Advertisement
MIRROR FOCUS

ಕೃಷಿಯಲ್ಲಿ ಶ್ರಮ ಉಳಿತಾಯ ಮಾಡುವ ಸುಲಭ ಉಪಾಯ | ತಾಂತ್ರಿಕ ಐಡಿಯಾದ ಯುವ ಕೃಷಿಕರೇ ಈಗ ಕೃಷಿಗೆ ಬೇಕಿದೆ |

Share

ಕೃಷಿಯಲ್ಲಿ ಈಗ ಶ್ರಮ ಉಳಿತಾಯವಾಗಬೇಕು, ಈ ಮೂಲಕ ಕೃಷಿ ಆದಾಯವೂ ಉಳಿತಾಯವಾಗಬೇಕು, ಪ್ರಧಾನಿಗಳು ಹೇಳಿದ ಕೃಷಿ ಆದಾಯದ ದ್ವಿಗುಣದ ದಾರಿಯೂ ಸುಲಭ ಆಗಬೇಕು. ಕೃಷಿಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ತಾಂತ್ರಿಕ ವಿಧಾನಗಳ ಬಳಕೆಯೂ ಇಂದು ಅಗತ್ಯವಾಗಿದೆ. ಇದಕ್ಕೆ ಯುವಕರ ವಿನೂತನ ಟೆಕ್ನಿಕಲ್ ಐಡಿಯಾಗಳೂ ಕಾರಣವಾಗುತ್ತದೆ.ಇಂತಹದ್ದೊಂದು ಐಡಿಯಾವನ್ನು ಯುವಕ ಉಣ್ಣಿಕೃಷ್ಣನ್ ಮಾಡಿದ್ದಾರೆ.‌ ಹಲವು ಕೃಷಿಕರಿಗೆ ಈ ಐಡಿಯಾ ಮೆಚ್ಚುಗೆಯೂ ಆಗಿದೆ.

ಸರಕಾರ ಕೃಷಿ ಉಳಿಸಲು ಇನ್ನಿಲ್ಲದ ಸರಕಾರ ನೀಡುತ್ತಿದೆ. ಬಡ್ಡಿ ರಹಿತ ಸಾಲದಿಂದ ತೊಡಗಿ ಕೃಷಿ ಬೆಳವಣಿಗೆಗೆ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತಿದೆ. ಹಾಗಿದ್ದರೂ ದೇಶದಲ್ಲಿ ಕೃಷಿಯಲ್ಲಿ ಭಾರೀ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಇದ್ದರೂ, ತಾಂತ್ರಿಕ ಐಡಿಯಾ ಹೊಂದಿದ ಹಾಗೂ ಉತ್ಸಾಹದ ಯುವ ಕೃಷಿಕರು ಮಣ್ಣಿನ ಆರಾಧನೆಗೆ ಇಳಿಯದೇ ಇರುವುದೂ ಒಂದು ಕಾರಣ. ಹಾಗಿದ್ದರೂ ಈಗಾಗಲೇ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ಕೆಲವು ಯುವ ಕೃಷಿಕರು ಉನ್ನತ ವ್ಯಾಸಾಂಗ ಮಾಡಿ ಹೊಸ ಹೊಸ ವಿಧಾನದ ಮೂಲಕ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಬೆಳವಣಿಗೆಗೂ ಕಾರಣವಾಗುತ್ತಿದ್ದಾರೆ.

ಇದೀಗ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಣ್ಣಿಕೃಷ್ಣನ್‌ ಎಂಬ ಯುವಕ ಅವರ ಕೃಷಿ ಭೂಮಿಯಲ್ಲಿ  ವಿವಿಧ ರೀತಿಯಲ್ಲಿ  ತಾಂತ್ರಿಕ ವಿಧಾನವನ್ನು  ಅಳವಡಿಸಿಕೊಂಡಿದ್ದಾರೆ. ಅಡಿಕೆ ಹಾಗೂ ರಬ್ಬರ್‌ ಬೆಳೆಯುವ ಇವರು  ರಬ್ಬರ್‌ ಕೃಷಿಯಲ್ಲೂ ತಾಂತ್ರಿಕ ವಿಧಾನ ಬಳಕೆ ಮಾಡಿದರೆ, ಅಡಿಕೆ ಕೃಷಿಯಲ್ಲೂ ತಾಂತ್ರಿಕವಾಗಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಬ್ರೆಶ್‌ ಕಟ್ಟರ್‌ ಮೂಲಕ ಕೆರೆಯಿಂದ ನೀರೆಳೆಯುವ ಪ್ರಯತ್ನ ಮಾಡಿದ್ದಾರೆ. ಒಂದೇ ಯಂತ್ರದ ಮೂಲಕ ವಿವಿಧ ಕೆಲಸಗಳು ಆಗಬೇಕು ಎನ್ನುವ ಯೋಚನೆಯಿಂದ ಪ್ರಯತ್ನ ಮಾಡುತ್ತಿರುವ ಉಣ್ಣಿಕೃಷ್ಣನ್‌, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆಯ ಸಂದರ್ಭ ನೀರು ಅಗತ್ಯವಾಗಿದೆ, ಇದಕ್ಕೆ ಆನ್‌ ಲೈನ್‌ ಮೂಲಕ ಯಂತ್ರವನ್ನು  ಹುಡುಕಿ ಅದನ್ನು ತರಿಸಿ  ಬ್ರೆಶ್‌ ಕಟ್ಟರ್‌ ಗೆ ಅಳವಡಿಕೆ ಮಾಡಿದ್ದಾರೆ. ಈ ಮೂಲಕ ಹೊಸದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ಎರಡು ನಿಮಿಷದ ಒಳಗೆ 200 ಲೀಟರ್‌ ನೀರನ್ನು  ತುಂಬಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಉಣ್ಣಿಕೃಷ್ಣನ್.‌ ಯುವಕರ ಇಂತಹ ವಿನೂತನ ಯೋಚನೆಗಳು ಕೃಷಿಕರಿಂದಲೂ ಬೆಂಬಲ ದೊರೆಯುತ್ತಿರುವುದು  ಆಶಾದಾಯಕ ಬೆಳವಣಿಗೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

3 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

12 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

12 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

14 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

17 hours ago