ಎಳೆ ಅಡಿಕೆ ದಾಸ್ತಾನು | ಇಬ್ಬರ ಜೀವಕ್ಕೆ ಕುತ್ತು ತಂದ ವಿಷಕಾರಿ ಅನಿಲ |

November 4, 2024
6:13 AM

ಅಡಿಕೆ ದಾಸ್ತಾನು ಮಾಡಿರುವ ಟ್ಯಾಂಕ್‌ಗೆ ಇಳಿದು ಸ್ವಚ್ಛ ಮಾಡುತ್ತಿರುವಾಗ ವಿಷಕಾರಿ ಅನಿಲ ಸೇವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.ಅತಿಯಾದ ಮೀಥೇನ್ ಅನಿಲವು ಟ್ಯಾಂಕ್‌ನಲ್ಲಿ ತುಂಬಿ, ಆಮ್ಲಜನಕದ ಕೊರತೆಯನ್ನು ಉಂಟುಮಾಡಿತು ಎಂದು ವರದಿಯಾಗಿದೆ.

ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಅಡಿಕೆ ಕಟಾವು ಮಾಡಿದ ಬಳಿಕ
ದಾಸ್ತಾನು ಮಾಡಿ ಸಂಸ್ಕರಣೆಯ ನಂತರ ಬಾಂಗ್ಲಾದೇಶದಲ್ಲಿ ಅಡಿಕೆ ಮಾರಾಟ ಮಾಡಲಾಗುತ್ತದೆ. ಹೀಗೆ ದಾಸ್ತಾನು ಮಾಡಿರುವ ಅಡಿಕೆಯ ಟ್ಯಾಂಕ್‌ಗೆ ಇಳಿದ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದು ದಿನದ ಹಿಂದೆ ಟ್ಯಾಂಕ್‌ನಲ್ಲಿ ಅಡಿಕೆ ದಾಸ್ತಾನು ಮಾಡಲಾಗಿತ್ತು, ಮರುದಿನ ಇನ್ನೊಂದು ಟ್ಯಾಂಕ್‌ ಸ್ವಚ್ಛಗೊಳಿಸಿ ಅಡಿಕೆ ತುಂಬಿದ್ದ ಟ್ಯಾಂಕ್‌ ತೆರೆಯುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಉಳಿದ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement
Advertisement
Advertisement
Advertisement

ಸುಮಾರು ಎಂಟು ಅಡಿ ಆಳದ ತೊಟ್ಟಿಯಲ್ಲಿ ಅಡಿಕೆ ಶೇಖರಣೆಯಾಗಿದ್ದು, ಅಡಿಕೆಯನ್ನು ಹೊರತೆಗೆಯಲು ಮುಂದಾದಾಗ ಅವಘಡ ಸಂಭವಿಸಿದೆ.ಅಡಿಕೆ ಕೊಳೆತ ತೊಟ್ಟಿಯಲ್ಲಿ ಅತಿಯಾದ ಮೀಥೇನ್ ಅನಿಲವನ್ನು ಉತ್ಪತ್ತಿಯಾಗುತ್ತದೆ. ಇದು ಆಮ್ಲಜನಕದ ಕೊರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಅಸ್ವಸ್ಥತೆ ಉಂಟಾಗುತ್ತದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನವ ಮಂಗಳೂರು ಬಂದರಿನಿಂದ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಸಾಗಾಣಿಕೆ | ಕಾಫಿ ರಫ್ತು ವಹಿವಾಟಿಗೆ ಆದ್ಯತೆ ಅಗತ್ಯ |
February 16, 2025
4:50 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಪೀಡಿತರ ಸಂಖ್ಯೆಯಲ್ಲಿ ಏರಿಕೆ |
February 16, 2025
4:46 PM
by: The Rural Mirror ಸುದ್ದಿಜಾಲ
ಮಂಡ್ಯ ಜಿಲ್ಲೆ| 14 ದಿನದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಬೇಕು | ಜಿಲ್ಲಾಧಿಕಾರಿ ಸೂಚನೆ
February 16, 2025
4:41 PM
by: The Rural Mirror ಸುದ್ದಿಜಾಲ
 ಬಿಎಸ್‌ಎನ್‌ಎಲ್ ಗೆ 269 ಕೋಟಿ ರೂಪಾಯಿ ಲಾಭ | ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿಕೆ
February 16, 2025
4:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror