ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

January 10, 2026
10:33 PM

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ ಸಾಕು ಎಂದೆನಿಸಿ ಬಿಡುತ್ತದೆ. ಹಾಗೆಯೇ ನಾವು ಆರೋಗ್ಯವಾಗಿ ಇದ್ದೇವೆ ಎಂದು ಬೇರೆ ಯಾರೂ ಹೇಳಬೇಕಾಗಿಲ್ಲ. ನಮ್ಮ ದೇಹವೇ ಕೆಲವೊಂದು ಸಂಕೇತದ ಮೂಲಕ ತಿಳಿಸಿಕೊಡುತ್ತದೆ. ಈ ಸಂಕೇತವೂ ನಮಗೆ ತಿಳಿದರೆ ಸಾಕು. ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಯಾವೆಲ್ಲಾ ಸಂಕೇತಗಳೆಂದರೆ: 

Advertisement
  • ಬೆಳಗ್ಗೆ ತಾಜಾತನದಿಂದ ಏಳುವುದು: ಉಲ್ಲಾಸದಿಂದ ಬೆಳಿಗ್ಗೆ ಯಾರೂ ಏಳುತ್ತಾರೋ ಅವರೇ ಆರೋಗ್ಯವಂತರು. ಏಕೆಂದರೆ ದೇಹವು ಆರೋಗ್ಯವಾಗಿದೆ ಎಂಬುದನ್ನು ಸೂಚಿಸುವಲ್ಲಿ ನಿದ್ರೆ ಒಂದು. ರಾತ್ರಿ ಗುಣಮಟ್ಟದ ನಿದ್ರೆಯು ಆರೋಗ್ಯದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ.
  • ಸರಿಯಾದ ಮಲವಿಸರ್ಜನೆ ಹಾಗೂ ಸ್ವಚ್ಛವಾದ ಮೂತ್ರ: ಬೆಳಿಗ್ಗಿನ ಮೂತ್ರವೂ ಸ್ಚಚ್ಛವಾಗಿದ್ದರೆ ಕಿಡ್ನಿಯೂ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರ್ಥ. ಹಾಗೂ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಸಾಧ್ಯವಾದರೆ ಅದು ಕರುಳಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಸೂಚಿಸುತ್ತದೆ.
  • ಗಾಯ: ದೇಹಕ್ಕೆ ಆಗುವ ಗಾಯವೂ ಬೇಗನೆ ವಾಸಿಯಾದರೆ ನಮ್ಮ ದೇಹವೂ ರೋಗನಿರೋಧಕ ಶಕ್ತಿ ಹಾಗೂ ನಾವು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ.
  • ಚರ್ಮದ ಆರೋಗ್ಯ: ನಮ್ಮ ಚರ್ಮವೂ ಆರೋಗ್ಯಕರವಾಗಿ ಕಾಂತಿಯುತವಾಗಿದೆ ಎಂದರೆ ನಮ್ಮ ದೇಹಕ್ಕೆ ಸರಿಯಾದ ಜಲಸಂಚಯನವಾಗುತ್ತಿದೆ ಎಂದರ್ಥ.
  • ಆಯಾಸವಿಲ್ಲದ ನಡೆ: ವೇಗಾಗಿ ನಡೆಯುವಾಗ ಬೇಗನೆ ಆಯಾಸವಾಗುವುದಿಲ್ಲ ಎಂದರೆ ರಕ್ತ ಪರಿಚಲನೆ, ನರವ್ಯೂಹ, ಸ್ನಾಯುಗಳು ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
  • ಸ್ಮರಣಶಕ್ತಿ: ಸ್ಮರಣಶಕ್ತಿ ಉತ್ತಮವಾಗಿದ್ದರೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ.
  • ಸ್ಥಿರವಾದ ಉಸಿರಾಟ: ಸಾಮಾನ್ಯ ಹಾಗೂ ಸ್ಥಿರವಾದ ಉಸಿರಾಟದ ಮಾದರಿ ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸೂಚಿಸುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ
June 23, 2026
10:13 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ
June 23, 2026
8:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ
June 23, 2026
1:51 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು
June 23, 2026
7:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror