ನಮ್ಮ ದೇಶದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ. ಬಡವರಿಗೊಂದು ನ್ಯಾಯ. ಇದು ಅನೇಕ ಸಂದರ್ಭಗಳಲ್ಲಿ ನಮ್ಮ ಕಣ್ಣ ಮುಂದೆಯೇ ಸಾಬೀತಾಗಿದೆ ಕೂಡ. ಅದರಲ್ಲೂ ಪರಿಸರ ವಿಚಾರಕ್ಕೆ ಬಂದರೆ ಬಡವ ತನ್ನ ಮನೆ, ಅಥವಾ ಕಟ್ಟಿಗಾಗಿ ಒಂದು ಮರ ಕಡಿದರೆ ಕೇಸ್ ಬಿದ್ದಾಯ್ತು. ಅದೇ ಶ್ರೀ ಮಂತರು ಇಡೀ ಅರಣ್ಯವನ್ನೇ ನುಂಗಿ ನೀರು ಕುಡಿದರು ಅವರ ಮೇಲೆ ಯಾವ ಕೇಸ್ ಇಲ್ಲಾ, ಕಾನೂನು ಇಲ್ಲ…!. ಆದರೆ ಇಲ್ಲಿ ಹಾಗಲ್ಲ ಬರೋಬ್ಬರಿ ದಂಡ ವಿಧಿಸಿ ಸುದ್ದಿಯಾಗಿದೆ ಈ ದೇಶ.
ಉದ್ಯಮ ವಿಸ್ತರಣೆ, ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡಗಳು, ಹೋಮ್ ಸ್ಟೇಗಳು ಹೀಗೆ ನಮ್ಮ ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಕಾರಣಗಳು ಸಾವಿರಾರು. ಆದರೆ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇರೋದಿಲ್ಲ. ಅಷ್ಟೆ ಯಾಕೆ ಮುಂದಿನ ಪೀಳಿಗೆ ಉಳಿಯಬೇಕಂದ್ರೆ ನಮ್ಮ ಪಶ್ಚಿಮ ಘಟ್ಟ ಅತ್ಯಗತ್ಯ. ಅಂತ ಪಶ್ಚಿಮ ಘಟ್ಟವನ್ನೇ ನಾಶ ಮಾಡಿ ತಮ್ಮ ಸ್ವಇಚ್ಛೆ ಮೆರೆಯುತ್ತಿದ್ದಾರೆ. ಆದರೆ ಇದಕ್ಕೆ ಹೊಣೆ ಯಾರು ಇಲ್ಲ.
ಆದರೆ ವಿದೇಶಗಳ ಕಾನೂನು ಹಾಗಿಲ್ಲ. ಅವನು ಯಾರೇ ಆಗಿರಲಿ ಪರಿಸರ ನಾಶಕ್ಕೆ ತಕ್ಕ ಶಾಸ್ತಿ ಅನುಭವಿಸಲೇ ಬೇಕು. ಇಲ್ನೋಡಿ ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್ಬಾಲ್ ತಾರೆ #Brazilian football star ನೇಮರ್ಗೆ #Neymar ಗೆ ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ.
ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್ ದೂರಿನಲ್ಲಿ ತಿಳಿಸಿದೆ. ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್ ಮೇಲೆ ಹೊರಿಸಲಾಗಿದೆ. ಬ್ರೆಜಿಲ್ ಫುಟ್ಬಾಲ್ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.
ನಮ್ಮ ದೇಶದಲ್ಲಿ ಇಂಥ ಕೇಸ್ ಹಾಕಿ ಎಲ್ಲಿಯಾದರೂ ಯಾರನ್ನಾದರೂ ದಂಡಿಸಿದ್ದು ಕೇಳಿದ್ದು ಇದೆಯಾ..? ನಮ್ಮ ದೇಶದಲ್ಲೂ ಇಂತಹ ಕಾನೂನು ಬಂದರೆ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಲು ಸಾಧ್ಯ.
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…