ಪ್ಲಾಸ್ಟಿಕ್‌ ಮೇಲೆ ಮೇಲೆ ಸಿಟ್ಟು ಬೇಡ- ಐಡಿಯಾ ಮಾಡಿ…! | ಇಲ್ಲೊಂದು ಹೊಸ ಪ್ರಯೋಗ ಮಾಡಿದ್ದಾರೆ… | ಪ್ಲಾಸ್ಟಿಕ್ ತ್ಯಾಜ್ಯದಿಂದ ಟೈಲ್ಸ್…! |

March 8, 2023
11:54 AM

ನಮ್ಮ ಪರಿಸರಕ್ಕೆ ಬಹುದೊಡ್ಡ ತಲೆ ನೋವಾಗಿ ಕಾಡ್ತಿರೋದು ಕರಗಿಸಲಾಗ ಪ್ಲಾಸ್ಟಿಕ್ ಗಳು. ಎಷ್ಟೆ ಕಡಿವಾಣ ಹಾಕಿದರೂ ರಕ್ತ ಬೀಜಾಸುರನಂತೆ ಮತ್ತೆ ಹುಟ್ಟಿಕೊಳ್ಳುತ್ತೆ. ಹಾಗೆ ಜನ ಕೂಡ ಪ್ಲಾಸ್ಟಿಕ್‌ ಇಲ್ಲದಿದ್ದರೆ ನಾವು ಬದುಕೋದು ಕಷ್ಟ ಅನ್ನುವಷ್ಟರ ಮಟ್ಟಿಗೆ ಕ್ಲೋಸ್ ಆಗ್ಬಿಟ್ಟಿದ್ದಾರೆ. ಏನೆ ಆದ್ರೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಹಾಡಲೇ ಬೇಕಾಗಿದೆ. ಬೇಡದ ಪ್ಲಾಸ್ಟಿಕ್ ಗಳನ್ನು ಎಷ್ಟುಂತ ಗುಡ್ಡೆ ಹಾಕಬಹುದು…?

Advertisement
Advertisement

ಅದಕ್ಕೆ ಈಗ ಉತ್ತರ ಕನ್ನಡ ಜಿಲ್ಲೆಯ  ಕಾರವಾರದ ನಗರ ಸಭೆ ಹೊಸ ಐಡಿಯಾವೊಂದನ್ನು ಮಾಡಿದೆ. ಸದ್ಯ ಕಾರವಾರ ನಗರಸಭೆ ವ್ಯಾಪ್ತಿಯ ಕಲಿಕಾ ಕೇಂದ್ರದ ಫ್ಲೋರಿಂಗ್​ಗೆ ಪ್ಲಾಸ್ಟಿಕ್​ ವೇಸ್ಟ್​ಗಳನ್ನು ಬಳಸಲಾಗಿದೆ. ಥೇಟ್ ಕಾಂಕ್ರೀಟ್ ಅಥವಾ ಸಿಮೆಂಟ್ ಇಂಟರ್​ಲಾಕ್​ಗಳಂತೆಯೇ ಕಾಣೋ ಪಕ್ಕಾ ಪ್ಲಾಸ್ಟಿಕ್​ನಿಂದ ತಯಾರಿಸಿದ ಟೈಲ್ಸ್ ಗಳನ್ನು ಅಳವಡಿಸಿದೆ.

Advertisement

ನೋಡಲು ಗಟ್ಟಿಮುಟ್ಟಾಗಿ ಕಾಣುವ ಈ ಟೈಲ್ಸ್​ಗಳು ಆಕರ್ಷಕವಾಗಿಯೂ ಇವೆ. ಮೇಲಾಗಿ ಉಳಿದ ಟೈಲ್ಸ್​ನಂತೆ ಇವು ಒಡೆದು ಹೋಗೋದಿಲ್ಲ. ಸಾಮಾನ್ಯವಾಗಿ ನಡೆದಾಡಿಕೊಂಡು ಹೋಗೋರೆಲ್ಲ ಇದೇನೋ ಸಾಮಾನ್ಯ ಸಿಮೆಂಟ್ ಇಂಟರ್​ಲಾಕ್​ಗಳು ಅಂದ್ಕೊಳ್ತಾರೆ. ಆದ್ರೆ ಈ ಇಂಟರ್​ಲಾಕ್ ಅಥವಾ ಟೈಲ್ಸ್​ಗಳು ತಯಾರಿಸಿರೋದು ಪ್ಲಾಸ್ಟಿಕ್ ವೇಸ್ಟೇಜ್​ನಿಂದ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪ್ಲಾಸ್ಟಿಕ್​ನಿಂದ ಟೈಲ್ಸ್ ಮಾಡುವ ಕಂಪೆನಿಯೊಂದಿದೆ. ಈ ಬಗ್ಗೆ ವಿಷಯ ತಿಳಿದುಕೊಂಡು ಕಾರವಾರ ನಗರಸಭೆಯು ಅಂತಹದ್ದೇ ಪ್ಲಾಂಟ್​ನ್ನ ಕಾರವಾರದಲ್ಲೂ ತಯಾರಿಸಲು ನಿರ್ಧರಿಸಿದೆ. ಈ ಮಧ್ಯೆ ಬೆಳ್ತಂಗಡಿಯಿಂದಲೇ ಟೈಲ್ಸ್ ತರಿಸಿಕೊಂಡು ಕಲಿಕಾಕೇಂದ್ರದ ಫ್ಲೋರಿಂಗ್ ತಯಾರಿಸಲಾಗಿದೆ. ಇನ್ನೇನು ಇದೇ ರೀತಿಯ ಟೈಲ್ಸ್ ತಯಾರಿಕಾ ಘಟಕ ಕಾರವಾರದಲ್ಲೂ ತಲೆ ಎತ್ತಲಿದೆ.

ಹೀಗೆ ಆದಲ್ಲಿ ಕಾರವಾರದಲ್ಲಿ ಪ್ರತಿದಿನ ಸಂಗ್ರಹಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಮುಕ್ತಿ ಸಿಕ್ಕಂತಾಗುವುದಲ್ಲದೇ, ಪರಿಸರ ಸ್ನೇಹಿ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಕೇವಲ ಕಾರವಾರದಲ್ಲಿ ಮಾತ್ರವಲ್ಲದೆ ಪ್ರತೀ ನಗರ ಸಭೆ, ವಾರ್ಡ್ಗಳಲ್ಲಿ ಇಂಥ ಘಟಕಗಳನ್ನು ಅಳವಡಿಸಿದ್ರೆ ಅತೀ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಅಂತ್ಯ ಹಾಡಬಹುದು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror