Opinion

ಇಷ್ಟೇನಾ ಅಂತ ಕೇಳ್ಬೇಡಿ – ಪರಿಸರವನ್ನು ಪ್ಲಾಸ್ಟಿಕ್‌ ಮಾಲಿನ್ಯದಿಂದ ಕಾಪಾಡಲು ಇಷ್ಟು ಸಾಕು..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ಲಾಸ್ಟಿಕ್‌(Plastic) ರಾಸಾಯನಿಕವಾಗಿ(Chemical) ಪಾಲಿ ಈಥೈಲೀನ್ ಪಾಲಿಮರ್ ಆಗಿದ್ದು ಇದು ಪೆಟ್ರೋಲಿಯಂ ಉತ್ಪನ್ನಗಳಿಂದ(Petroleum) ಪ್ರಧಾನವಾಗಿ ಮಾಡಲ್ಪಟ್ಟಿದೆ. ಸುಮಾರು ೧೩,೦೦೦ ಬಗೆಯ ರಾಸಾಯನಿಕಗಳು ಇದರ ಉತ್ಪತ್ತಿ ಮತ್ತು ಉಪಯೋಗದಲ್ಲಿ ಪ್ರಮುಖ ಪಾತ್ರವಹಿಸುತ್ತವೆಯಾದುದರಿಂದ ಇದರಿಂದುಂಟಾಗಬಹುದಾದ ಅನಾಹುತಗಳನ್ನು ಊಹಿಸಲು ಅಸಾಧ್ಯ. ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸಿ ಇದರಿಂದುಂಟಾಗುವ ಭೂಮಿ(Earth), ಜಲ(Water) ಮತ್ತು ವಾಯುಮಾಲಿನ್ಯಗಳನ್ನು(Air polution) ತಡೆಯುವುದು ಅತ್ಯವಶ್ಯಕವಾಗಿದೆ.

Advertisement
Advertisement

ಕೃತಕವಾಗಿ ತಯಾರಿಸಲ್ಪಟ್ಟ ಪೆಟ್ರೋಲಿಯಂ ರಾಸಾಯನಿಕ ವಸ್ತುಗಳಿಂದ ಪ್ಲಾಸ್ಟಿಕ್ ರಚಿತವಾಗಿದ್ದು, ಇದನ್ನು ಸುಟ್ಟಾಗ ಅಥವಾ ಕರಗಿಸಿದಾಗ ಉಂಟಾಗುವ ಹಾನಿಕಾರಕ ರಾಸಾಯನಿಕಗಳು ಪರಿಸರ ಮಾಲಿನ್ಯವನ್ನುಂಟುಮಾಡುತ್ತವೆ. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದನ್ನೀಗ ಮನುಜರಾದ ನಾವೇ ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೂ ಸಾಕಾಗುತ್ತದೆ. ಇಲ್ಲಿ ನೋಡಿ

ಇಷ್ಟೇನಾ ಅಂತ ಕೇಳ್ಬೇಡಿ ಮೊದಲೇ ಹೇಳಿ ಬಿಡುತ್ತೇನೆ… ವಿಷಯ ಸಿಂಪಲ್,,,, 10 ರೂಪಾಯಿ ಮಜೂರಿ ಅಷ್ಟೇ… ನಮ್ಮ ಬೊಳುವಾರಿನಲ್ಲಿ ಭಾಸ್ಕರಣ್ಣ ಅಂತ ಹಿರಿಯ ಟೈಲರ್ ಒಬ್ಬರು ಇದ್ದಾರೆ.  ವಯಸ್ಸು ಅಂದಾಜು 70 ರ ಆಸುಪಾಸು ಮೊದಲೆಲ್ಲಾ ತುಂಬಾ ಕೆಲಸ ಸಿಗುತ್ತಿತ್ತು. ಆದರೆ ಈಗ ಈ ರೆಡಿಮೇಡ್ ಬಟ್ಟೆಗಳಿಗೆ ಬೇಡಿಕೆ ಹೆಚ್ಚು ಇರುವುದರಿಂದ  ಈ ಬಟ್ಟೆ ಖರೀದಿ ಮಾಡಿ ಅದನ್ನು ಟೈಲರಗಳಿಗೆ ಹೊಲಿಯಲು ಕೊಡುವುದು ಜನರಿಗೆ ಕಾಯುವಷ್ಟು ಪುರುಸೋತ್ತು ಇಲ್ಲ,(ನನ್ನನ್ನು ಸೇರಿಸಿ)
ಒಂದು ಸಣ್ಣ ಕೆಲಸ, 10 ಮೀಟರ್ ಬಟ್ಟೆ (ಮೀಟರಿಗೆ 20ರೂಪಾಯಿ) ಖರೀದಿ ಮಾಡಿ 20 ಕೈಚೀಲ ಹೊಲಿದು ಕೊಡುತ್ತೀರಂತಾ ಕೇಳಿದೆ. ಒಂದು ಚೀಲ ಹೊಲಿದ ಮಜೂರಿ 10 ರೂಪಾಯಿ ಕೊಡುತ್ತೇನೆ ಹೇಗೆ ಕೆಲಸ ಮಾಡುತ್ತೀರಂತ ಕೇಳಿದೆ, ಸರಿ ಮಲ್ಯರೇ ಎಂದು ಕೆಲಸ ಶುರುಮಾಡಿದರು. ನೋಡಿ ಚೀಲ ಹೇಗಿದೆ.. ? ಸ್ವಲ್ಪ ತಾಳ್ಮೆ ಬೇಕು ಅಷ್ಟೇ..

ಈ ವಿಷಯದಲ್ಲಿ ಇನ್ನು ಈ ಚೀಲದ ಉಪಯೋಗ ಹೇಗಂತ ಕೇಳುತ್ತೀರಾ…. ನಾನೊಂದ ಪುಟ್ಟದಾದ ಜನರಲ್ ಸ್ಟೋರ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದೇನೆ. ನನ್ನಲ್ಲಿ ನಿತ್ಯ ವ್ಯಾಪಾರಕ್ಕೆ ಬರುವಂತಾಹ ಗ್ರಾಹಕರೀಗೆ (300 ಮೇಲ್ಪಟ್ಟ ವ್ಯಾಪಾರಕ್ಕೆ) ಇದನ್ನು ನೀಡುತ್ತಿದ್ದೇನೆ. 500, 300 ರೂಪಾಯಿ ಖರೀದಿಗೆ ಬಿಲ್ನಲ್ಲಿ 5%10% ಡಿಸ್ಕೌಂಟ್ ಮಾಡುವ ಬದಲು ಇಂತಾಹ ಚೀಲಗಳನ್ನು ನಮ್ಮ ಆಸುಪಾಸಿನ ಈ ವಿಷಯದಲ್ಲಿ ಆಸಕ್ತಿ ಇರುವ ಟೈಲರಗಳಲ್ಲಿ ಹೊಲಿಯಲು ನೀಡಿ. ಅವರೀಗೂ ಕೆಲಸ ಆಗುತ್ತದೆ. ಪ್ಲಾಸ್ಟಿಕ್ ನಿಂದ ಸ್ವಲ್ಪ ಮುಕ್ತಿ ಸಿಗಬಹುದು.

ಬರಹ :
ಕಿರಣ ಶಂಕರ ಮಲ್ಯ
, ಸ್ವಚ್ಚಪುತ್ತೂರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…

8 hours ago

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

10 hours ago

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…

15 hours ago

ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?

ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…

16 hours ago

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

21 hours ago

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…

23 hours ago