ದಯೆ ತೋರು ಶ್ರೀ ತುಳಸಿ

November 26, 2020
10:00 PM
ಕರವ ಮುಗಿದು ಶಿರವ ಬಾಗಿ
ಬೇಡುವೆನು ಅಮ್ಮ ತಾಯೆ
ವರವ ಕೊಡು ಹರಿಯ ಸಖಿ
ನಮಿಸುವೆನು ಎನ್ನ ಕಾಯೆ  ||
ಉದಯಕಾಲ ಮಡಿಯನುಟ್ಟು
ಸುಮಗಳಿಂದ ಪೂಜೆಗೈವೆ
ಭಕ್ತಿಯಲಿ ಬೇಡುವೆನು
ಹರಿಯ ಸ್ಮರಣೆ ಮಾಡುವೆನು  ||
ದಯೆಯ ತೋರು ಶ್ರೀ ತುಳಸಿ
ಅರಸಿನ ಕುಂಕುಮದ ಒಡತಿ
ಸಂತಾನಭಾಗ್ಯ ನೀಡಿ ಬೆಳಗು
ವರಿಸಿದ ಮನೆಯ ಪ್ರಣತಿ  ||
ಧೂಪದೀಪವನ್ನು ಬೆಳಗಿ
ನಿತ್ಯ ನಿನ್ನ ಪೂಜೆಗೈವೆ
ತಾಪವನ್ನು ದೂರಮಾಡು
ಸತ್ಯ ನಿನ್ನ ಜಪವಗೈವೆ  ||
ಕ್ಲೇಶವನ್ನು ದೂರಮಾಡು
ತೋಷವನ್ನು ಎನಗೆ ನೀಡು
ದಾತೆ ವೃಂದೆ ನಮಿಪೆ ನಿನಗೆ
ಮಾತೆ ನಿಂದೆ ಚರಣಕೆರಗಿ    ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ವೃದ್ಧಾಪ್ಯದಲ್ಲಿ ಬೇಕಾಗಿರುವುದು ಹಣವಲ್ಲ, ಗೌರವ ಮತ್ತು ಆತ್ಮೀಯತೆ
May 15, 2026
8:33 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಪದವಿಪೂರ್ವ ಶಿಕ್ಷಣ ಮತ್ತು ನೀಟ್ ಪರೀಕ್ಷೆಯ ಒತ್ತಡ : ಪರ್ಯಾಯ ದೃಷ್ಟಿಕೋನ
May 1, 2026
10:20 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror