ಟೊಮೆಟೋ….! ಇದೊಂದು ಅತ್ತ ಹಣ್ಣು ಅಲ್ಲ.. ಇತ್ತ ತರಕಾರಿಯೂ ಅಲ್ಲ. ಕೇವಲ ಹುಣಸೇ ಹಣ್ಣಿಗೆ ಪರಿಯಾಯವಾಗಿ ಸೃಷ್ಟಿಸಲಾಗಿದೆ. ಅಡುಗೆಯಲ್ಲಿ ನೈಸರ್ಗಿಕವಾಗಿ ರುಚಿ ಬೇಕೆಂದರೆ ಹುಣಸೆ ಹಣ್ಣನ್ನು ಮಾತ್ರ ಬಳಸಿ, ಟೊಮೆಟೋ ಕೇವಲ ರುಚಿ ನೀಡಬಲ್ಲದೇ ಹೊರತು ಆರೋಗ್ಯವನ್ನಲ್ಲ.. ಹೀಗಂತ ಹೇಳಿದವರು ಆಹಾರ ತಜ್ಞರೊಬ್ಬರು. ಆದರೆ ಈ ಟೊಮೆಟೋಗಾಗಿ ಕೊಲೆಯೇ ನಡೆದು ಹೋಯ್ತು….!
ಈಗ ಮಾತ್ರ ಟೊಮೆಟೊಗೆ ಕಾಲ ಬಂದಿದೆ ಅಷ್ಟೆ…! ಬೆಲೆ ಏರಿಕೆಯಾಗಿ ಜನ ಕಂಗಾಲಾದ್ರೆ, ಟೊಮೆಟೋ ಕಾಪಾಡಿಕೊಳ್ಳಲು ವ್ಯಾಪಾರಸ್ಥರು, ರೈತರು ಪರದಾಡುತ್ತಿದ್ದಾರೆ. ಕೆಲವೆಡೆ ಟೊಮೆಟೋ ಕಳ್ಳತನ ತಡೆಯಲು ಅಂಗಡಿಗೆ ಸಿಸಿಟಿವಿ ಹಾಕಿಸಿದ್ದು, ಇನ್ನೊಂದು ಕಡೆ ಕಾವಲುಗಾರರನ್ನು ನೇಮಿಸಿದ್ದು ಸುದ್ದಿಯಾಗಿತ್ತು. ಈ ಮಧ್ಯೆ ಕೊಯ್ಲಿಗೆ ಬಂದಿದ್ದ ಟನ್ಗಟ್ಟಲೆ ಟೊಮೆಟೋವನ್ನು ಗದ್ದೆಗೆ ನುಗ್ಗಿ ಕಳ್ಳರು ರಾತ್ರೋ ರಾತ್ರಿ ಕದ್ದು ಬೆಳಗಾರರ ಕುಟುಂಬ ಕಣ್ಣೀರು ಹಾಕುವಂತೆ ಮಾಡಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದ್ದು, ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ದರೋಡೆಕೋರರು ಕೊಲೆ ಮಾಡಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ರೈತನನ್ನು ಅಡ್ಡಗಟ್ಟಿದ ದರೋಡೆಕೋರರು ಕೃತ್ಯ ಎಸಗಿದ್ದಾರೆ. ಮೃತ ವ್ಯಕ್ತಿಯನ್ನು ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಎಂದು ಗುರುತಿಸಲಾಗಿದ್ದು, ಇವರು ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ವಾಪಸ್ ಆಗುತ್ತಿದ್ದರು.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…