ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) 2022-23 ನೇ ಹಣಕಾಸು ವರ್ಷದ ವಾರ್ಷಿಕ ಬಜೆಟನ್ನು ಬಿಡುಗಡೆ ಮಾಡಿದ್ದು, 3,096.40 ಕೋಟಿ ರೂಪಾಯಿಗಳ ಬಜೆಟ್ ಮಾಡಲಾಗಿದೆ.
ಬಜೆಟ್ ಸಭೆಯಲ್ಲಿ ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಪರಿಶೀಲಿಸಿದ ನಂತರ, ಪ್ರಸಕ್ತ ವರ್ಷ 1000 ಕೋಟಿ ಆದಾಯದ ಸಿಂಹಪಾಲು ದೇವಸ್ಥಾನದ ಹುಂಡಿ ಅಥವಾ ಭಕ್ತರ ಕಾಣಿಕೆಯಿಂದ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಡ್ಡಿ ರಸೀದಿಗಳು 6668.5 ಕೋಟಿ ರೂಪಾಯಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಆದರೆ ಲಡ್ಡು ಮತ್ತು ಇತರ ಪ್ರಸಾದ ಮಾರಾಟದಿಂದ 365 ಕೋಟಿ ರೂಪಾಯಿಗಳ ನಿರೀಕ್ಷೆಯಿದೆ.
1,360.15 ಕೋಟಿ ರೂ.ಗಳ ಅತ್ಯಧಿಕ ವೆಚ್ಚವು ಮಾನವ ಸಂಪನ್ಮೂಲ ಪಾವತಿಗಳ ಮತ್ತು ನಂತರದ ವಸ್ತುಗಳ ಖರೀದಿ ಮತ್ತು ಇಂಜಿನಿಯರಿಂಗ್ ಬಂಡವಾಳದ ಕೆಲಸಗಳಿಗೆ ಕ್ರಮವಾಗಿ ರೂ.489.50 ಕೋಟಿ ಮತ್ತಿ ರೂ 220 ಕೋಟಿಗಳಾಗಿವೆ.
ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನೇತೃತ್ವದ ಟಿಟಿಡಿ ಮಂಡಳಿಯು 2022-23 ರವಾರ್ಷಿಕ ಬಜೆಟ್ ಮತ್ತು 2021-22 ಪರಿಷ್ಕೃತ ಬಜೆಟ್ ಅಂದಾಜು 3,೦೦೦.76 ಕೋಟಿ ರೂ ಆಗಿದೆ.
ರಾಜ್ಯದಲ್ಲಿ ಮೇ 20ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಮೇ 27ರ ಸುಮಾರಿಗೆ…
ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…
ಮೇ 20ರಿಂದ ರಾಜ್ಯದ ಹಲವೆಡೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ…
ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…
ದೆಹಲಿಯ ಗಾಜಿಪುರದಲ್ಲಿ ದಿನಕ್ಕೆ 300 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪನೆಗೆ…