Advertisement
Opinion

ಚಾರಣ ಎಂಬ ಒಂದು ಚಟ, “ಹಾಗೆ ಒಂದು ವಿಚಾರ” | ಚಾರಣ ಮಾಡಲು ಪ್ಲಾನ್‌ ಹೇಗಿರಬೇಕು..?

Share

ಚಟ(Habit).. ಚಾರಣ(Trucking) ಒಂದು ರೀತಿಯ ಚಟ, ಹಾಗೆ ಮದ್ಯಪಾನ(Drinking) ಮಾಡುವುದು ಒಂದು ಚಟ…!! ಇವು ಎರಡು ಟೈಮ್ ಪಾಸ್(Time pass) ಗೆ ಶುರು ಆಗುವಂತಾ ಚಟಗಳು. ಒಂದು ಗುಂಪಿನ ಸ್ನೇಹಿತರು(Friends) “ಬಾರಮ್ಮ ಇವತ್ತು ವೀಕೆಂಡ್ ಒಂದು ಪೆಗ್ ಹಾಕೋಣ ಅಂತಾರೆ”, ಅದೇ ಇನ್ನೊಂದು ಗುಂಪಿನ ಸ್ನೇಹಿತರು “ಬಾರಮ್ಮ ಪ್ರಕೃತಿಯ(Nature) ಕಡೆ ಒಂದು ರೌಂಡ್ ಹಾಕೋಣ ಅಂತಾರೆ” ಮೊದಲ ಬಾರಿ ಚಟದ ರುಚಿಯನ್ನು ಕಂಡ ಸ್ನೇಹಿತ “ಒಳ್ಳೆ ಮಜಾ ಇತ್ತು ಗುರು, ನನಗೆ ಏನು ಆಗಲಿಲ್ಲ. ಒಳ್ಳೆ ನಿದ್ದೆ ಕೂಡ ಬಂದು ಮತ್ತೊಮ್ಮೆ ಹೋಗೋಣ” ಅಂತಾನೆ! ಚಾರಣ ಇರಲಿ ಮದ್ಯಪಾನ ಮಾಡುವುದರಲ್ಲಿ ಇರಲಿ…!! ಹಾಗೆ ಒಂದು ದಿನದ ಚಾರಣದಿಂದ ಎರಡು ದಿನದ ಚಾರಣ ಶುರು ಆಗತ್ತೆ. ಅದೇ ರೀತಿ, ಒಂದು ಪೆಗ್ ಇಂದ ಎರಡು ಮೂರು ಪೆಗ್ ಗೆ ತಿರುಗುತ್ತದೆ. ಚಟ…!!

ಚಾರಣ ಮಾಡುವವರು, ಎರಡು ದಿನದ ಚಾರಣದಿಂದ ಮೂರು ನಾಲ್ಕು ದಿನದ ಚಾರಣಕ್ಕೆ ಪ್ಲಾನ್ ಮಾಡುತ್ತಾರೆ. ಒಮ್ಮೆ ಕರ್ನಾಟಕ ಸಹ್ಯಾದ್ರಿ ಗುಡ್ಡಗಾಡು ಗಳ ಚಾರಣ ಮುಗಿದ ನಂತರ ದಕ್ಷಿಣ ಭಾರತದ ಸಹ್ಯಾದ್ರಿ ವಲಯ ತಮಿಳ್ನಾಡು ಮತ್ತು ಕೇರಳ ಕಡೆಯ ಚಾರಣ ಶುರು ಮಾಡಿಕೊಳ್ಳುತ್ತಾರೆ. ಹಾಗೆ ಒಂದು ವಾರದ ಚಾರಣ ಪ್ಲಾನ್ ಆಗತ್ತೆ (ಎರಡು ಮೂರು ಚರಣಗಳನ್ನು ಒಟ್ಟಿಗೆ ಮಾಡುವುದು). ಅದರ ಮುಂದೆ ಉಳಿದಿದ್ದು ಹಿಮಾಲಯ..!! ಹಿಮಾಲಯದ ಚಾರಣ ಮೊದಮೊದಲಿಗೆ ವೆಲ್ ಆರ್ಗನೈಜ್ಡ್ ಕಂಪನಿ ಇಂದ ಶುರು ಆಗುತ್ತದೆ. ಅಂದರೆ ಯೂತ್ ಹಾಸ್ಟೆಲ್ ಅಸೋಸಿಯೇಷನ್, ಇಂಡಿಯಾ ಹೈಕ್ಸ್, ಟ್ರೆಕ್ ದ ಹಿಮಾಲಯ, ಮುಂತಾದ ಕಂಪನಿಗಳಿಂದ. ಹಿಮಾಲಯದ ಚಾರಣಕ್ಕೆ ಬೇಕಾಗುವಂತ ಸಾಮಗ್ರಿಗಳ ಸಂಗ್ರಹ ಶುರು ಆಗುತ್ತದೆ.

ಮೊದಮೊದಲಿಗೆ ವೆಲ್ ಆರ್ಗನೈಜ್ಡ್ ಕಂಪನಿ ಇಂದ ನಡೆಯುವ ಚಾರಣಗಳು ಇಷ್ಟ ಆಗುತ್ತದೆ, ನಂತರ ಹಿಮಾಲಯದ ಯಾತ್ರೆಗಳು ಶುರು ಮಾಡಿಕೊಳ್ಳುತ್ತಾರೆ ಈ ಚಾರಣಿಗರು. ಅಂದರೆ ಕೇದಾರನಾಥ, ಅಮರನಾಥ್ ಯಾತ್ರಾ, ಪಂಚ ಕೇದಾರ ನಲ್ಲಿ ತುಂಗನಾತ್, ರುದ್ರನಾತ್, ಮಧ್ಯ ಮಹೇಶ್ವರ ಮುಂತಾದವುಗಳನ್ನು. ಇಷ್ಟರಲ್ಲಿ ಹಿಮಾಲಯ ಪಾಸ್ ಗಳ ಮಾಹಿತಿ ಬಹಳಷ್ಟು ಸಂಗ್ರಹವಾಗಿರುತ್ತದೆ. ಇದರ ಜೊತೆಗೆ ಒಂದು ವಿಚಿತ್ರ ಚಟ ಹುಟ್ಟಿಕೊಳ್ಳುತ್ತದೆ, ಜನ ಕಡಿಮೆ ಇರುವ ಚಾರಣವನ್ನು ಮಾಡಬೇಕು ಅಥವಾ ಯಾರು ಜಾಸ್ತಿ ಮಾಡಿರದ ಚಾರಣ ಮಾಡಬೇಕೆಂದು. ಕೆಲವು ಸ್ಥಳೀಯ ಕಂಪನಿಗಳು ಇವನ್ನು ಮಾಡಿಸಲಿಕ್ಕೆ ತಯಾರ್ ಕೂಡ ಇರುತ್ತದೆ. ಇಂತವರ ಕಾಂಟ್ಯಾಕ್ಟ್ ಪಡೆದು ಕಷ್ಟಕರವಾದ ಚಾರಣಗಳನ್ನು ಮಾಡುವ ಚಟ ಶುರು ಆಗಿಬಿಡುತ್ತದೆ…!!

ಇಷ್ಟರಲ್ಲೇ ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದ ಚಾರಣ ಮಾಡಿದೆ, 15 ಸಾವಿರ, 16 ಸಾವಿರ, 18 ಸಾವಿರಕ್ಕೆ ಏರುತ್ತಾ ಹೋಗಿ ಹೆಮ್ಮೆಯ ವಿಚಾರಕ್ಕೆ ಒಳಪಡುತ್ತಾರೆ. ಇನ್ನಷ್ಟು ಚಾರಣಿಗರು ಎವರೆಸ್ಟ್ ಬೇಸ್ ಕ್ಯಾಂಪ್, ಅನ್ನಪೂರ್ಣ ಬೇಸ್ ಕ್ಯಾಂಪ್, ಕಾಂಚನಜುಂಗಾ ಬೇಸ್ ಕ್ಯಾಂಪ್ ಮುಂತಾದ ಕಷ್ಟಕರವಾದ ಚಾರಣಗಳನ್ನು ಕೈಗೊಳ್ಳುತ್ತಾರೆ. ಇಂತಹ ಚಾರಣಗಳಲ್ಲಿ ಬಹು ಮುಖ್ಯವಾದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಅವು 1. ದೇಹದ ಆರೋಗ್ಯ 2. ಮಾನಸಿಕ ಆರೋಗ್ಯ 3. ಪ್ರಕೃತಿಯ ಹವಾಮಾನ ಬದಲಾವಣೆ. ಇವು ಮೂರರಲ್ಲಿ ಯಾವುದಾದರೂ ಒಂದು ಸರಿ ಇಲ್ಲವೆಂದಲ್ಲಿ ಚಾರಣವನ್ನು ನಿಲ್ಲಿಸಿ ಹಿಂತಿರುಗಿ ಬರುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ಜೀವ ಕಳೆದು ಕೊಳ್ಳಬೇಕಾಗುತ್ತದೆ.

ಇವಷ್ಟೇ ಅಲ್ಲ, ಇನ್ನ ಒಂದು ಅತೀ ಮುಖ್ಯವಾದ ವಿಷಯ ಎಂದರೆ, ಚಾರಣವನ್ನು ಆತುರ ಆತುರದಲ್ಲಿ ಮಾಡಬಾರದು. ಪಶ್ಚಿಮ ಘಟ್ಟಗಳಿಗೂ ಹಿಮಾಲಯ ಪರ್ವತಶ್ರೇಣಿಗಳಿಗೂ ಬಹಳಷ್ಟು ವ್ಯತ್ಯಾಸ ಇದೆ. ಪಶ್ಚಿಮ ಘಟ್ಟಗಳಲ್ಲಿ ಒಂದು ದಿನಕ್ಕೆ ಹೆಚ್ಚು ಅಂದರೆ 20 ರಿಂದ 22 ~ 25 ಕಿಲೋಮೀಟರ್ ಚಾರಣ ಮಾಡಬಹುದು. ಆದರೆ ಹಿಮಾಲಯದಲ್ಲಿ ಬೆಟ್ಟ ಏರುವಾಗ ಅತೀ ನಿದಾನ, ಅಂದರೆ ದಿನಕ್ಕೆ 8 ರಿಂದ 10 ~ 12 ಕಿಲೋಮೀಟರ್ ಚಾರಣ ಮಾಡುವುದು ಒಳ್ಳೆಯದು. ಗಮನ ಇಡಬೇಕಾದ ವಿಷಯ ಅಂದರೆ ಅಡಿಗಳ ಎತ್ತರ…!! ದಿನಕ್ಕೆ ಒಂದು ಸಾವಿರ ಅಡಿಗಳಷ್ಟು ಎತ್ತರ ಏರುವುದು ಉತ್ತಮ. ಯಾಕೆಂದರೆ ಎತ್ತರ ಏರಿದಷ್ಟು ಆಮ್ಲಜನಕ (ಆಕ್ಸಿಜನ್) ಕಡಿಮೆ ಆಗುವುದು, ಇದರಿಂದ ಸುಸ್ತು, ತಲೆ ತಿರುಗುವುದು, ವಾಂತಿ ಆಗುವುದು, ಹೊಟ್ಟೆ ಹಸಿವು ಇಲ್ಲದಂತೆ ಆಗುವುದು ಎಲ್ಲಾ ಆಗುತ್ತದೆ. ಹೀಗೆಲ್ಲಾ ಆದಲ್ಲಿ ತಕ್ಷಣ ಕೆಳಗೆ ಬರುವುದು ಬಹಳ ಒಳ್ಳೆಯದು.

ಹಿಮಾಲಯದಲ್ಲಿ ಚಾರಣ ಕೈಗೊಳ್ಳುವ ಮುನ್ನ ಒಮ್ಮೆ ಯೋಚಿಸಿ, ವೆಲ್ ಆರ್ಗನೈಜ್ಡ್ ವೆಲ್ ಡಿಸೈನ್ಡ್ ಚಾರಣವೋ ಅಥವಾ ಸ್ವಂತ ಪ್ಲಾನ್ ಮಾಡಿದ ಚಾರಣವೋ ಎಂದು. ಆದರೂ… ಚಾರಣ ಒಂದು ಚಟ, ಹೌದೋ ಇಲ್ಲವೋ??? ಇನ್ನ ಮದ್ಯಪಾನ ಎಂಬ ಚಟವನ್ನು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತದೆ

ಬರಹ :
ವಿಜಯ್ ಎಸ್ ಬಿ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

16 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago