Opinion

ಇಂದು ರೈತ ದಿನಾಚರಣೆ | ನಾವು ರೈತರು ನಮಗೆ “ನಾವೇ” ಶುಭಾಶಯ ಕೋರಿಕೊಳ್ಳಬೇಕಾಗಿದೆ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇವತ್ತು ರೈತರ ದಿನಾಚರಣೆ(Farmers day) ಅಂತೆ. ಕೃಷಿ ಗುಂಪುಗಳಲ್ಲಿ ಇತರೆ ಜಾಲತಾಣದಲ್ಲಿ(Social Media)”ರೆಡಿಮೇಡ್”(Ready-made) ಶುಭಾಶಯಗಳ(greetings) ಹಂಚಿಕೆಯಾಗುತ್ತಿದೆ. ದುರಂತ(tragedy) ಎಂದರೆ ಬೇರೆಲ್ಲಾ ದಿನಾಚರಣೆಗಳನ್ನು ಆಚರಿಸಲು(celebration ) ಸಮಾಜಕ್ಕೆ(Social) ಮತ್ತು ನಮ್ಮ ರಾಜಕೀಯ ವ್ಯವಸ್ಥೆಗಿರುವ(Political system) ಖುಷಿ “ರೈತ ದಿನಾಚರಣೆ” ಆಚರಣೆಗಿಲ್ಲ..!? ನಾವು ರೈತರು(Farmers) ನಮಗೆ “ನಾವೇ” ಶುಭಾಶಯಗಳನ್ನ‌” ಕೋರಿಕೊಳ್ಳಬೇಕಾಗಿದೆ”…

Advertisement

ಬದಲಾದ ಋತುಮಾನ, ಯಾವುದೇ ಔಷಧಕ್ಕೂ ಬಗ್ಗದ ಕೃಷಿ ರೋಗಗಳು, ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆ ಬೆಲೆಗೂ ತಾಳೆಯಾಗದ ಕೃಷಿ ಉತ್ಪನ್ನದ ಬೆಲೆಗಳೂ, ಕೃಷಿ ಬದುಕನ್ನ ಮಾಡಲು ಬರದ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ… ಕೃಷಿಯಲ್ಲೀಗ ವೃದ್ದ ಕೃಷಿಕರು ಮತ್ತು ಕೂಲಿ ಕಾರ್ಮಿಕರು… ಸರ್ಕಸ್ ಕಂಪೆನಿಯವರು ಊರ ಬಯಲಿನಲ್ಲಿ ಪ್ರದರ್ಶನ ಹಾಕಿ ಒಂದು ದಿನ ಪ್ರದರ್ಶನ ‌ಮುಗಿಸಿ ಟೆಂಟು ಕಿತ್ತು ತಮ್ಮ ಸಾಮಾನು ಸರಂಜಾಮಿನ ಸಹಿತ ಇನ್ನೊಂದು ಊರಿಗೆ ಹೋಗುವಂತೆ ಕೃಷಿ ಬದುಕೂ ಟೆಂಟ್ ಕಿತ್ತು ಇನ್ನೊಂದು ಬದುಕಿನತ್ತ ಹೋಗುವ ಬದಲಾವಣೆ ಆಗುವ “ಆಟ” ದಂತೆ ಎನಿಸುತ್ತಿದೆ.

ಈ ಅಸ್ಥಿರ ಅಭದ್ರ ಯಾರಿಗೂ ಬೇಡವಾದ ಅನ್ನ ಆಹಾರ ಕೊಡುವ ರಂಗದ ” ಕಿಸಾನ”ರಿಗೆ ಶುಭಾಶಯ ಹೇಳುವುದೋ  “ಶುಭ ವಿದಾಯ” ಹೇಳುವುದೋ ಅರಿವಾಗದಾಗಿದೆ..‌‌.!! ಸದ್ಯಕ್ಕೆ ನಮಗೆ ನಾವೇ ಜಯ್ ಎನ್ನೋಣ…. “ಜಯ್ ಕಿಸಾನ್ “… ರೈತ ಬಂಧುಗಳೇ ಪರಸ್ಪರ ಶುಭಾಶಯಗಳು…

Today is Farmers Day. “Ready-made” greetings are being shared among farming groups and other websites. The tragedy is that there is no celebration of “Farmer’s Day” for the society and our political system to celebrate all the other days..!? We farmers have to “wish” for “ourselves”…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

9 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

10 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

12 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

12 hours ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

13 hours ago

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |

ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…

13 hours ago