ಅನುಕ್ರಮ

ದಯೆ ತೋರು ಶ್ರೀ ತುಳಸಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕರವ ಮುಗಿದು ಶಿರವ ಬಾಗಿ
ಬೇಡುವೆನು ಅಮ್ಮ ತಾಯೆ
ವರವ ಕೊಡು ಹರಿಯ ಸಖಿ
ನಮಿಸುವೆನು ಎನ್ನ ಕಾಯೆ  ||
ಉದಯಕಾಲ ಮಡಿಯನುಟ್ಟು
ಸುಮಗಳಿಂದ ಪೂಜೆಗೈವೆ
ಭಕ್ತಿಯಲಿ ಬೇಡುವೆನು
ಹರಿಯ ಸ್ಮರಣೆ ಮಾಡುವೆನು  ||
ದಯೆಯ ತೋರು ಶ್ರೀ ತುಳಸಿ
ಅರಸಿನ ಕುಂಕುಮದ ಒಡತಿ
ಸಂತಾನಭಾಗ್ಯ ನೀಡಿ ಬೆಳಗು
ವರಿಸಿದ ಮನೆಯ ಪ್ರಣತಿ  ||
ಧೂಪದೀಪವನ್ನು ಬೆಳಗಿ
ನಿತ್ಯ ನಿನ್ನ ಪೂಜೆಗೈವೆ
ತಾಪವನ್ನು ದೂರಮಾಡು
ಸತ್ಯ ನಿನ್ನ ಜಪವಗೈವೆ  ||
ಕ್ಲೇಶವನ್ನು ದೂರಮಾಡು
ತೋಷವನ್ನು ಎನಗೆ ನೀಡು
ದಾತೆ ವೃಂದೆ ನಮಿಪೆ ನಿನಗೆ
ಮಾತೆ ನಿಂದೆ ಚರಣಕೆರಗಿ    ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

12 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

13 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

13 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

22 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

2 days ago