Advertisement
Opinion

ಇದು ಅಂದು-ಇಂದಿನ ಲೆಕ್ಕಾಚಾರ | ಗತಕಾಲದ ವೈಭವಕ್ಕೆ ಇಂದಿನ ಐಶಾರಾಮಿ ಜೀವನ ಎಂದೂ ಸಮ ಆಗಲ್ಲ ಯಾಕೆ..?

Share

ಅದೊಂದು ಕಾಲ ಇತ್ತು. ಸಾವದಾನ, ಸಮಧಾನ, ಸರಳತೆಯ ಬದುಕು(Simple Life) ಇತ್ತು. ದಿನಕಳೆದಂತೆ ಬದುಕುವ ರೀತಿ ಬದಲಾಗುತ್ತಾ ಹೋಯ್ತ. ಒಂದೋಳ್ಳೆ ರೀತಿಯಾಗಿ ಸಾಗುತಿದ್ದ ಜೀವನಕ್ಕೆ ಆಧುನಿಕರಣದ(Modernization) ಟಚ್‌ ಸಿಗುತ್ತಾ ಹೋಯ್ತು. ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬಂತು. ಆದರೆ ಬದುಕು ಅದೇ. ಜೀವನ ಶೈಲಿ(Life Style) ಬದಲಾಯ್ತು. ಆದರೆ ಜೀವನ ಅದೇ.. ತಲತಲಾಂತರದಿಂದ ಬಂದ ನಮ್ಮ ಆಚರಣೆ ಬಿಟ್ಟು ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆದ್ರೂ ಅದರಿಂದ ಪ್ರಯೋಜನ ಶೂನ್ಯ..

ಹಾಗಿದ್ದರೆ ಅಂದು ಹೇಗಿತ್ತು…?

– ಹಳ್ಳದಲ್ಲಿ ಹರಿವ ನೀರಿಗೆ ಬಾಯಾಕಿ ಕುಡಿದಾಗ ನೆಗಡಿಯಾಗಲಿಲ್ಲ, ಇಂದು ಬಿಸ್ಲೇರಿ ನೀರು ಕುಡಿದಾಗ ಯಾಕೋ ಕೆಮ್ಮು ಬರುತ್ತಿದೆಯಲ್ಲ.
– ಮೈಲಿಗಟ್ಟಲೆ ಬರಿಗಾಲಿನಲ್ಲಿ ನಡೆದಾಗ ಸುಸ್ತಾಗಲಿಲ್ಲ, ಇಂದು ಬಸ್ಸಿನಲ್ಲಿ ಪ್ರಯಾಣಿಸುವಾಗ ಏಕೋ ‌ದಣಿವಾಗುತ್ತಿದೆಯಲ್ಲ.
– ಹಸುಕರುಗಳೆಲ್ಲ ಹಿತ್ತಲಬಾಗಲಲ್ಲಿ ಹಾಲುಕರೆದು ಅಂಬಾ ಎನ್ನುತ್ತಿದ್ದವಲ್ಲ, ಇಂದು ಮಕ್ಕಳಿಗೆ ಹಸುಗಳ ಚಿತ್ರವನ್ನು ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿಯಲ್ಲ.
– ತಂಗಳು ಮಜ್ಜಿಗೆ ಜೊತೆಗೆ ಮುದ್ದೆ ಕಿವುಚಿ ತಿಂದಾಗ ಹಸಿವು ಓಡಿತಲ್ಲ, ಇಂದು ವೈಭವದ ಕೈರುಚಿ ದರ್ಶಿನಿಗಳ ತಿನಿಸುಗಳೆಲ್ಲ ರುಚಿಗಷ್ಟೆ ಇವೆಯಲ್ಲ.
– ಅಟ್ಲಾಸ್ ಸೈಕಲ್ ದಿನವಿಡೀ ತುಳಿವಾಗ ರೋಗ ಹೆದಿರಿತಲ್ಲ, ಇಂದು ಐಶಾರಾಮಿ ಕಾರುಗಳಲ್ಲಿ ಬರುವವರೆಲ್ಲರಿಗೂ ಬಿಪಿ ಶುಗರ್ ಇದೆಯಲ್ಲಾ.
– ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕಲಿತವರು ಗಟ್ಟಿ ಜೀವನ ಕಟ್ಟಿಕೊಂಡರಲ್ಲ, ಇಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಿ ಕಲಿತರೂ ಕೆಲಸವಿಲ್ಲವಲ್ಲ.

– ಸಣ್ಣಪುಟ್ಟ ರೋಗಗಳು ಬರುತ್ತಿದ್ದರೂ ಹೋಬಳಿ ತಾಲ್ಲೂಕಿಗೊಬ್ಬ ವೈದ್ಯರಿದ್ದರಲ್ಲ, ಇಂದು ಹೆಸರು ತಿಳಿಯದ ಅದೆಷ್ಟೋ ರೋಗರುಜುನೆಗಳು ಬಂದು ಬಡಾವಣೆಗೊಂದು ನರ್ಸಿಂಗ್ ಹೋಮ್ ತಲೆಯೆತ್ತುತ್ತಿವೆಯಲ್ಲ.
– ಎಂಬತ್ತು ಪೈಸೆ ಕೊಟ್ಟು ನೋಡಿದ ಸಿನಿಮಾ ಜೀವನಕ್ಕೆ ದಾರಿ ದೀಪವಾಗಿತ್ತಲ್ಲ, ಇಂದು ಸಾವಿರ ನೀಡಿ ಐನಾಕ್ಸ್ ಪಿವಿಆರ್ ಗಳಲ್ಲಿ ನೋಡಿದ ಸಿನಿಮಾದಿಂದ ಬದುಕು ಕಳೆದೋಯಿತಲ್ಲ.
– ಬೆರಳುಗಳ ಸಹಾಯದಿಂದ ಕಲಿತ ಗಣಿತ ವ್ಯಾಪಾರಕ್ಕೆ ಸಹಾಯ ಮಾಡಿತಲ್ಲ, ಕ್ಯಾಲ್ಕುಲೇಟರ್, ಐಪಾಡ್ ಗಳ ಉಪಯೋಗದಿಂದ ಕಲಿತ ಲೆಕ್ಕ ವ್ಯವಹಾರಕ್ಕೆ ಉಪಯೋಗವಾಗಲಿಲ್ಲವಲ್ಲ.
– ನಂಜನಗೂಡು ಹಲ್ಲುಪುಡಿ, ಲೈಫ್ ಬಾಯ್ ಸೋಪಿಗೆ ಸೌಂದರ್ಯ ಬೆದರಿ ಹೆಚ್ಚಿತಲ್ಲ, ಇಂದು ಡವ್ ಸೋಪು, ಫೇರ್ ಅಂಡ್ ಲವ್ಲಿಗೆ ಚರ್ಮ ಸುಕ್ಕುಗಟ್ಟಿತಲ್ಲ.
– ಗೆಡ್ಡೆ ಗೆಣಸು ಅಗೆದು ತಿನ್ನುತ್ತಿರುವಾಗ ಬಡತನವಿರಲಿಲ್ಲ, ಇಂದು ಬಂಗಾರ ಅಗೆದು ಮಾರಿದರೂ ಶ್ರೀಮಂತಿಕೆ ನಿಲ್ಲುತ್ತಿಲ್ಲವಲ್ಲ.
– ಬದುಕು ಕಟ್ಟಿಕೊಳ್ಳಲು ಜನಗಳೆಲ್ಲ ಪೇಟೆಯ ಕಡೆ ಮುಖ ಮಾಡಿದರಲ್ಲ, ಇಂದು ಜೀವ ಉಳಿಸಿಕೊಳ್ಳಲು ಅದ್ಯಾಕೋ ಜನ ಹಳ್ಳಿಗೆ ಬರುವವರಿದ್ದಾರಲ್ಲ ……..

ಬರಹ :
ಎಂ .ಡಿ.ಪ್ರಧಾನಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

2 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

9 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

15 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

1 day ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

1 day ago