Advertisement
MIRROR FOCUS

2014 ರಲ್ಲಿ ಬಾಲಕನ ಸಂಶೋಧನೆ – ಈಗ ವಿಜ್ಞಾನಿಗಳ ಸಂಶೋಧನೆಯೂ ಹೌದು…! |

Share

ಗಿಡಿಗಳಿಗೆ ನೀರುಣಿಸಲು ಬತ್ತಿಯ ಮಾದರಿಯ ತಂತ್ರಜ್ಞಾನವನ್ನು ಪರಿಚಯ ಮಾಡಿರುವ ಬಾಲಕ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ವಿಸ್ಮಯ ದೇವಸ್ಯ. ಅದು 2014  ರಲ್ಲಿ. ಈ ಪ್ರಾಜೆಕ್ಟ್‌ ಗೆ ಅಂದು ಚಿನ್ನದ ಪದಕವೂ ಲಭ್ಯವಾಗಿತ್ತು. ಇದೀಗ ಅದೇ ಮಾದರಿಯ ನೀರುಣಿಸುವ ತಂತ್ರಜ್ಞಾನವನ್ನು ಪರಿಚಯ ಮಾಡಿದ್ದಾರೆ ಐ ಐ ಎಚ್‌ ಆರ್‌ ನ ವಿಜ್ಞಾನಿ. ..!

Advertisement
Advertisement
Advertisement
Advertisement

ಲೋಮನಾಳ ಹೀರಿಕೆ ಅಥವಾ ಬತ್ತಿ ಎಣ್ಣೆ ಬೆಳಗಿದಂತೆ ಗಿಡಗಳು ನೀರನ್ನು ಹೀರುವ ಮಾದರಿಯನ್ನು ವಿಸ್ಮಯ ದೇವಸ್ಯ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ  2013-14  ವಿದ್ಯಾರ್ಥಿಯಾಗಿದ್ದ ಈ ಬಾಲಕ ಮಾಡಿರುವ ಈ ಮಾದರಿಗೆ ಅಂದು ಚಿನ್ನದ ಪದಕ ಲಭ್ಯವಾಗಿತ್ತು. ಸೈನ್ಸ್‌ ಸೊಸೈಟಿ ಆಫ್‌ ಇಂಡಿಯಾ ಆಯೋಜಿಸಿದ ಈ ಮೇಳದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ  ಲಕ್ಷ್ಮಣ ದೇವಸ್ಯ ಅವರ ಪುತ್ರ ಬಾಲಕ ವಿಸ್ಮಯ ದೇವಸ್ಯ ಮಾಡಿರುವ ಈ ಪ್ರಾಜೆಕ್ಟ್‌ ಅಂದು ಗಮನ ಸೆಳೆದಿತ್ತು.

Advertisement

 

Advertisement

ಇದೀಗ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೇ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಮಾಹಿತಿ ನೀಡಿದೆ. ತಕ್ಷಣವೇ ಈ ಬಗ್ಗೆ ಗಮನ ಸೆಳೆದ ಬಾಲಕ ವಿಸ್ಮಯ ದೇವಸ್ಯ ಅವರ ಹೆತ್ತವರು ” ಈ ಮಾದರಿಯನ್ನು ವಿಸ್ಮಯ ದೇವಸ್ಯ ಈ ಹಿಂದೆಯೇ ಮಾಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.

Advertisement

ವಿದ್ಯಾರ್ಥಿಗಳು ಮಾಡುವ ಬಹುತೇಕ ಪ್ರಾಜೆಕ್ಟ್‌ ಗಳು ಕೃಷಿಕರಿಗೆ ಅನುಕೂಲವಾಗುವಂತೆ ಇರುತ್ತದೆ. ಆದರೆ ಅದನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಅಥವಾ ಹಾಗೆಯೇ ಅನುಷ್ಟಾನ ಮಾಡುವ ವೇಳೆ ವಿದ್ಯಾರ್ಥಿಗಳ ಕಾರ್ಯವನ್ನೂ, ಕೆಲಸವನ್ನೂ ಉಲ್ಲೇಖ ಮಾಡದೆಯೇ ಅನ್ಯಾಯ ಮಾಡಬಾರದು. ವಿದ್ಯಾರ್ಥಿಗಳ ಸಾಧನೆ ಅಪಾರ ಇರುತ್ತದೆ. ಅದರ ಹಿಂದೆ ಅಪಾರ ಶ್ರಮ ಇರುತ್ತದೆ. ವಿಜ್ಞಾನಿಗಳು ಯಾವುದೇ ಸಂಶೋಧನೆ ಮಾಡುವ ಮುನ್ನ ವಿವಿದೆಡೆ ಇಂತಹ ಪ್ರಾಜೆಕ್ಟ್‌ ಅಥವಾ ಮಾದರಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾದ್ದು ಮೂಲಭೂತವಾದ ವಿಷಯವಾಗಿದೆ. ಈ ಪ್ರಾಜೆಕ್ಟ್‌ ಗೂಗಲ್‌ ಮೂಲಕ ಲಭ್ಯವಾಗುವ ಕಾರಣದಿಂದ ವಿದ್ಯಾರ್ಥಿಯ ಹೆಸರನ್ನು ಉಲ್ಲೇಖ ಮಾಡಬೇಕಿತ್ತು ಮಾತ್ರವಲ್ಲ ವಿಜ್ಞಾನಿಗಳು ಈ ಮಾದರಿಯ ಕೆಲಸ ಮಾಡಬಾರದು ಎಂದು ಬಾಲಕ ವಿಸ್ಮಯನ ಪೋಷಕರು ಹೇಳುತ್ತಾರೆ.

 

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…

ಮಹಾಕುಂಭ ಮೇಳದ ಮೂಲಕ ಹೊಸದೊಂದು ಸಂಕಲ್ಪವನ್ನು ಜನರು ಮಾಡಬೇಕು. ಈ ಬಾರಿ ಕುಂಭಮೇಳದಲ್ಲಿ…

7 hours ago

ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ | ಸರ್ವೇ ಪ್ರಕಾರ ಜಿಡಿಪಿ ದರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ.16 |

ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಠಿಸಲು ಹಾಗೂ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು…

9 hours ago

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ…

9 hours ago

ಮಹಾಕುಂಭಮೇಳ ಸಂಪನ್ನ | ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಶಿವರಾತ್ರಿಯಂದು(ಇಂದು) ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ…

9 hours ago

ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ

ಶಿವಮೊಗ್ಗ ಜಿಲ್ಲೆಯ ಸಾಗರದ  ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ  ವಿವಿಧೋದ್ದೇಶ…

9 hours ago

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

17 hours ago