Advertisement
ಅಂಕಣ

ಮನಸ್ಸಿನ ಕನ್ನಡಿಯಲ್ಲಿ ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ…| ಬಂದ್ ಗಳಿಗಿಂತಲೂ ಜನಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ |

Share

ನನ್ನ ಬೆಂಬಲ ಇವರುಗಳಿಗಾಗಿ………ನೀವೂ ಸಹ ಒಮ್ಮೆ ಯೋಚಿಸಿ…..

Advertisement
Advertisement

ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ………

Advertisement
ಅದಕ್ಕಾಗಿಯೇ…….

ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ,
ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ,
ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ………

Advertisement

ಜೈಕಾರಗಳನ್ನೂ ಬೆಂಬಲಿಸುವುದಿಲ್ಲ,
ಧಿಕ್ಕಾರಗಳನ್ನೂ ಬೆಂಬಲಿಸುವುದಿಲ್ಲ,
ಬಲಪಂಥವನ್ನೂ ಬೆಂಬಲಿಸುವುದಿಲ್ಲ,
ಎಡಪಂಥವನ್ನೂ ಬೆಂಬಲಿಸುವುದಿಲ್ಲ,

ಇವುಗಳನ್ನು ಉಳಿಸಲು ಕೋಟ್ಯಾನುಕೋಟಿ ಹೋರಾಟಗಾರರಿದ್ದಾರೆ…………

Advertisement

ಯಾವ ಧರ್ಮವನ್ನೂ ಬೆಂಬಲಿಸುವುದಿಲ್ಲ,
ಯಾವ ದೇವರನ್ನೂ ಬೆಂಬಲಿಸುವುದಿಲ್ಲ,
ಯಾವ ಗ್ರಂಥವನ್ನೂ ಬೆಂಬಲಿಸುವುದಿಲ್ಲ,
ಯಾವ ಸಿದ್ಧಾಂತವನ್ನೂ ಬೆಂಬಲಿಸುವುದಿಲ್ಲ
ಇವುಗಳನ್ನು ರಕ್ಷಿಸಲೂ ಕೋಟ್ಯಾನುಕೋಟಿ ಭಕ್ತರಿದ್ದಾರೆ.

ಆದರೆ ನನ್ನ ಬೆಂಬಲ,…….

Advertisement

ಅಗೋ ಅಲ್ಲಿ ನೋಡಿ ನನ್ನ ಪುಟ್ಟ ಕಂದ ಸಮೋಸ ತಿನ್ನಲು ಕಾಸಿಲ್ಲದೆ ಬಾಯಲ್ಲಿ ಜೊಲ್ಲು ಸುರಿಸುತ್ತಾ ಆಸೆ ಕಣ್ಣುಗಳಿಂದ ನೋಡುತ್ತಾ ಬೇಕರಿಯ ಮುಂದೆ ನಿಂತಿದೆ. ಅದರ ಆಸೆ ಪೂರೈಸುವವರಿಗೆ ನನ್ನ ಬೆಂಬಲ……

ಚಳಿಗೆ ಮುದುಡಿ ಬೀದಿಯಲ್ಲಿ ಮಲಗಿದ ನನ್ನ ತಾತನಿಗೆ ಕಂಬಳಿ ಹೊದಿಸಿ ಬಿಸಿ ಕಾಫಿ ಕುಡಿಸುವವರಿಗೆ ನನ್ನ ಬೆಂಬಲ…….

Advertisement

ಹಳೆಯ ನೋಟಾದರೂ ಸಿಗಲಿ ಎಂದು ತನ್ನ ದೇಹ ಮಾರಿ ಕೆನ್ನೆ ಕಚ್ಚಿಸಿಕೊಂಡು ರಕ್ತ ಒರೆಸಿಕೊಳ್ಳುತ್ತಿರುವ ನನ್ನ ತಂಗಿಗೆ ಬಾಳು ಕೊಡುವವರಿಗೆ ನನ್ನ ಬೆಂಬಲ…….

ಹತ್ತು ವರ್ಷಗಳಿಂದಲೂ ಕೊನೆಗಾಲಕ್ಕೆ ಇರಲೆಂದು ಕೂಡಿಟ್ಟಿದ್ದ ನೂರರ 50 ನೋಟಿಡಿದು ಇನ್ನು ನನ್ನ ಅಂತ್ಯ ಸಮೀಪಿಸಿತು ಹಣವಿಲ್ಲದ ನಾನು ಹೆಣಕ್ಕೆ ಸಮಾನ ಎಂದು ಸಾವಿನ ನಿರೀಕ್ಷೆಯಲ್ಲಿ ಚಿಂತಾಕ್ರಾಂತಳಾದ ನನ್ನ ಅಜ್ಜಿಗೆ ಧೈರ್ಯ ಹೇಳಿ ನಾನಿದ್ದೇನೆಂದು ತಬ್ಬಿ ಸಮಾಧಾನ ಮಾಡುವವರಿಗೆ ನನ್ನ ಬೆಂಬಲ…..

Advertisement

ರೇಪ್ ಮಾಡಿದವನನ್ನು ಕತ್ತರಿಸುವವರಿಗಿಂತ ಅತ್ಯಾಚಾರಕ್ಕೆ ಒಳಗಾದ ನನ್ನ ಅಕ್ಕನ ನೋವಿಗೆ ಸ್ಪಂದಿಸಿ ಆಕೆಯ ಜೀವನಕ್ಕೆ ಆಧಾರವಾಗುವ ಮನಸುಗಳಿಗೆ ನನ್ನ ಬೆಂಬಲ……

ಅಕ್ಷರಗಳಲ್ಲಿ ಮಹಲುಗಳನ್ನು ಕಟ್ಟಿ, ಭಾವನೆಗಳಲ್ಲಿ ತೇಲಿ ಮೇರಾ ಭಾರತ್ ಮಹಾನ್ ಎನ್ನುವವರಿಗಿಂತ ತನ್ನ ಜೊತೆಗಾರರ ಸ್ನೇಹಿತರ ಕಷ್ಟಗಳಿಗೆ ಹೆಗಲಾಗುವ, ಅವರಿಗೆ ನಾವಿದ್ದೇವೆ ಎಂದು ಆತ್ಮವಿಶ್ವಾಸ ತುಂಬುವ ಮನುಜರಿಗೆ ನನ್ನ ಬೆಂಬಲ……

Advertisement

ಯಾವ ಕಾನೂನು ಬಂದರೂ ಅದರೊಳಗೆ ನುಸುಳಿ ತಮಗೆ ಅನುಕೂಲವಾಗುವಂತೆ ಅರ್ಥೈಸಿ ಈಗಾಗಲೇ ಇರುವ ಹಿಡಿತದಿಂದ ಅದರ ಮೇಲೆ ಸವಾರಿ ಮಾಡಿ ಬೇರೆ ರೀತಿ ಅದೇ ದಂಧೆಗೆ ಇಳಿಯುವವರಿಗಿಂತ,
ಆ ಕಾನೂನಿನಿಂದ ಬದುಕು ಕಳೆದುಕೊಳ್ಳುವವರಿಗೆ ಆಶ್ರಯವಾಗುವ ಆತ್ಮಗಳಿಗೆ ನನ್ನ ಬೆಂಬಲ…….

ಏಕೆಂದರೆ,
ಫಲಿತಾಂಶ ಮತ್ತು ಜನಪ್ರಿಯತೆಯ ಬಾಲದ ಹಿಂದೆ ಓಡಲು ನಾನು ಕುದುರೆ ವ್ಯಾಪಾರಿಯಲ್ಲ. ಬದುಕಿನ ಅರ್ಥ ಹುಡುಕ ಹೊರಟ ಜೀವಕೋಶಗಳ ರಾಶಿ…..

Advertisement

ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ನೋಡುವವರೆಗೂ ಪ್ರತಿ ಕ್ಷಣವೂ ಆಕ್ರೋಶದ ಕ್ಷಣವೇ……..

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

17 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

17 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

18 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

18 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

18 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

18 hours ago