Opinion

ಬಾಳೆ ಕೊನೆ ದಿಂಡಿನ ಉಪ್ಪಿನಕಾಯಿ ಬೇಕಾ? | ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಸಹವಾಸ ಬೇಡ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಿನ್ನೆಯಿಂದ ವಾಟ್ಸಾಪ್(Whats app) ಗುಂಪಿನಲ್ಲಿ ಉಡುಪಿಯಲ್ಲಿ(Udupi) ಬಾಳೆ ಕೊನೆ ದಿಂಡನ್ನ(Banana stem) ಹೆಚ್ಚಿ ಉಪ್ಪಿನಕಾಯಿ(Pickle) ಮಾಡುವ ಈ ವೀಡಿಯೋ ವೈರಲ್‌(Video Viral) ಆಗ್ತಿದೆ. ಏನೋ ಶಾಸ್ತ್ರಕ್ಕೆ ತಯಾರಿಸುತ್ತರಾದರೆ ಖಂಡಿತವಾಗಿಯೂ ತಯಾರಿಸಲಿ, ಪರವಾಗಿಲ್ಲ. ಅಲ್ಲಿ ಬಾಳೆಯ ಎಲ್ಲಾ ಭಾಗವನ್ನೂ ಬಳಸಿ ಖಾದ್ಯ(Food) ತಯಾರಿಸುವ ಶಾಸ್ತ್ರ ಸಂಪ್ರದಾಯ ಇರಬಹುದು. ಅವರು ಮಾಡಿಕೊಳ್ಳಲಿ ಬಿಡಿ.. ಬಂಧುಗಳೇ…
ದಯವಿಟ್ಟು ನೀವು ಪಟ್ಟಣದ(City) ಅಂಗಡಿಯಲ್ಲಿ ಹಣ್ಣಾದ ಬಾಳೆ ಕೊನೆ ತಂದು ಹಣ್ಣು ತೆಗದು ಬಾಳೆಗೊನೆ ದಿಂಡ್ ಹೆಚ್ಚಿ ಉಪ್ಪಿನಕಾಯಿ ಮಾಡೋ ಸಾಹಸ ಬೇಡ..

Advertisement

ನೀವು ಇತ್ತೀಚಿನ ವರ್ಷಗಳಲ್ಲಿ “ಅಂಗಡಿ ಬಾಳೆಗೊನೆಯ” ಬಾಳೆ ಹಣ್ಣಿ‌ನ ಸಿಹಿ‌ ರುಚಿ ಗಮನಿಸಿದ್ದೀರ…? ದೊಡ್ಡ ದೊಡ್ಡ ಪಚ್ಚ ಬಾಳೆ ಹಣ್ಣು ಚಪ್ಪೆ ಚಪ್ಪೆ.. ಪುಟ್ಟ ಬಾಳೆ ಕರಬಾಳೆ ಹಣ್ಣು ಕೂಡ ಎಷ್ಟೇ ಮಾಗಿದರೂ ಚಪ್ಪೆ…!! ಏಕೆ ಬಾಳೆ ಹಣ್ಣು ರುಚಿ ಪರಿಮಳ ಇರೋಲ್ಲ…? ನಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ನಮ್ಮ ಸ್ವಂತ ತೋಟದಲ್ಲಿ “ಮಂಗನ ಕಾಟ ಪೂರ್ವ” (ಮಂ ಕಾ ಪೂ)ದಲ್ಲಿ ಸಾವಯವ ಮದ್ಯಮದಲ್ಲಿ ಬೆಳೆದು ಸ್ವಾಭಾವಿಕವಾಗಿ ಹಣ್ಣು ಮಾಡಿ ತಿಂದ ಬಾಳೆ ಹಣ್ಣಿನ‌ ಸ್ವಾದ ರುಚಿ ಪರಿಮಳ ಈ ಅಂಗಡಿಯಲ್ಲಿ ನೇತಾಕಿದ ಬಾಳೆ ಹಣ್ಣಿನಲ್ಲಿ ಇರೋಲ್ಲ…!! ನೀವು ಜ್ಞಾಪಿಸಿ ಹೋಲಿಸಿ ಕೊಂಡು ನೋಡಿ.. ಏಕೆಂದರೆ ಬಹುತೇಕ ಬಾಳೆ ಬೆಳೆ ಕೃಷಿಕರು ಬಾಳೆ ಬೆಳೆಯನ್ನು ಸಾವಯವ ಮಾದರಿಯಲ್ಲಿ ಬೆಳೆಯೋಲ್ಲ ಮತ್ತು ಬಾಳೆ ಗೊನೆ ಮಂಡಿಯವರು ಬಾಳೆ ಕೊನೆಯನ್ನ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ.. ಈಗ ಬಾಳೆ ಕೊನೆಯ ಬಾಳೆ ಹಣ್ಣಿನ ಸಿಪ್ಪೆ ಮತ್ತು ಬಾಳೆ ಕೊನೆಯ ದಿಂಡು ಎಲ್ಲವೂ ವಿಷ ಪೂರಿತ…!!

ಒಬ್ಬ ದೊಡ್ಡ ಜ್ಯೋತಿಷ್ಯರ ಕಾರ್ಖಾನೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ‌‌ ಕಾಯಿ ಬಾಳೆಗೊನೆಯನ್ನ ತಂದು ಅದನ್ನು ಇನ್ನೂರು ಲೀಟರ್ ನೀರನ ಡ್ರಂನಲ್ಲಿ ಅತ್ಯಂತ ಅಪಾಯಕಾರಿ ಕಳೆ ನಾಶಕ ರೌಂಡ್‌ ಅಪ್ ವಿಷವನ್ನು ಅದಕ್ಕೆ ಹಾಕಿ ಕದಡಿ ಅದರಲ್ಲಿ ಕಾಯಿ ಬಾಳೆ ಗೊನೆಯನ್ನ ನೆನಸಿ ಆ ಮೂಲಕ ಬಾಳೆಗೊನೆ ಹಣ್ಣು ಮಾಡಿ‌ ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸಲಾ ಗಿತ್ತು. ಇದು ವಾಸ್ತವವಾಗಿ ನೆಡೆದ ಘಟನೆ. ಈ ವಿಚಾರ ತಿಳಿದ ನಂತರದಿಂದ ನಾನು ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣಾದು ಇದ್ದರೆ ಮಾತ್ರ ಹಣ್ಣು ತಿಂಥೇನೆ ಮತ್ತು ಸಿಪ್ಪೆ/ಹಣ್ಣನ್ನು ಜಾನುವಾರುಗಳಿಗೆ ಹಾಕುತ್ತೇವೆ.

ಬಂಧುಗಳೇ…,
ಬಾಳೆಗೊನೆ ಬೆಳೆಯಲಾಗದ ಆಸ್ತಿಕರು ಹಬ್ಬಕ್ಕಾಗಿ ಬಾಳೆ ಹಣ್ಣು ಬೇಕಂತಾದರೆ ನಿಮ್ಮ ನಂಬಿಕಸ್ಥ ಅಂಗಡಿಯಲ್ಲಿ ಬಾಳೆ ಹಣ್ಣು ತನ್ನಿ ಇಲ್ಲವಾದಲ್ಲಿ ಹಬ್ಬದ ಕೆಲವು ದಿನಗಳ ಮೊದಲು ಕಾಯಿ ಬಾಳೆಗೊನೆ ತಂದು ಮನೆಯಲ್ಲೇ ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣು ಮಾಡಿ ದೇವರಿಗೆ ಬಳಸಿ ನೀವೂ ತಿನ್ನಿ… ಹೀಗೆ ನಮಗೆ ಸಿಗುವ ಹಣ್ಣು ತರಕಾರಿಗಳ ಸಿಪ್ಪೆ ಯನ್ನು ಉಪ್ಪಿನಕಾಯಿ ಮಾಡುವುದೋ ಪಲ್ಯ ಮಾಡುವುದೋ ಮಾಡುವುದರ ಮೊದಲು ಈ ಕಲಿ‌ಯುಗ ಕಾಲದ ದುಷ್ ಪ್ರಯತ್ನಗಳಿರುತ್ತದೆ ಎಂಬುದನ್ನು ಜ್ಞಾಪಕ ದಲ್ಲಿಟ್ಟು ಕೊಳ್ಳಿ.. ಈ ವಿಷಮಯ ಜಗತ್ತಿನಲ್ಲಿ ಸಾವಯವ ಕೃಷಿಕರ ಕೃಷಿ ಉತ್ಪನ್ನ ಗಳನ್ನು ಬೆಲೆ ತುಸು ಹೆಚ್ಚಾದರೂ ಕೊಂಡು ಬಳಸಿ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಕೋರುತ್ತಿದ್ದೇನೆ.

ಉಪ್ಪಿನಕಾಯಿ ಮಾಡಲು ಎಂದಿನ‌ ಮಾವಿನ ಕಾಯಿ, ಲಿಂಬೆಕಾಯಿ, ದುಡ್ಲೆ ಕಾಯಿ, ಕಂಚಿಕಾಯಿಯಂತಹ ಹುಳಿ ಕಾಯಿಗಳನ್ನ ಬಳಸಿ.. ಈ ಹಲಸಿನ ಹಣ್ಣು , ಕಿತ್ತಳೆ ಹಣ್ಣು , ಟೊಮ್ಯಾಟೊ, ಬೆಂಡೆ ಕಾಯಿ, ತೊಂಡೆ ಕಾಯಿಯಂತಹ ಹಣ್ಣು ತರಕಾರಿಯನ್ನ ಉಪ್ಪಿನಕಾಯಿ ತಯಾರಿಸಲು ಬಳಸ ಬೇಡಿ.. ಇಂತಹ ಒತ್ತಾಯದ ಪ್ರಯತ್ನಗಳನ್ನು ಇನ್ನಷ್ಟು ಕೃತಕ ರಾಸಾಯನಿಕ ಹಾಕಿಯೇ ಮಾಡಬೇಕಾಗುತ್ತದೆ.. ಇಂತಹ ಹೊಸ ರುಚಿ ಪ್ರಯತ್ನವನ್ನ ನಾವುಗಳು ದೂರದಿಂದ ನೋಡಿ ಸುಮ್ಮನಿರುವುದು ನಮ್ಮ ಆರೋಗ್ಯ ಮತ್ತು ಜಿಹ್ವೆಗೆ ಒಳ್ಳೆಯದು ಅಂತನ್ನಿಸುತ್ತದೆ. ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಬೇಡ ಎಂದು ನನ್ನ ಸಲಹೆ.

Advertisement
ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

7 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

8 hours ago

ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ

ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…

9 hours ago

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…

9 hours ago

ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು | ವಾಹನ ಸವಾರರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…

9 hours ago

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು

ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…

9 hours ago