ಚಾರಣಕ್ಕೆ ತೆರಳುವವರು ಮನುಷ್ಯರಂತೆ ವರ್ತಿಸಿ | ಮೋಜು ಮಸ್ತಿಯೊಂದಿಗೆ ಪರಿಸರದ ಬಗ್ಗೆ ಕಾಳಜಿಯಿರಲಿ | ದೇವರಮನೆ ಬೆಟ್ಟದಲ್ಲಿ ರಾಶಿ ರಾಶಿ ಕಸ ಸಂಗ್ರಹಿಸಿದ ಪರಿಸರ ಪ್ರಿಯರು..!

February 21, 2024
1:07 PM

ಪಶ್ಚಿಮ ಘಟ್ಟಗಳ(western Ghats) ಸುಂದರ ತಾಣಗಳಿಗೆ ಪ್ರವಾಸಿಗರು ಚಾರಣಕ್ಕೆ(Trucking) ತೆರಳುವುದು ಮಾಮೂಲು. ಆದರೆ ಅವರು ಅಲ್ಲಿ ಹೋಗಿ ಪರಿಸರಕ್ಕೆ(Nature) ಹಾನಿಯಾಗುವಂತ ಪ್ಲಾಸ್ಟಿಕ್‌(Plastic)ವಸ್ತುಗಳನ್ನು ಅಲ್ಲೆ ಎಸೆದು ಬರುತ್ತಿರುವುದು ದುರದೃಷ್ಟಕರ ಸಂಗತಿ. ಅದೂ ವಿದ್ಯಾವಂತರಾಗಿದ್ದುಕೊಂಡು(Educates) ಈ ರೀತಿ ಪರಿಸರವನ್ನು ಹಾಳುಗೆಡವುದು ಎಷ್ಟು ಸರಿ..?. ಚಾರಣಕ್ಕೆಂದು ತೆರಳುವ ಪ್ರವಾಸಿಗರು(Tourist) ಅಲ್ಲಿಗೆ ಕೊಂಡೊಯ್ಯುವ ಪ್ಲಾಸ್ಟಿಕ್‌ ಬಾಟಲಿ(Plastic Bottle), ಆಹಾರ ಪೊಟ್ಟಣವನ್ನು(Food package) ಅಲ್ಲಿಯೇ ಬಿಟ್ಟು ಬರುತ್ತಾರೆ. ಇದರಿಂದ ಪರಿಸರದ ಮೇಲೂ ಅಪಾರ ಪ್ರಮಾಣದ ಹಾನಿಯಾಗುತ್ತದೆ. ಆದರೆ, ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆಯ ದೇವರಮನೆ (Devaramane Peak) ಬೆಟ್ಟವನ್ನೇರಿದ ಪ್ರವಾಸಿಗರ ತಂಡವೊಂದು ಕಸ ಹೆಕ್ಕುತ್ತಾ ತನ್ನ ಚಾರಣವನ್ನು ಯಶಸ್ವಿಯಾಗಿ ಕೊನೆಗೊಳಿಸಿದೆ.

Advertisement
Advertisement

ಬೆಂಗಳೂರು ಮೂಲದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಈ ಸ್ವಯಂ ಸೇವಾ ಸಂಸ್ಥೆಯ ಹತ್ತಾರು ಸದಸ್ಯರು ಇಂತಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಇದರ ಸದಸ್ಯರು ದೇವಿರಮನೆ ಬೆಟ್ಟವನ್ನು ಸ್ವಚ್ಛಗೊಳಿಸಿದ್ದಾರೆ.

Advertisement

ರಾಶಿ ಕಸ ಸಂಗ್ರಹ :ಬೆಂಗಳೂರಿನಿಂದ ಆಗಮಿಸಿದ್ದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಸದಸ್ಯರು ಬೆಳಗ್ಗೆ ಬೇಗನೇ ಬೆಟ್ಟ ತಲುಪಿದ್ದರು. ಬಳಿಕ ಮಧ್ಯಾಹ್ನದವರೆಗೂ ಕಸ ಹೆಕ್ಕಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್‌ ಬಾಟಲಿ, ಕವರ್‌ಗಳನ್ನು ಸಂಗ್ರಹಿಸಿದ್ದಾರೆ. ಚಾರಣಕ್ಕೆ ಹೋಗುವುದು ತಪ್ಪಲ್ಲ. ಆದರೆ, ಪರಿಸರಕ್ಕೆ ಹಾನಿ ಮಾಡುವುದು, ಸ್ವಚ್ಛತೆ ಕಾಪಾಡದಂತೆ ನೋಡಿಕೊಳ್ಳುವುದು ಪ್ರವಾಸಿಗರ ಜವಾಬ್ದಾರಿ. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಡಿ ಎಂದು ಸಂಸ್ಥೆಯ ಸ್ವಯಂ ಸೇವಕರು ಮನವಿ ಮಾಡಿದ್ದಾರೆ.ಬಗ್ಗೆ ಹಲವು ಬಾರಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರೂ ನಮ್ಮ ವಿದ್ಯಾಂತ ನಾಗರೀಕರು ಈ ವಿಷಯದಲ್ಲಿ ಕಾಡು ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದಾರೆ.

  • ಅಂತರ್ಜಾಲ ಮಾಹಿತಿ

Tourists who go on a trek leave the plastic bottle and food package there. This causes a lot of damage to the environment. However, a group of tourists who climbed the hill of Devaramane Peak in Mudigere, Chikkamagaluru, successfully ended their trek by collecting garbage.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ ನಾಯಕ : ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ
April 29, 2024
12:14 PM
by: The Rural Mirror ಸುದ್ದಿಜಾಲ
ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror