ…..!

ಇಂದು ಮೊಬೈಲ್ ಫೋನ್(Mobile Phone) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಅನ್ನು…

7 mins ago

ರಾಜ್ಯಾದ್ಯಂತ ಬಿರು ಬಿಸಿಲಿನ ಪರಿಣಾಮ : ಗಗನಕ್ಕೇರಿದ ಹಸಿ ಮೆಣಸಿನಕಾಯಿ ದರ : ಗ್ರಾಹಕರಿಗೆ ಜೋರಾದ ಖಾರದ ಅನುಭವ

ಕಳೆದ ಬಾರಿ ಕೆಂಪು ಮೆಣಸಿನಕಾಯಿ(Red chilli) ಬೆಲೆ(Price hike) ಗಗನಕ್ಕೇರಿತ್ತು. ಈ ಬಾರಿ…

22 mins ago

Karnataka Weather |11-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |

ಈಗಿನ ಪ್ರಕಾರ ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

3 hours ago

ಕೃಷಿ ಬೆಳೆಯಲು ಕೃಷಿಯೂ ಪಠ್ಯದ ಭಾಗವಾಗಬೇಕು | ಪದ್ಮಶ್ರೀ ಸತ್ಯನಾರಾಯಣ ಬೆಳೆರಿ ಅಭಿಪ್ರಾಯ |

ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು ಎನ್ನುತ್ತಾರೆ…

17 hours ago

ಅಕ್ಷಯ ತೃತೀಯ | ಅನಂತ ಶುಭವನ್ನು ತರುವ ಹಬ್ಬ | ಚಿನ್ನ ಖರೀದಿಸುವುದೊಂದೇ ಅಕ್ಷಯ ತೃತೀಯ ಅಲ್ಲ..!

ಅಕ್ಷಯ ತೃತೀಯ(Akshaya Trutiya)... ಅಕ್ಷಯ ತೃತೀಯ ಮೇ.10 ಶುಕ್ರವಾರ, ಈ ದಿನದಂದು ಚಂದ್ರ…

1 day ago

ಪಾರಂಪರಿಕ ಬೀಜೋತ್ಸವ | ದಾವಣಗೆರೆಯಲ್ಲಿ ಮೇ.12 ರಂದು ನಡೆಯಲಿದೆ ಸಂಭ್ರಮದ ಬೀಜ ವೈಭವ |

ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ…

1 day ago