Advertisement
MIRROR FOCUS

2014 ರಲ್ಲಿ ಬಾಲಕನ ಸಂಶೋಧನೆ – ಈಗ ವಿಜ್ಞಾನಿಗಳ ಸಂಶೋಧನೆಯೂ ಹೌದು…! |

Share

ಗಿಡಿಗಳಿಗೆ ನೀರುಣಿಸಲು ಬತ್ತಿಯ ಮಾದರಿಯ ತಂತ್ರಜ್ಞಾನವನ್ನು ಪರಿಚಯ ಮಾಡಿರುವ ಬಾಲಕ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ವಿಸ್ಮಯ ದೇವಸ್ಯ. ಅದು 2014  ರಲ್ಲಿ. ಈ ಪ್ರಾಜೆಕ್ಟ್‌ ಗೆ ಅಂದು ಚಿನ್ನದ ಪದಕವೂ ಲಭ್ಯವಾಗಿತ್ತು. ಇದೀಗ ಅದೇ ಮಾದರಿಯ ನೀರುಣಿಸುವ ತಂತ್ರಜ್ಞಾನವನ್ನು ಪರಿಚಯ ಮಾಡಿದ್ದಾರೆ ಐ ಐ ಎಚ್‌ ಆರ್‌ ನ ವಿಜ್ಞಾನಿ. ..!

ಲೋಮನಾಳ ಹೀರಿಕೆ ಅಥವಾ ಬತ್ತಿ ಎಣ್ಣೆ ಬೆಳಗಿದಂತೆ ಗಿಡಗಳು ನೀರನ್ನು ಹೀರುವ ಮಾದರಿಯನ್ನು ವಿಸ್ಮಯ ದೇವಸ್ಯ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ  2013-14  ವಿದ್ಯಾರ್ಥಿಯಾಗಿದ್ದ ಈ ಬಾಲಕ ಮಾಡಿರುವ ಈ ಮಾದರಿಗೆ ಅಂದು ಚಿನ್ನದ ಪದಕ ಲಭ್ಯವಾಗಿತ್ತು. ಸೈನ್ಸ್‌ ಸೊಸೈಟಿ ಆಫ್‌ ಇಂಡಿಯಾ ಆಯೋಜಿಸಿದ ಈ ಮೇಳದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ  ಲಕ್ಷ್ಮಣ ದೇವಸ್ಯ ಅವರ ಪುತ್ರ ಬಾಲಕ ವಿಸ್ಮಯ ದೇವಸ್ಯ ಮಾಡಿರುವ ಈ ಪ್ರಾಜೆಕ್ಟ್‌ ಅಂದು ಗಮನ ಸೆಳೆದಿತ್ತು.

 

ಇದೀಗ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೇ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಮಾಹಿತಿ ನೀಡಿದೆ. ತಕ್ಷಣವೇ ಈ ಬಗ್ಗೆ ಗಮನ ಸೆಳೆದ ಬಾಲಕ ವಿಸ್ಮಯ ದೇವಸ್ಯ ಅವರ ಹೆತ್ತವರು ” ಈ ಮಾದರಿಯನ್ನು ವಿಸ್ಮಯ ದೇವಸ್ಯ ಈ ಹಿಂದೆಯೇ ಮಾಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ಮಾಡುವ ಬಹುತೇಕ ಪ್ರಾಜೆಕ್ಟ್‌ ಗಳು ಕೃಷಿಕರಿಗೆ ಅನುಕೂಲವಾಗುವಂತೆ ಇರುತ್ತದೆ. ಆದರೆ ಅದನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಅಥವಾ ಹಾಗೆಯೇ ಅನುಷ್ಟಾನ ಮಾಡುವ ವೇಳೆ ವಿದ್ಯಾರ್ಥಿಗಳ ಕಾರ್ಯವನ್ನೂ, ಕೆಲಸವನ್ನೂ ಉಲ್ಲೇಖ ಮಾಡದೆಯೇ ಅನ್ಯಾಯ ಮಾಡಬಾರದು. ವಿದ್ಯಾರ್ಥಿಗಳ ಸಾಧನೆ ಅಪಾರ ಇರುತ್ತದೆ. ಅದರ ಹಿಂದೆ ಅಪಾರ ಶ್ರಮ ಇರುತ್ತದೆ. ವಿಜ್ಞಾನಿಗಳು ಯಾವುದೇ ಸಂಶೋಧನೆ ಮಾಡುವ ಮುನ್ನ ವಿವಿದೆಡೆ ಇಂತಹ ಪ್ರಾಜೆಕ್ಟ್‌ ಅಥವಾ ಮಾದರಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾದ್ದು ಮೂಲಭೂತವಾದ ವಿಷಯವಾಗಿದೆ. ಈ ಪ್ರಾಜೆಕ್ಟ್‌ ಗೂಗಲ್‌ ಮೂಲಕ ಲಭ್ಯವಾಗುವ ಕಾರಣದಿಂದ ವಿದ್ಯಾರ್ಥಿಯ ಹೆಸರನ್ನು ಉಲ್ಲೇಖ ಮಾಡಬೇಕಿತ್ತು ಮಾತ್ರವಲ್ಲ ವಿಜ್ಞಾನಿಗಳು ಈ ಮಾದರಿಯ ಕೆಲಸ ಮಾಡಬಾರದು ಎಂದು ಬಾಲಕ ವಿಸ್ಮಯನ ಪೋಷಕರು ಹೇಳುತ್ತಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

15 hours ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

18 hours ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

21 hours ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

2 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago