Advertisement
ಅನುಕ್ರಮ

“ ಉಪವಾಸ” ಎನ್ನುವ ವ್ರತ

Share

ನಾಡಿನಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಹಬ್ಬದ ಪ್ರಯುಕ್ತ ನಾನಾ ಬಗೆಯ ಭಕ್ಷ್ಯಗಳ ಭೂರಿ ಭೋಜನ ಸವಿಯುವವರು ಒಂದೆಡೆಯಾದರೆ, ಕಟ್ಟುನಿಟ್ಟಿನ “ಉಪವಾಸ” ವ್ರತ ಕೈಗೊಳ್ಳುವವರೂ ಅನೇಕರು. ಅದರಲ್ಲೂ ನವರಾತ್ರಿ ಹಬ್ಬದ ಒಂಬತ್ತು ದಿನ ಉಪವಾಸ ಮಾಡುವುದರಿಂದ ದುರ್ಗಾ ಮಾತೆಯ ಅನುಗ್ರಹ ಲಭಿಸುವುದು ಎನ್ನುವ ನಂಬಿಕೆ ಇದೆ.

Advertisement

“ಉಪ” ಎಂದರೆ ಹತ್ತಿರ, “ವಾಸ” ಎಂದರೆ ವಾಸಿಸು. ಅರ್ಥಾಥ್‍ ದೇವರಿಗೆ ಸನಿಹವಾಗುವುದು. ಶುದ್ಧ ಮನಸ್ಸಿನಿಂದ ಉಪವಾಸ ವ್ರತ ಕೈಗೊಳ್ಳುವುದರಿಂದ ಮನಸ್ಸು, ದೇಹ, ಆತ್ಮ ಪರಿಶುದ್ಧವಾಗುತ್ತದೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಪವಾಸಕ್ಕೆ ಮಹತ್ತರವಾದ ಸ್ಥಾನಮಾನವಿದೆ.

ಇದು “ನವರಾತ್ರಿ”ಗೆ ಮಾತ್ರ ಸೀಮಿತವಾಗದೆ ಸುಬ್ರಹ್ಮಣ್ಯ ಷಷ್ಠಿ, ಕಿರುಷಷ್ಠಿ, ಏಕಾದಶಿ, ವಾರದ ಒಂದು ದಿನ ಹೀಗೆ ನಾನಾ ದಿನಗಳಂದು ವ್ರತ ಪಾಲಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಭೂರಿ ಭೋಜನಗಳು ಕಣ್ಣ ಮುಂದೆ ಇದ್ದರೂ ತಿನ್ನದೆ ಇರುವುದರಿಂದ ವ್ಯಕ್ತಿ ತನ್ನ ಆಸೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲನಾಗುತ್ತಾನೆ.

ವಿವಿಧ ಪ್ರಕಾರದ ಉಪವಾಸಗಳು:

* ವಾರದ ಒಂದು ದಿನ ತಮ್ಮತಮ್ಮ ಇಷ್ಟ ದೇವರಿಗಾಗಿ ಮಾಡುವ ಉಪವಾಸ. ಮಂಗಳವಾರ ಹನುಮಂತನಿಗಾಗಿ, ಶನಿವಾರ ಉಪವಾಸ ಮಾಡುವುದು ಶನಿ ದೇವರ ಅನುಗ್ರಹ ಪಡೆಯಲು ಎನ್ನುವ ನಂಬಿಕೆ ಇದೆ.
* ನವರಾತ್ರಿ, ಶಿವರಾತ್ರಿ, ಷಷ್ಠಿ, ಹಬ್ಬಹರಿದಿನಗಳಂತಹ ವಿಶೇಷ ದಿನಗಳಂದು ಮಾಡುವ ಉಪವಾಸ.
* ಧಾರ್ಮಿಕ ಹಾಗು ದೈಹಿಕ ದೃಷ್ಟಿಯಿಂದ ಮಾಡುವ ಉಪವಾಸ. ನಿಗದಿತ ದಿನದಂದು ಉಪ್ಪು, ಸಿಹಿ, ಖಾರ ಇಲ್ಲದ ಆಹಾರ ಸೇವನೆ ಮಾಡುವುದು. ಇದು ಬಿಪಿ ಹಾಗು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ.
* ಕೇವಲ ಫಲಾಹಾರಇಲ್ಲವೇ ದ್ರವಾಹಾರ ಸೇವನೆ ಮಾಡುವುದೂ ಕೂಡಾ ಉಪವಾಸದ ಒಂದು ವಿಧ.

ಪ್ರಯೋಜನಗಳು:

*ಉಪವಾಸ ಇರುವುದರಿಂದ ದೇಹದ ಪಚನಕಾರಿ ಅಂಗಗಳಿಗೆ ವಿಶ್ರಾಂತಿ ಸಿಗುತ್ತದೆ.
*ಮನಸ್ಸು ಹಾಗು ಹೃದಯವನ್ನು ಶುದ್ಧ ಮಾಡುತ್ತದೆ.
*ಉಪವಾಸವಿರುವುದರಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಯುಕ್ತ ವಸ್ತುಗಳನ್ನು ನಾಶಮಾಡುತ್ತದೆ.
*ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಡುತ್ತದೆ.
*ಮನುಷ್ಯನನ್ನು ಮಾನಸಿಕ ಹಾಗು ದೈಹಿಕವಾಗಿ ಬಲಿಷ್ಟಗೊಳಿಸುತ್ತದೆ.

ನೆಂಟರಿಷ್ಟರು, ಗೆಳೆಯರು, ನೆರೆಹೊರೆಯವರು ಉಪವಾಸ ವ್ರತ ಕೈಗೊಳ್ಳುತ್ತಾರೆಂದು ಯಾರೂ ಉಪವಾಸ ಮಾಡಬಾರದು. ಎಲ್ಲರೂ ಅವರವರ ದೇಹ ಸ್ಥಿತಿಗೆ ಅನುಗುಣವಾಗಿ ವ್ರತ ಪಾಲನೆ ಮಾಡಿದರೆ ಒಳ್ಳೆಯದು. 24ಗಂಟೆ ಉಪವಾಸ ಇರಲು ಸಾಧ್ಯವಿಲ್ಲದಿದ್ದರೆ 10ರಿಂದ 12 ಗಂಟೆಗಳ ಕಾಲವಿದ್ದು ನಂತರ ಮಿತವಾಗಿ ಹಣ್ಣು ಹಂಪಲು ಸೇವಿಸಬೇಕು. ಇದರಿಂದ ತಲೆಸುತ್ತುವಿಕೆ, ನಿಶ್ಯಕ್ತಿಯಂತಹ ಸಮಸ್ಯೆ ಬಾಧಿಸದು. ಜೊತೆಗೆ ಉಪವಾಸ ಬಿಡುವಾಗಲೂ ಅಷ್ಟೇ ಹಸಿವಾಗಿದೆ ಎಂದು ಅತಿಯಾಗಿ ತಿನ್ನದೇ ಮಿತ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಅಜೀರ್ಣವಾಗುವ ಸಾಧ್ಯತೆ ಇದೆ.

-ವಂದನಾರವಿ ಕೆ.ವೈ.ವೇಣೂರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…

11 hours ago

ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?

ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…

16 hours ago

ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ

ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…

21 hours ago

ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ

ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…

21 hours ago

ರೈತರಿಗೆ ಗನ್ ಪರವಾನಗಿ : ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಜಾರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ

ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…

21 hours ago

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

1 day ago