ರಕ್ಷಾಬಂಧನ ಎನ್ನುವುದು ಪ್ರೀತಿಯ ಸಂಕೇತವೂ ಹೌದು ರಕ್ಷಣೆಯ ಸಂಕೇತವೂ ಹೌದು. ಹಿಂದೆಲ್ಲಾ ಯುದ್ಧಕ್ಕೆ ತೆರಳುವ ವೇಳೆ ರಕ್ಷಣೆ ಹಾಗೂ ಗೆಲುವಿಗಾಗಿ ರಕ್ಷೆ ತೊಟ್ಟು ಮುನ್ನುಗ್ಗಿದ ಬಗ್ಗೆಯೂ ಪುರಾಣಗಳಲ್ಲಿ ತಿಳಿದರೆ, ಈಚೆಗೆ ಪ್ರೀತಿ, ಸ್ನೇಹ, ಸಹೋದರತ್ವದ ಉದ್ದೇಶದಿಂದಲೂ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ರಕ್ಷಾ ಬಂಧನವನ್ನು ರಸ್ತೆ ದುರಸ್ತಿಯ ಜೊತೆಗೆ ಆಚರಿಸಿದರು.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು – ಬೇಂಗತ್ತಮಲೆ- ಚಾಕೊಟೆ ರಸ್ತೆಯನ್ನು ಅಲ್ಲಿನ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಆ ಪ್ರದೇಶದ ಜನರ ಮೂಲಕ ದುರಸ್ತಿ ಮಾಡಲಾಯಿತು. ಅದರ ಜೊತೆಗೆ ರಕ್ಷಾಬಂಧನವನ್ನು ರಸ್ತೆಯಲ್ಲಿಯೇ ಕುಳಿತು ಆಚರಿಸಲಾಯಿತು. ಈ ಮೂಲಕ ರಸ್ತೆಯ ರಕ್ಷಣೆಯೂ ನಮ್ಮ ಜವಾಬ್ದಾರಿ ಎಂಬುದನ್ನು ಈ ಜನರು ಸಾಬೀತು ಮಾಡಿದರು. ಇದು ನಾಡಿನೆಲ್ಲೆಡೆಗೆ ಧನಾತ್ಮಕ ಸಂದೇಶ ಬೀರಿತು.
ಅನೇಕ ಸಮಯಗಳಿಂದ ಈ ಭಾಗದ ಜನರು ಈ ಗ್ರಾಮೀಣ ರಸ್ತೆ ದುರಸ್ತಿಯ ಬೇಡಿಕೆ ಇರಿಸಿದ್ದರು. ಅನುದಾನಗಳ ಕೊರತೆಯಿಂದ ಸಂಪೂರ್ಣ ದುರಸ್ತಿ ಆಗಿರಲಿಲ್ಲ. ಸಣ್ಣಪುಟ್ಟ ಕಾಂಕ್ರೀಟ್ ಕಾಮಗಾರಿಗಳಿಂದಲೇ ತೃಪ್ತಿ ಹೊಂದಬೇಕಾಗಿತ್ತು. ಹೀಗಾಗಿ ತಮ್ಮ ರಸ್ತೆಯ ರಕ್ಷಣೆಯನ್ನು ಗ್ರಾಪಂ ಸಹಕಾರದ ಮೂಲಕ ಈ ಬಾರಿ ಅಲ್ಲಿನ ಜನರೇ ವಹಿಸಿಕೊಂಡರು.
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…