MIRROR FOCUS

ಕೃಷಿಯಲ್ಲಿ ಶ್ರಮ ಉಳಿತಾಯ ಮಾಡುವ ಸುಲಭ ಉಪಾಯ | ತಾಂತ್ರಿಕ ಐಡಿಯಾದ ಯುವ ಕೃಷಿಕರೇ ಈಗ ಕೃಷಿಗೆ ಬೇಕಿದೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿಯಲ್ಲಿ ಈಗ ಶ್ರಮ ಉಳಿತಾಯವಾಗಬೇಕು, ಈ ಮೂಲಕ ಕೃಷಿ ಆದಾಯವೂ ಉಳಿತಾಯವಾಗಬೇಕು, ಪ್ರಧಾನಿಗಳು ಹೇಳಿದ ಕೃಷಿ ಆದಾಯದ ದ್ವಿಗುಣದ ದಾರಿಯೂ ಸುಲಭ ಆಗಬೇಕು. ಕೃಷಿಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ತಾಂತ್ರಿಕ ವಿಧಾನಗಳ ಬಳಕೆಯೂ ಇಂದು ಅಗತ್ಯವಾಗಿದೆ. ಇದಕ್ಕೆ ಯುವಕರ ವಿನೂತನ ಟೆಕ್ನಿಕಲ್ ಐಡಿಯಾಗಳೂ ಕಾರಣವಾಗುತ್ತದೆ.ಇಂತಹದ್ದೊಂದು ಐಡಿಯಾವನ್ನು ಯುವಕ ಉಣ್ಣಿಕೃಷ್ಣನ್ ಮಾಡಿದ್ದಾರೆ.‌ ಹಲವು ಕೃಷಿಕರಿಗೆ ಈ ಐಡಿಯಾ ಮೆಚ್ಚುಗೆಯೂ ಆಗಿದೆ.

Advertisement
Advertisement

ಸರಕಾರ ಕೃಷಿ ಉಳಿಸಲು ಇನ್ನಿಲ್ಲದ ಸರಕಾರ ನೀಡುತ್ತಿದೆ. ಬಡ್ಡಿ ರಹಿತ ಸಾಲದಿಂದ ತೊಡಗಿ ಕೃಷಿ ಬೆಳವಣಿಗೆಗೆ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತಿದೆ. ಹಾಗಿದ್ದರೂ ದೇಶದಲ್ಲಿ ಕೃಷಿಯಲ್ಲಿ ಭಾರೀ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಇದ್ದರೂ, ತಾಂತ್ರಿಕ ಐಡಿಯಾ ಹೊಂದಿದ ಹಾಗೂ ಉತ್ಸಾಹದ ಯುವ ಕೃಷಿಕರು ಮಣ್ಣಿನ ಆರಾಧನೆಗೆ ಇಳಿಯದೇ ಇರುವುದೂ ಒಂದು ಕಾರಣ. ಹಾಗಿದ್ದರೂ ಈಗಾಗಲೇ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ಕೆಲವು ಯುವ ಕೃಷಿಕರು ಉನ್ನತ ವ್ಯಾಸಾಂಗ ಮಾಡಿ ಹೊಸ ಹೊಸ ವಿಧಾನದ ಮೂಲಕ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಬೆಳವಣಿಗೆಗೂ ಕಾರಣವಾಗುತ್ತಿದ್ದಾರೆ.

ಇದೀಗ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಣ್ಣಿಕೃಷ್ಣನ್‌ ಎಂಬ ಯುವಕ ಅವರ ಕೃಷಿ ಭೂಮಿಯಲ್ಲಿ  ವಿವಿಧ ರೀತಿಯಲ್ಲಿ  ತಾಂತ್ರಿಕ ವಿಧಾನವನ್ನು  ಅಳವಡಿಸಿಕೊಂಡಿದ್ದಾರೆ. ಅಡಿಕೆ ಹಾಗೂ ರಬ್ಬರ್‌ ಬೆಳೆಯುವ ಇವರು  ರಬ್ಬರ್‌ ಕೃಷಿಯಲ್ಲೂ ತಾಂತ್ರಿಕ ವಿಧಾನ ಬಳಕೆ ಮಾಡಿದರೆ, ಅಡಿಕೆ ಕೃಷಿಯಲ್ಲೂ ತಾಂತ್ರಿಕವಾಗಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಬ್ರೆಶ್‌ ಕಟ್ಟರ್‌ ಮೂಲಕ ಕೆರೆಯಿಂದ ನೀರೆಳೆಯುವ ಪ್ರಯತ್ನ ಮಾಡಿದ್ದಾರೆ. ಒಂದೇ ಯಂತ್ರದ ಮೂಲಕ ವಿವಿಧ ಕೆಲಸಗಳು ಆಗಬೇಕು ಎನ್ನುವ ಯೋಚನೆಯಿಂದ ಪ್ರಯತ್ನ ಮಾಡುತ್ತಿರುವ ಉಣ್ಣಿಕೃಷ್ಣನ್‌, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆಯ ಸಂದರ್ಭ ನೀರು ಅಗತ್ಯವಾಗಿದೆ, ಇದಕ್ಕೆ ಆನ್‌ ಲೈನ್‌ ಮೂಲಕ ಯಂತ್ರವನ್ನು  ಹುಡುಕಿ ಅದನ್ನು ತರಿಸಿ  ಬ್ರೆಶ್‌ ಕಟ್ಟರ್‌ ಗೆ ಅಳವಡಿಕೆ ಮಾಡಿದ್ದಾರೆ. ಈ ಮೂಲಕ ಹೊಸದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ಎರಡು ನಿಮಿಷದ ಒಳಗೆ 200 ಲೀಟರ್‌ ನೀರನ್ನು  ತುಂಬಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಉಣ್ಣಿಕೃಷ್ಣನ್.‌ ಯುವಕರ ಇಂತಹ ವಿನೂತನ ಯೋಚನೆಗಳು ಕೃಷಿಕರಿಂದಲೂ ಬೆಂಬಲ ದೊರೆಯುತ್ತಿರುವುದು  ಆಶಾದಾಯಕ ಬೆಳವಣಿಗೆ.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ.  ಕೊಡಗಿನ…

3 hours ago

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…

3 hours ago

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…

3 hours ago

ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ

ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…

3 hours ago

ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ | ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ

ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…

3 hours ago

ಕೊಪ್ಪಳ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ | ರಸಗೊಬ್ಬರಕ್ಕೆ ಆತಂಕ ಪಡುವ ಅಗತ್ಯವಿಲ್ಲ

ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…

4 hours ago