ಸಾವಯವ ಕೃಷಿಯನ್ನು ಉತ್ತೇಜಿಸುವ ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಕಾಶಂ ಜಿಲ್ಲೆಯ ರೈತರಿಗೆ ಓಂಗೋಲ್ ತಳಿಯ 256 ಜಾನುವಾರುಗಳನ್ನು ನೀಡಲಿದೆ.
ಆಂದ್ರಪ್ರದೇಶದ ಚಿರಾಳ, ಕೂರಿಸಪದವು, ಅರ್ಧವೀಡು, ಮುರ್ತೂರು ಮಂಡಲಗಳಿಗೆ 40 ಹಸುಗಳು ಹಾಗೂ ಹೋರಿಗಳನ್ನು ನೀಡಲಾಗಿದೆ. ಉಳಿದ ಜಾನುವಾರುಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ನೀಡಲಾಗುವುದು. ಜಿಲ್ಲೆಯ 56 ಮಂಡಲಗಳ ಪೈಕಿ 45 ಮಂಡಲಗಳ ಸಾವಯವ ಕೃಷಿಕರು ಅರ್ಜಿ ಸಲ್ಲಿಸಿದ್ದಾರೆ.
ಸಾವಯವ ಕೃಷಿ ಕಾರ್ಯಕ್ರಮದಡಿ ಪ್ರತಿ ರೈತರಿಗೆ ಒಂದು ಹಸು ಅಥವಾ ಜೋಡಿ ಎತ್ತುಗಳ ನ್ನು ಟಿಟಿಡಿ ಮಂಜೂರು ಮಾಡಿದೆ. ಮೊದಲ ಬ್ಯಾಚ್ನ ಓಂಗೋಲ್ ತಳಿಯ ಜಾನುವಾರು ಮಂಗಳವಾರ ಆಗಮಿಸಿದ್ದು ಅದೇ ದಿನ ರೈತರಿಗೆ ವಿತರಿಸಲಾಗಿದೆ. ಉಳಿದ ಗೋವುಗಳನ್ನು ಸದ್ಯವೇ ನೀಡಲಾಗುವುದು ಎಂದು ಝಡ್ವಿಎನ್ಎಫ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಭಾಷಿಣಿ ಹೇಳಿದರು.
ಪ್ರಸಾದ ತಯಾರಿಕೆಗಾಗಿ, ಟಿಟಿಡಿ ಮಂಡಳಿಯು ಸಾವಯವವಾಗಿ ಬೆಳೆದ 6,000 ಕ್ವಿಂಟಲ್ ಭತ್ತವನ್ನು ಸೂಕ್ತ ಬೆಂಬಲ ಬೆಲೆಯಲ್ಲಿ ಜಿಲ್ಲಾ ಅಧಿಕಾರಿಗಳಿಂದ ಖರೀದಿಸಲು ಒಪ್ಪಿಗೆಯನ್ನು ನೀಡಿದೆ. ಆದುದರಿಂದ 625 ರೈತರು ಝಡ್ಬಿಎನ್ಎಫ್ ಅಥವಾ ಸಾವಯವ ಕೃಷಿ ಮೂಲಕ ಜಿಲ್ಲೆಯ ಕೃಷಿ ಅಧಿಕಾರಿಗಳ ಬೆಂಬಲದೊಂದಿಗೆ ಬೆಳೆ ಬೆಳೆಯಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…
ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…