Advertisement
Opinion

ಈ 6 ಆಹಾರಗಳು ಸೈಲೆಂಟ್ ಕಿಲ್ಲರ್….! | ತಿನ್ನುವಾಗ ರುಚಿಯೆನಿಸುತ್ತದೆ..,ತಿಂದರೆ ಹಾನಿ ಖಂಡಿತ…!

Share

ಕರುಳನ್ನು ಆರೋಗ್ಯಕರವಾಗಿ(Gut health) ಮತ್ತು ಬಲವಾಗಿ ಇಟ್ಟುಕೊಳ್ಳುವುದು ಉತ್ತಮ ಆರೋಗ್ಯಕ್ಕೆ(Good Health) ಅತ್ಯಗತ್ಯ. ನಾವು ತಿನ್ನುವ ಮತ್ತು ಕುಡಿಯುವ(Eating and Drinking) ಎಲ್ಲವೂ ಕರುಳಿನ ಮೂಲಕ ಹಾದುಹೋಗುತ್ತದೆ. ಕರುಳಿನ ಕಾರ್ಯವು ಆಹಾರದಿಂದ ಪೋಷಕಾಂಶಗಳನ್ನು(Nitration) ಬೇರ್ಪಡಿಸುವುದು ಮತ್ತು ದೇಹದಿಂದ ತ್ಯಾಜ್ಯವನ್ನು(Waste) ತೆಗೆದುಹಾಕುವುದು ಸೇರಿದಂತೆ ದೇಹದ ಇತರ ಭಾಗಗಳಿಗೆ ಈ ಪೋಷಕಾಂಶಗಳನ್ನು ಸಾಗಿಸುವುದು. ಕರುಳಿನ ಕಾರ್ಯವು ಪರಿಣಾಮ ಬೀರಿದರೆ, ನೈಸರ್ಗಿಕ ಜೀರ್ಣಾಂಗ(Digestion) ವ್ಯವಸ್ಥೆಯು ದುರ್ಬಲಗೊಳ್ಳಬಹುದು. ಇದು ದೇಹದಲ್ಲಿ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ.

ಕರುಳಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿರುತ್ತವೆ. ಆರೋಗ್ಯಕ್ಕೆ ಅಪಾಯಕಾರಿಯಾದ ಕೆಲವು ಆಹಾರ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಕೆಲವೊಮ್ಮೆ ಕೆಟ್ಟ ಆಹಾರ ಪದ್ಧತಿಗಳು ಕರುಳಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಕರುಳಿಗೆ ಹಾನಿಯು ಮಲಬದ್ಧತೆ, ಕ್ರೋನ್ಸ್ ಕಾಯಿಲೆ, ಕೊಲೈಟಿಸ್, ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಪೌಷ್ಟಿಕತಜ್ಞ ಲವನೀತ್ ಬಾತ್ರಾ ಯಾವ ಆಹಾರಗಳು ಕರುಳಿಗೆ ಹಾನಿಕಾರಕ ಎಂಬ ಮಾಹಿತಿಯನ್ನು ನೀಡಿದ್ದಾರೆ.

  1. . ಸಕ್ಕರೆ : ಆಹಾರಕ್ಕೆ ಮಾಧುರ್ಯವನ್ನು ಸೇರಿಸಲು ಸಕ್ಕರೆ ಉಪಯೋಗಿಸಲಾಗುತ್ತದೆ. ಆದರೆ ಈ ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ತಜ್ಞರ ಪ್ರಕಾರ, ಸಕ್ಕರೆಯ ಸೇವನೆಯು ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಕರುಳಿನ ಉಪಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ, ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಹೆಚ್ಚುವರಿ ಸಕ್ಕರೆ ಸೇವನೆಯು ಕ್ಯಾಲೊರಿಗಳನ್ನು ಸಹ ಹೆಚ್ಚಿಸುತ್ತದೆ.
  2. ಮೈದಾ ಹಿಟ್ಟು : ಮೈದಾಹಿಟ್ಟನ್ನು ಧಾನ್ಯದ ಭ್ರೂಣಹಾರದಿಂದ (ಪಿಷ್ಟಭರಿತ ಬಿಳಿ ಭಾಗ) ತಯಾರಿಸಲಾದರೆ, ಗೋದಿಹಿಟ್ಟಿನಲ್ಲಿರುವ ನಾರುಯುಕ್ತ ತವುಡ (ಹೊಟ್ಟು)ನ್ನು ಗಿರಣಿಯಲ್ಲಿ ತೆಗೆದು, ಈ ಹಿಟ್ಟನ್ನು ನುಣ್ಣಗೆ ನಯಗೊಳಿಸಿ, ಶುದ್ಧೀಕರಿಸಿ ಹಾಗು ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸಿ ಬಿಳುಚಿಸಿದಾಗ(ಬ್ಲೀಚ್ ಮಾಡಿದಾಗ) ಅಚ್ಚ ಬಿಳಿಯ ಬಣ್ಣದ ಮೈದಾ ಹುಡಿಯು ಸಿದ್ದವಾಗುತ್ತದೆ. ಮೈದಾದಲ್ಲಿ ಕೇವಲ ಪಿಷ್ಟಮಯ ಪದಾರ್ಥ ಅಂದರೆ ಸಕ್ಕರೆ ಹೊರತು ಇನ್ನಾವ ಪೋಷಕಾಂಶಗಳೂ ಇರುವುದಿಲ್ಲ. ಆದ್ದರಿಂದ, ಇಂಥ ಹಿಟ್ಟನ್ನು ತಿಂದರೆ ಕರುಳಿಗೆ ಹಾನಿ ತಪ್ಪಿದ್ದಲ್ಲ.
  3. ಉಪ್ಪು : ಉಪ್ಪು ರಾಸಾಯನಿಕ ಪದಾರ್ಥ, ಇದು ಸಸ್ಯಜನ್ಯ ಆಹಾರವಲ್ಲ. ನಮ್ಮ ದೇಹವು ಸಸ್ಯಜನ್ಯ ಆಹಾರಗಳನ್ನು ಉಪಯೋಗಿಸಿ ಆರೋಗ್ಯವಾಗಿ ಬದುಕಲು ರಚನೆಯಾಗಿದೆ. ಇಂತಹ ರಾಸಾಯನಿಕಗಳನ್ನು ಬಳಸುವುದರಿಂದ ಕ್ರಮೇಣ ಶರೀರದ ವ್ಯವಸ್ಥೆಗಳಿಗೆ ಹಾನಿ ಉಂಟಾಗುತ್ತದೆ. ನಮ್ಮ ಶರೀರಕ್ಕೆ ಬೇಕಾದಷ್ಟು ಉಪ್ಪು ನಮಗೆ ಸಸ್ಯಜನ್ಯ ಆಹಾರಗಳು ಅಂದರೆ ತರಕಾರಿ ಇತ್ಯಾದಿಗಳಿಂದ ಸಾಕಷ್ಟು ದೊರೆಯುತ್ತದೆ. ನಾವು ಬಳಸುವ ಉಪ್ಪು ಅನವಶ್ಯಕವಾಗಿರುತ್ತದೆ. ಉಪ್ಪು ಇಲ್ಲದ ಆಹಾರಕ್ಕೆ ರುಚಿಯೇ ಇಲ್ಲ, ಅದನ್ನು ತಿನ್ನಲು ಸಾಧ್ಯವೇ ಇಲ್ಲ ಎಂಬುದು ನಿಜ. ಆದರೆ, ಇದು ಪಾರಂಪರಿಕವಾಗಿ ರೂಢಿಯಿಂದ ಬಂದದ್ದು. ಈ ರೂಢಿಯನ್ನು ಬದಲಿಸಿಕೊಳ್ಳಬಹುದು. ಉಪ್ಪನ್ನು ಅತಿಯಾಗಿ ಬಳಸಬಾರದು, ಉಪ್ಪು ಅಧಿಕ ಪ್ರಮಾಣದಲ್ಲಿ ಬಳಸುತ್ತಿರುವವರು ಕ್ರಮೇಣ ಅದರ ಬಳಕೆಯನ್ನು ಕಡಿಮೆ ಮಾಡುತ್ತಾ ತಮ್ಮ ರೂಢಿಯನ್ನು ಬದಲಿಸಿಕೊಳ್ಳುವುದು ಪ್ರಯೋಜನಕಾರಿ.
  4. ಕೃತಕ ಸಿಹಿಕಾರಕ : ಕೃತಕ ಆಹಾರಗಳು ಜೀರ್ಣಿಸಿಕೊಳ್ಳಲು ಕಷ್ಟ. ಕೃತಕ ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ಕರುಳಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದು ದೇಹದಲ್ಲಿ ಇತರ ರೋಗಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಕೃತಕ ಸಿಹಿಕಾರಕಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತವೆ, ಇದು ಉರಿಯೂತಕ್ಕೆ ಕಾರಣವಾಗಬಹುದು. ದೀರ್ಘ ಕಾಲದ ಉರಿಯುತ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು.
  5. ಅತಿ ಸಂಸ್ಕರಿತ ಆಹಾರ : ಅಲ್ಟ್ರಾ-ಸಂಸ್ಕರಿಸಿದ ಆಹಾರಗಳ ಪಟ್ಟಿಯಲ್ಲಿ ಉಪ್ಪು, ಕೊಬ್ಬು ಮತ್ತು ಸಕ್ಕರೆ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಹಿಟ್ಟು ಕೂಡ ಸೇರಿದೆ. ತಜ್ಞರ ಪ್ರಕಾರ, ಅತಿ-ಸಂಸ್ಕರಿಸಿದ (ಅಲ್ಟ್ರಾ ರಿಫೈನ್ಡ್) ಆಹಾರದ ಅತಿಯಾದ ಸೇವನೆಯು ಕರುಳಿನ ಮೈಕ್ರೋಬಿಯಾವನ್ನು ಬದಲಾಯಿಸಬಹುದು. ಇದರಿಂದ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇಂತಹ ಆಹಾರಗಳಲ್ಲಿ ಉಪಯುಕ್ತ ಪೋಷಕಾಂಶಗಳು ನಷ್ಟವಾಗಿರುತ್ತವೆ ಹಾಗೂ ಇದನ್ನು ಜೀರ್ಣಿಸಿಕೊಂಡಾಗ ದೇಹದಲ್ಲಿ ಕಲ್ಮಶಗಳು, ವಿಷಕಾರಕ ಪದಾರ್ಥಗಳು ವೃದ್ಧಿಯಾಗುತ್ತವೆ.
  6. ಕರಿದ ಆಹಾರಗಳು :ಹೊಸ ತಲೆಮಾರಿನವರು ಕರಿದ ಆಹಾರಗಳನ್ನು ತುಂಬಾ ಇಷ್ಟಪಡುತ್ತಾರೆ, ಆದರೆ, ಈ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ನಾವು ಹೆಚ್ಚು ಕರಿದ ಆಹಾರವನ್ನು ಸೇವಿಸಿದರೆ, ಕರುಳಿನ ಹಾನಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಸಸ್ಯಜನ್ಯ ಎಣ್ಣೆಗಳು ಒಮೆಗಾ -3 ಗಿಂತ ಒಮೆಗಾ -6 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಕರುಳಿನ ಒಳಪದರವನ್ನು ಹಾನಿಗೊಳಿಸುತ್ತದೆ.

ಸಂಗ್ರಹ ಮತ್ತು ಸಂಪಾದನೆ:ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

1 day ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

1 day ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

1 day ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

3 days ago