ಸುದ್ದಿಗಳು

ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು ‘ಫಲಪ್ರದ’

Share
ಬಂಟ್ವಾಳ ತಾಲೂಕಿನ ಉಬರು-ಮುಳಿಯ ‘ಹಲಸು ಸ್ನೇಹಿ ಕೂಟ’ವು 2011ರಿಂದ ಸಕ್ರಿಯ. ಹಲಸು, ಗೆಡ್ಡೆ, ತರಕಾರಿ, ಮಾವು, ಕಾಡುಮಾವು, ಪುನರ್ಪುಳಿ, ಚಳಿಗಾಲದ ತರಕಾರಿ, ಸಿರಿಧಾನ್ಯ, ಸೊಪ್ಪು ತರಕಾರಿಗಳು, ಹಣ್ಣುಗಳ ಫಲಾಹಾರ.. ಹೀಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಒಂದು ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ನಡೆಸಿದೆ.
ಹಲಸು ಮತ್ತು ಮಾವಿನ ‘ರುಚಿ ನೋಡಿ ತಳಿ ಆಯ್ಕೆ’ ಮೂಲಕ ಸುಮಾರು ಐವತ್ತಕ್ಕೂ ಮಿಕ್ಕಿ ತಳಿಗಳು ಅಭಿವೃದ್ಧಿಗೊಂಡು ಕೃಷಿಕರ ತೋಟದಲ್ಲಿ ಬೆಳೆದಿವೆ. ಹಲಸಿನ ತೋಟಗಳು ಎದ್ದಿವೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧಗೊಂಡಿವೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಉತ್ತಮ ಹಲಸು-ಮಾವುಗಳನ್ನು ‘ಕೃಷಿಕರೇ’ ಆಯ್ಕೆ ಮಾಡಿರುವುದು ವಿಶೇಷ.
ಸಂಪರ್ಕಕ್ಕೆ ಬಂದ ಅನೇಕ ಮನೆಗಳಲ್ಲಿ ಹಲಸು, ಮಾವು, ಸಿರಿಧಾನ್ಯ.. ಹೀಗೆ ಖಾದ್ಯಗಳಿಗೆ ಮೊದಲ ಮಣೆ. ಸದ್ದಿಲ್ಲದೆ ದಶಕಕ್ಕೂ ಮಿಕ್ಕಿ ಕಲಾಪಗಳನ್ನು ನಡೆಸುವುದ ಮೂಲಕ ಕೃಷಿ, ಕೃಷಿಕರ ಆಸಕ್ತಿಗಳನ್ನು ಜೀವಂತವಿಟ್ಟಿದೆ.
ಹನ್ನೊಂದು ವರುಷದ ‘ಹಲಸು ಸ್ನೇಹಿ ಕೂಟ’ದ ಕಲಾಪಗಳ ವಿವರಗಳು, ಆಯ್ಕೆಯಾದ ತಳಿಗಳು, ವಿಷಯ ತಜ್ಞರ ಮಾತುಗಳು ‘ಫಲಪ್ರದ’ ಪುಸ್ತಕದ ಹೂರಣಗಳು.
ಪುಸ್ತಕದ ಲೇಖಕ : ನಾ. ಕಾರಂತ ಪೆರಾಜೆ. ಹಲಸು ಸ್ನೇಹಿ ಕೂಟದ ಪ್ರಕಾಶನ.  ಪುತ್ತೂರಿನ ಜೈನ್ ಭವನದಲ್ಲಿ ಮೇ 24 ರಂದು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ‘ಫಲಪ್ರದ’ವನ್ನು ಅನಾವರಣಗೊಳಿಸುವರು. ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಡಾ.ದಿನಕರ ಅಡಿಗ, ಬಲರಾಮ ಆಚಾರ್ಯ, ಮುಳಿಯ ವೆಂಕಟಕೃಷ್ಣ ಶರ್ಮ ಇವರೆಲ್ಲರ ಶುಭಸೇಸೆಯೊಂದಿಗೆ ‘ಫಲಪ್ರದ’ ಪುಸ್ತಕ ಅನಾವರಣಗೊಳ್ಳಲಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

2 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

4 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

4 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

4 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

4 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

5 hours ago